Saturday, October 31, 2020

ಸ್ವರಚಿತ ಕವನ ೩೧/೧೦/೨೦೨೦

 ಕವನದ ಶೀರ್ಷಿಕೆ

*ಸತಿಯೇ ಸಂಗಾತಿ*


ಬಾಳ ಬೆಳಗಲು ಬಂದವಳೆ

ಭವ್ಯ ಭವಿಷ್ಯದಿ ನಿಂದವಳೆ

ಕಂಗಳಲಿ ಪ್ರೀತಿ ತಂದವಳೆ

ಸತಿಯೇ ಸಂಗಾತಿಯಾದವಳೆ

ಪತಿಯೇ ಪರದೈವೆಂದವಳೆ 

ಹಿರಿ-ಕಿರಿಯರೊಡನೆ ಬಾಳಿದವಳೆ


ಹೌದು ಗೆಳತಿ ನನ್ನ ಯೋಗಕ್ಷೇಮ ನೀನಾದೆ

ನಿನ್ನ ತವರ ಮರೆತು ಬಾಳಿನ ನೌಕೆ ನೀನಾದೆ

ಸವಿ ಮಾತಲಿ ಮನಗೆದ್ದು ಎಲ್ಲರಲಿ ನೀನಾದೆ

ನೆರೆ ಮನೆಯ ಸುಖ ದುಃಖಕೆ ಸಹಕಾರ ನೀನಾದೆ

ಮಕ್ಕಳ ಏಳಿಗೆಗಾಗಿ ಮಿಡಿದ ತುಡಿತ ನೀನಾದೆ

ನನ್ನ ಬಂಧು ಬಾಂಧವರಿಗೆ ಎಲ್ಲಾ ನೀನಾದೆ


ಬಡತನದಲಿ ನೀತಿಯ ಬಿಡದೆ ನೀ ಪಾಲಿಸಿದೆ

ಮಕ್ಕಳು ಸರಿದಾರಿಗೆ ಸಾಗಲು ನೀ ನಿಯಮ ಪಾಲಿಸಿದೆ

ನಮ್ಮ ತಂದೆ ತಾಯಿಯರ ಮಾತನು ನೀ ಪಾಲಿಸಿದೆ

ನಮ್ಮ ಅಕ್ಕ ತಂಗಿಯರ ಆಣತಿಯನು ನೀ ಪಾಲಿಸಿದೆ

ನಮ್ಮ ಅಣ್ಣ ತಮ್ಮಂದಿರ ಆಜ್ಞೆಯನು ನೀ ಪಾಲಿಸಿದೆ

ನನ್ನ ಸತಿಯಾಗಿ ಬಂದು ಸತಿಧರ್ಮವ ನೀ ಪಾಲಿಸಿದೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ


*ಬರಹಗಾರರ ಬಳಗ ರಾಜ್ಯ ಘಟಕ* 

         *ಹೂವಿನಹಡಗಲಿ*

               ✍️✍️

       *ಕವಿತಾ ಸಪ್ತಾಹ* 

              🙏🙏

 *ಕವನದ ಶೀರ್ಷಿಕೆ

*ಸತಿಯೇ ಸಂಗಾತಿ*


ಬಾಳ ಬೆಳಗಲು ಬಂದವಳೆ

ಭವ್ಯ ಭವಿಷ್ಯದಿ ನಿಂದವಳೆ

ಕಂಗಳಲಿ ಪ್ರೀತಿ ತಂದವಳೆ

ಸತಿಯೇ ಸಂಗಾತಿಯಾದವಳೆ

ಪತಿಯೇ ಪರದೈವೆಂದವಳೆ 

ಹಿರಿ-ಕಿರಿಯರೊಡನೆ ಬಾಳಿದವಳೆ


ಹೌದು ಗೆಳತಿ ನನ್ನ ಯೋಗಕ್ಷೇಮ ನೀನಾದೆ

ನಿನ್ನ ತವರ ಮರೆತು ಬಾಳಿನ ನೌಕೆ ನೀನಾದೆ

ಸವಿ ಮಾತಲಿ ಮನಗೆದ್ದು ಎಲ್ಲರಲಿ ನೀನಾದೆ

ನೆರೆ ಮನೆಯ ಸುಖ ದುಃಖಕೆ ಸಹಕಾರ ನೀನಾದೆ

ಮಕ್ಕಳ ಏಳಿಗೆಗಾಗಿ ಮಿಡಿದ ತುಡಿತ ನೀನಾದೆ

ನನ್ನ ಬಂಧು ಬಾಂಧವರಿಗೆ ಎಲ್ಲಾ ನೀನಾದೆ


ಬಡತನದಲಿ ನೀತಿಯ ಬಿಡದೆ ನೀ ಪಾಲಿಸಿದೆ

ಮಕ್ಕಳು ಸರಿದಾರಿಗೆ ಸಾಗಲು ನೀ ನಿಯಮ ಪಾಲಿಸಿದೆ

ನಮ್ಮ ತಂದೆ ತಾಯಿಯರ ಮಾತನು ನೀ ಪಾಲಿಸಿದೆ

ನಮ್ಮ ಅಕ್ಕ ತಂಗಿಯರ ಆಣತಿಯನು ನೀ ಪಾಲಿಸಿದೆ

ನಮ್ಮ ಅಣ್ಣ ತಮ್ಮಂದಿರ ಆಜ್ಞೆಯನು ನೀ ಪಾಲಿಸಿದೆ

ನನ್ನ ಸತಿಯಾಗಿ ಬಂದು ಸತಿಧರ್ಮವ ನೀ ಪಾಲಿಸಿದೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ ಗೋಷ್ಠಿ* 

ದಿನಾಂಕ-೩೧.೧೦.೨೦೨೦,ಶನಿವಾರ

ನಿರ್ವಹಣೆ- *ಶ್ರೀ ಹೆಚ್ ರಾಠೋಡ್* 

ವಿಷಯ- *ಸತಿಧರ್ಮ,ಪ್ರಕಾರ- ಅಂತ್ಯಪ್ರಾಸ* 

ಆರು ಸಾಲಿನ ಮೂರು ಅಥವಾ ನಾಲ್ಕು ಪದ್ಯ ಬರೆಯಿರಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 

🙏 *ಮಧುನಾಯ್ಕ.ಲಂಬಾಣಿ* 

      *ಬ.ಬ.ರಾ.ಘ.ಹೂ.ಹಡಗಲಿ*

No comments:

Post a Comment

Videos