Monday, October 5, 2020

ಸ್ವರಚಿತ ಕವನ 05-10-2020

 ಕವನದ ಶೀರ್ಷಿಕೆ

*ಭ್ರಷ್ಟಾಚಾರದಲಿ ಬಿಳದಂತೆ ಉಳಿಸಿ*


ನಡೆಯುತ್ತಿದೆ ವಂಚನೆ ಎಲ್ಲಾತರದಿಂದ

ಮನುಜ ಮನುಜರ ನಡುವೆ ‌ಸಂಬಂಧ

ಗಾಳಿಗೆ ತೂರಿ ಸಂಪತ್ತಿನ ಆಸೆಯಿಂದ

ಬೇಗ ಶ್ರೀಮಂತರಾಗುವ ಆತುರದಿಂದ


ಮೈಮುರಿದು ದುಡಿಯದೆ ಸುಮ್ಮನೆ ಬರಲಿ

ಕಂತೆ ಕಂತೆ ನೋಟುಗಳು ಎಂಬ ಭ್ರಮೆಯಲಿ

ತಮ್ಮ ಅಧಿಕಾರವನು ದುರ್ಬಳಕೆ ಮಾಡುತ್ತಲೇ

ನಡೆಯುವರು ಹೀಗೆ ಕಾನೂನು ಮುರಿಯುತ್ತಲೇ


ಬ್ಯಾಂಕಿನ ಅಧಿಕಾರಿಯ ಸೋಗಿನಲ್ಲಿ ಕರೆ ಮಾಡಿ

ಒಡೆಯುವರು ಅಮಾಯಕ ಜನರಲ್ಲಿನ ದುಡ್ಡು

ಲಾಟರಿ ಬಂದಿದೆ ನಿಮ್ಮ ನಂಬರಗೆ ನೀವು ಕೊಡಿ

ಇಂತಿಷ್ಟು ಹಣ ಎಂದು ಎಲ್ಲವ ದೋಚಿಕೊಂಡು


ಪೋನನು ಎತ್ತದೆ ಸತಾಯಿಸುವರು ಜನಗಳನು

ನಂಬದಿರಿ ಉಚಿತ ಸಿಗುವ ಉಡುಗೊರೆಗಳನು

ದುಷ್ಟರ ಮಾತಿನ ಬಲೆಯಲ್ಲಿ ಬಿದ್ದವರು ನಡೆದುದನ್ನು

ತಿಳಿಸಿ ಭ್ರಷ್ಟಾಚಾರದಲಿ ಬೀಳದಂತೆ ಉಳಿಸಿ ಜನರನ್ನು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ










No comments:

Post a Comment

Videos