Thursday, October 1, 2020

ಸ್ವರಚಿತ ಕವನ ೦೧/೧೦/೨೦೨೦

 ಕವನದ ಶೀರ್ಷಿಕೆ

*ನಮ್ಮ ಹಿರಿಯರು*


ಹಿರಿಯರು ಹಿತವನ್ನು ಬಯಸುವ ಜೀವಗಳು

ಹಿರಿಯ ಮರವು ನೂರಾರು ಪ್ರಾಣಿ ಪಕ್ಷಿಗಳಿಗೆ

ನೆರಳನ್ನು ಕೊಡುವಂತೆ ಹಿತವಚನಗಳಿಂದ

ಸರಿದಾರಿಗೆ ತರಲು ಪ್ರಯತ್ನಿಸುವ ಸಲಹೆಗಾರರು


ಯಾವ ತಂದೆ ತಾಯಿಯೂ ಮಕ್ಕಳಿಗೆ

ಜೀವನದಲ್ಲಿ ಕೇಡನ್ನು ಬಯಸರು

ಯುವಜನತೆ ಅದನ್ನರಿಯದೆ ಅಲಕ್ಷಿಸಿ

ಅವರ ಭಾವನೆಗೆ ಬೆಲೆ ನೀಡದಿರುವರು


ತಮ್ಮ ಜೀವನದಲ್ಲಿ ಆದ ಅನುಭವಗಳನ್ನು

ಇಮ್ಮಡಿ ಕಷ್ಟಗಳನ್ನು ತಮ್ಮ ಮಕ್ಕಳು

ಸುಮ್ಮನೆ ಕಷ್ಟಕ್ಕೆ ಸಿಲುಕಿ ನರಳದಿರಲು

ಮಮತೆಯ ಕಾಳಜಿಗೆ ವ್ಯಕ್ತಪಡಿಸುವರು


ಕಣ್ಣೆದುರಿನಲ್ಲಿ ಮಗ-ಮಗಳು ದುಃಖಪಡದಿರಲು

ಚಾಣಾಕ್ಷತೆಯಿಂದ ಹೇಗೆ ಎದುರಿಸಬೇಕೆಂದು

ಕ್ಷಣ ಕ್ಷಣಕ್ಕೂ ಸಲಹೆ ನೀಡುತ್ತ ತಿದ್ದುವರು ಜೀವದ

ಕಣಕಣದಲ್ಲೂ ಒಳಿತನು ಬಯಸುವರು ನಮಗಾಗಿ


ಹಿರಿಯರಿಲ್ಲದ ಮನೆ ಇಲ್ಲ ಗುರು ಇಲ್ಲದ ಮಠವಿಲ್ಲ

ಗುರು ಹಿರಿಯರ ಮಾತನ್ನು ಪಾಲಿಸುತ ಮೌಲ್ಯಗಳ

ಮರೆಯದೆ ಪರಮ ಶ್ರೇಷ್ಠ ನುಡಿಗಳ ಕೇಳುತ

ಅರಿತು ಬಾಳುತ ಅಂದದ ಜೀವನ ಸಾಗಿಸೋಣ 


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


🙏 *೧೭೬ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೦೧.೧೦.೨೦೨೦* 


🌸 *ವಾರ-ಗುರುವಾರ* 


🌷 *ವಿಷಯ-ನಮ್ಮ ಹಿರಿಯರು* 


🌻 *ನಿರ್ವಹಣೆ-ಶ್ರೀ ಆನಂದಕುಮಾರ್ ಯಾಧವ್* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ 


೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*






No comments:

Post a Comment

Videos