Thursday, October 29, 2020

ಸ್ವರಚಿತ ಕವನ ೨೯/೧೦/೨೦೨೦

 ಕವನದ ಶೀರ್ಷಿಕೆ

*ಅಶಾಶ್ವತ ಸಂಪತ್ತು*

(ಹಾಯ್ಕು ಪ್ರಕಾರ)


ಮನುಷ್ಯ ತಾನು 

ಗಳಿಸಿದ ಸಂಪತ್ತು

ಆಸ್ತಿ ಅಂತಸ್ತು


ಮಕ್ಕಳಿಗಾಗಿ

ಇರಲೆಂದು ಗಳಿಸಿ

ಇಡುವವರೇ


ಎಲ್ಲರ ಸುಖ

ಬಯಸಿದ ಜೀವಕ್ಕೆ

ಆಸರೆ ಬೇಕು


ಕೊನೆಗಾಲಕ್ಕೆ

ವೃದ್ಧಾಶ್ರಮದೆಡೆಗೆ

ಕಳುಹಿದರೆ


ಜೀವನ ಪೂರ್ತಿ

ಎಷ್ಟೆಲ್ಲ ದುಡಿದರೂ

ನಮಗಾಗದು


ಈ ಅಶಾಶ್ವತ

ಸಂಪತ್ತಿನ ವ್ಯಾಮೋಹ

ತೊರೆದು ಬಾಳಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ



*ಹಾಯ್ಕು ರಚನೆ*


೧.ಮೂರು ಸಾಲಿನ ಹಾಯ್ಕು


೨.ಮೊದಲ ಸಾಲು ೫ ಅಕ್ಷರ

    ಎರಡನೇ ಸಾಲು ೭ ಅಕ್ಷರ

    ಮೂರನೇ ಸಾಕು ೫ ಅಕ್ಷರ


೩.ಐದು ಅಥವಾ ಆರು ಹಾಯ್ಕು ಬರೆಯಬೇಕು


೪.ಸಮಯ ಮುಂಜಾನೆ ಎಂಟು ಗಂಟೆಯಿಂದ ಸಂಜೆ ಐದು ಗಂಟೆಯೊಳಗೆ


೫.ಗೊಇಷ್ಠಿಯ ಸಮಯದಲ್ಲಿ ಬೇರೆ ಏನನ್ನೂ ಹಾಕುವ ಹಾಗಿಲ್ಲ


೬.ವಿಷಯಕ್ಕೆ ತಕ್ಕಂತೆ ಹಾಯ್ಕು ಸಾಗಬೇಕು


ಬನ್ನಿ


ಬರೆಯೋಣ

ಬರೆಸೋಣ

ಕಲಿಯೋಣ

ಕಲಿಸೋಣ


🙏ಮಧುನಾಯ್ಕ.ಎಲ್

ಬ.ಬ.ರಾ.ಘ.ಹೂ.ಹಡಗಲಿ


*ಹಾಯ್ಕು ಸಾಹಿತ್ಯದ ಸಂಕ್ಷಿಪ್ತ ಪರಿಚಯ*

₹₹₹₹₹₹₹₹₹₹₹₹₹₹₹₹₹₹₹₹₹


ನನ್ನ ನೆಚ್ಚಿನ ಕವಿ ಮನಸ್ಸುಗಳಿಗೆ ಇದರ ಅರ್ಪಣೆ...‌........


ಈ ಸಾಹಿತ್ಯವನ್ನು ಪರಿಚಯಿಸುವ ಮುನ್ನ *ಸಾಹಿತ್ಯ ಪ್ರೇಮಿಗಳ ಬಳಗವೆಂಬ ವ್ಯಾಟ್ಸಪ್* ಗುಂಪನ್ನು ಸ್ಮರಿಸುವೆ..‌‌ಅಲ್ಲಿ ಇದರ ಬಗ್ಗೆ *ಡಾ//ಮಲ್ಲಿಕಾರ್ಜುನ ತಳವಾರ* ಸರ್ ಮುನ್ನುಡಿಯ ರೂಪದಲ್ಲಿರುವ ಅವರು ಸಂಗ್ರಹಿಸಿದ ವಿಷಯವನ್ನು ಪ್ರಾಸ್ತಾಪಿಸಿದರು ಅದು ನನಗೆ ಆಕರ್ಷಣಿಯವಾಗಿ ಕಂಡಿತು.ಆಗ ಈ ಹಾಯ್ಕು ನ ಬಗ್ಗೆ *ಕೆ.ಬಾರವಲಿ** ಗುರುಗಳಿಗೆ ನಾನು ಮೆಸೇಜ್ ಹಾಕಿದಾಗ ಆ ಬೆಂಕಿಗೆ ಅವರು ತುಪ್ಪ ಸುರಿದರು......ತದ ನಂತರ ಇದನ್ನು ಮಧು ಸರ್ ಗೆ ತಿಳಿಸಿದಾಗ ಅವರು ಖುಷಿಯಿಂದ ಸರ್ ಇದರ ಬಗ್ಗೆ ನಮ್ಮ ಬರಹಗಾರರ ಬಳಗದವರಿಗೆ ಹಂಚುವ ಕೆಲಸ ಮಾಡೊಣ ಅಂತಾ ಒಪ್ಪಿಗೆ ಸೂಚಿಸಿದರು.ತತ್ಕ್ಷಣ ನಾನು ಇದರ ಬಗ್ಗೆ ತಡಕಾಡಿದಾಗ ಬಾರವಲಿ ಸರ್ ರವರು ಅಂತರ್ಜಾಲ ಜಾಲಾಡಿ ಅಲ್ಲಿದ್ದ ಶ್ರೀ. ರಾಘವೇಂದ್ರ ಜೋಷಿಯವರ ಬ್ಲಾಗ್ ನಲ್ಲಿನ ಕೇಲವು ವಿಷಯಗಳನ್ನು ನನಗೆ ಹಂಚಿದರು.ಅದನ್ನು ನಾನು.ಓದಿ, ಆರಿಸಿ,ಬೆರೆಸಿ, ಸೇರಿಸಿ ನಿಮ್ಮಗಳಿಗೆ ಉಣಬಡಿಸಲು ತಂದಿರುವೆ.


ಈ ವಿಷಯದಲ್ಲಿ ನಾನೇನು *ಎಲ್ಲಾ ಬಲ್ಲವನಲ್ಲ* ಕಲಿಕಾರ್ಥಿ ಅಷ್ಟೇ ........ ಜೋತೆಜೋತೆಯಾಗಿ ಎಲ್ಲರೂ ಕಲಿಯೋಣ.



ಈಗ ವಿಷಯದ ಕಡೆ ಗಮನಹರಿಸೋಣ......


ಕನ್ನಡ ವಾಗ್ದೇವಿಯ ಭಂಡಾರವನ್ನೊಮ್ಮೆ ಅವಲೋಕಿಸಿದಾಗ ಹಲವಾರು ವಿಸ್ಮಯಗಳು ಸಹೃದಯ. ಓದುಗರನ್ನು ಜಿಜ್ಞಾಸೆಗೆ ಹಚ್ಚುತ್ತವೆ. ಅರ್ವಾಚೀನ ಸಾಹಿತ್ಯದ ಮೇಲೆ ಸಂಸ್ಕೃತ ಭಾಷೆಯ ಪ್ರಭಾವವಿದ್ದಂತೆ ಆಧುನಿಕ ಸಾಹಿತ್ಯದ ಮೇಲೆ ಆಂಗ್ಲ ಭಾಷೆಯ ಪ್ರಭಾವವಿರುವುದನ್ನು ಕಾಣುತ್ತೇವೆ. ಅದರಲ್ಲಿ ಜಪಾನಿನ ಕಾವ್ಯ ಕಲೆ 'ಹಾಯ್ಕು' ಕೂಡ ಒಂದು. 

    ಹಾಯ್ಕುನ್ನು ಮೊದಲು ಸಾರಸ್ವತ ಅಂಗಳದಲ್ಲಿ ಪರಿಚಯಿಸಿದವರೆಂದರೆ **ಭಾಶೋ**ಎಂಬ ಪ್ರಸಿದ್ಧ ಜಪಾನಿ ಕವಿ. 


*ಹಾಯ್ಕು ಅಂದರೇನು?*


ಹಾಯ್ಕು ಅನ್ನುವುದು ಗದ್ಯವಾ?ಪದ್ಯವಾ? ಅಥವಾ ಇನ್ನೇನಾದರೂ ಇದರೊಳಗೆ ಇದೇಯಾ? ಯಾವ ಸಾಹಿತಿಕ ಅಂಶಗಳನ್ನು ಹಾಯ್ಕು ಅಂತಾ ಗುರುತಿಸಬಹುದು. ಇಂತಹ ನೂರಾರು ಪ್ರಶ್ನೆಗಳಿಗೆ ಸರಳ ರೀತಿಯಲ್ಲಿ ವಿವರಿಸಲು ಪ್ರಯತ್ನಿಸುವೆ.


ಹಾಗೆ ನೋಡಿದರೆ *ಹಾಯ್ಕು* ಅಪರಿಚಿತ ಸಾಹಿತ್ಯ ಪ್ರಕಾರ ವಾಗಿದೆ. ನಮಗೆ ದ್ವಿಪದಿ,ತ್ರಿಪದಿ,ಷಟ್ಪದಿ, ಸಾಂಗತ್ಯ, ರಗಳೆಗಳು ಹೇಂಗೆ ಪರಿಚಿತ ಸಾಹಿತ್ಯಗಳೋ...ಹಾಗೇ ಇದು ಒಂದು.ಆದರೆ ಅಪರಿಚಿತ‌.


ಇದಕ್ಕೂ ತನ್ನದೆ ಆದ ಕೆಲವು ಸಿಂಪಲ್ ನಿಯಮಗಳುಂಟು.



*ನಿಯಮಗಳು*

₹₹₹₹₹₹₹₹₹₹₹₹


# ಇದು ಜಪಾನಿನ ಕಾವ್ಯ ಕಲೆ


#ಇದು ತುಂಬಾ ಸಂಕಿರ್ಣವಾದ ಸಾಹಿತ್ಯದ ಪ್ರಕಾರ.


# ಲೌಕಿಕ ಗಣಿತದ ಲೆಕ್ಕಾಚಾರದಂತೆ ಇದು ಮೂರು ಸಾಲುಗಳನ್ನು ಹೊಂದಿರುತ್ತದೆ‌. ಒಂದನೆಯ ಮತ್ತು ಮೂರನೇ ಸಾಲುಗಳಲ್ಲಿ ಐದು ಅಕ್ಷರಗಳು ಎರಡನೆಯ ಸಾಲಿನಲ್ಲಿ ಏಳು ಅಕ್ಷರಗಳು ಬರಬೇಕು. ಇದೊಂದು ಹದಿನೇಳು ಅಕ್ಷರಗಳ ಕಾವ್ಯಮಾಲೆ. 


 ಇದೊಂದು ಸರಳ ನಿಬಂಧನೆ. ಆದರೆ ಈ ನಿಬಂಧನೆಯ ಆಂತರ್ಯದಲ್ಲಿ ಅಕ್ಷರಗಳ ಔಚಿತ್ಯ, ವ್ಯಾಕರಣದ ಬಂಧ ಹಾಗೂ ಕಾವ್ಯದ ಧ್ವನಿ ಮುಖ್ಯವಾಗಿ ಇರಲೇಬೇಕು.


ಉದಾ : (ಖಂಡು ಬಂಜಾರರ ರಚನೆಗಳು)


             ನಾನು ಶಿಕ್ಷಕ (೫)

             ಜ್ಞಾನದ ರಕ್ಷಕನೇ (೭)

             ಭಕ್ಷಕನಲ್ಲ (೫)      

      

           ಒಟ್ಟು.ಅಕ್ಷರಗಳು -೧೭ 



      ನನ್ನ ಲಂಬಾಣಿ

      ಬಂಗಾರದ ಭರಣಿ

      ಸೌಂದರ್ಯ ಗಣಿ



     ಕೊರೋನ ಬಂದ್ರೆ

     ಕಾಯವು ನಿರ್ಗಮನ

     ಇರೋದು ಕರ್ಮ


ಹೀಗೆ *ಕಿರಿದರಲ್ಲಿ ಹಿರಿದು ಅಡಗಿರಬೇಕು. ಕನ್ನಡಿಯಲ್ಲಿ ಆನೆಯನ್ನು ತೋರಿಸುವ ಕೆಲಸ* ಹಾಯ್ಕು ಮಾಡುತ್ತದೆ. ಕೆಲವೇ ಪದಗಳಲ್ಲಿ ಕವಿ ತಾನು ಅನುಭವಿಸಿದ ಜೀವನಾನುಭವಗಳನ್ನು ಸುಂದರವಾಗಿ ಕಟ್ಟಿಕೊಡುವುದು ಅತ್ಯಂತ ಪ್ರಯಾಸದ ಕೆಲಸ. ಈ ಪ್ರಯಾಸ ದೈಹಿಕತೆಯದಲ್ಲ, ಮಾನಸಿಕತೆಯದು. ಇದೊಂದು *ಜಾಣ್ಮೆಗೆ ಓರೆಗಚ್ಚುವ ಸೃಜನಶೀಲ ಕುಸುರಿ ಕೆಲಸವಾಗಿದೆ*. ಈ ಹಾಯ್ಕುಗಳೆಲ್ಲವೂ *'ಹಿಡಿದರೆ ಹಿಡಿ ತುಂಬ, ಬಿಟ್ಟರೆ ಜಗದ ತುಂಬ'* ಎನ್ನುವಂತೆ ಅನಾವರಣಗೊಳ್ಳಬೇಕು.


ಉದಾ :ಹುಳಿಯಾರ್ ಷೆಬ್ಬೀರ್ ಸರ್ ರವರ ಆಯ್ದ ಕೇಲವು ಹಾಯ್ಕುಗಳು...


"ವೈರಾಗ್ಯದಾಸೆ 

ಬುದ್ಧನ ನಿದಿರೆಯ 

ಕದ್ದಿತು ನೋಡಿ..!"



ಒಣ ಮರವು 

ಚಿಗುರುವೆನೆಂದು 

ಶಾಸ್ತ್ರ ಕೇಳಿತು...!" 


"ವಿರಹವನ್ನು 

ಮಿಲನದ ಮಿತ್ರನೇ 

ಅನ್ನಬಹುದು...!" 


"ಬೆಂದರೆ ಬೇಂದ್ರೆ 

ದೇಶವ ಸುತ್ತಿದರೆ 

ಕಾರಂತರಯ್ಯ....!" 


"ಹಟವ ಬಿಟ್ಟು 

ಚಟವನ್ನು ತೊರೆದು 

ನೀವು ನೀವಾಗಿ..!" 


"ಬುರ್ಖಾದೊಳಗೆ 

ಅವಿತುಕೊಂಡಿರುವ 

ಸಜೀವಿ ತಾಳ್ಮೆ...!" 


"ಭೂಮಿ ತಾಯಿಗೂ 

ಚುಂಬಿಸುವ ಬದ್ಧತೆ 

ನೇಗಿಲಿನಲ್ಲೂ...!"


ಹೀಗೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ತಾತ್ವಿಕ.... ನೆಲೆಯಲೆಲ್ಲ ಹಾಯ್ಕುಗಳ ಕಬಂಧ ಬಾಹುಗಳನ್ನು ಗುರುತಿಸಬಹದು.


ಅಯ್ಯೋ ಎಷ್ಟು ಸರಳವಾಗಿದೆಯಲ್ಲ ? ಇದರಲ್ಲೆನು ವಿಶೇಷ ಲೆಕ್ಕಾಚಾರ ಅನ್ನುವಿರಾ? ಹೌದು, ಅದು ಕೆವಲ 17 ಅಕ್ಷರಗಳ ಲೆಕ್ಕಾಚಾರವಲ್ಲ.ಅದು 17 ಸಿಲೇಬಲ್(ಪದಗಳ ಉಚ್ಚಾರಣೆ ಗಳ)ಗಳ ಲೆಕ್ಕಾಚಾರ.


ಹಾಯ್ಕು ಗಳಲ್ಲಿ ಸಿಲೇಬಲ್ ತುಂಬಾ ಮುಖ್ಯ.ಇದು ಜಪಾನಿ ಭಾಷೆಯಲ್ಲಿ ಸುಲಭವಿರಬಹುದು ಆದರೆ ಕನ್ನಡ ಭಾಷೆಯ ಸೂಗಸು ಬೇರೆ.ಇಲ್ಲಿ ಯಾವುದೇ *ಸೈಲೆಂಟ್* ಅಕ್ಷರಗಳಿಲ್ಲ ಹೀಗಾಗಿ ಕನ್ನಡದಲ್ಲಿ ಸರಿಯಾಗಿ 17 ಅಕ್ಷರಗಳಲ್ಲಿ ನಮ್ಮ ಭಾವನೆಗಳನ್ನು ತುಂಬಿ ಹಾಯ್ಕುವೊಂದನ್ನು ಹೆಣೆಯುವುದು ತುಂಬಾ ಸವಾಲಿನ ಕೆಲಸ.


ಇರಲಿ..........ಹಾಡ್ತ ಹಾಡ್ತ ರಾಗ.........😁😁😁😁😁


ಇಲ್ಲಿ *ಸಿಲೇಬಲ್* ಲೆಕ್ಕಾಚಾರ ಹ್ಯಾಗೆ ಮಾಡುತ್ತಾರೆ ಗಮನಿಸೋಣ......


ಇಂಗ್ಲಿಷ್ ನ *LOVE* ಅನ್ನುವ ಪದ 4 ಅಕ್ಷರಗಳನ್ನು ಹೊಂದಿದೆ. ಇದು ಕನ್ನಡದ ಎರಡಕ್ಷರದ *ಲವ್* ಆಗಿದೆ.ಆದರೆ ಇದನ್ನು ಉಚ್ಚರಿಸುವಾಗ *ಲೌ* ಅನ್ನಬಹುದು. ಹೀಗಾಗಿ ಲೆಕ್ಕಾಚಾರದಲ್ಲಿ ಇದು *ಒಂದು ಸಿಲೇಬಲ್* ಅಥವಾ ಒಂದೇ ಅಕ್ಷರ ಅಂತಲೇ ಗಣನೆಗೆ ತೆಗೆದುಕೊಳ್ಳಬೇಕು.


ಅದೇ ರೀತಿ *ಕಣ್* ಅನ್ನುವ ಪದವನ್ನು ಒಂದೇ ಸಿಲೇಬಲ್ ಅಂತಾ ಲೆಕ್ಕಾಚಾರ ಹಾಕಬೇಕು. ಅದನ್ನೇ *ಕಣ್ಣು* ಅಂತಾ ಬರೆದರೆ ಅದು ಎರಡು ಸಿಲೇಬಲ್ (ಅಕ್ಷರ) ಅಂತಾ ಇಲ್ಲಿ ಲೆಕ್ಕ ಹಾಕಬೇಕು.


ಇನ್ನೂ ದೀರ್ಘಕ್ಷರಗಳು,.ಅನುಸ್ವಾರ, ವಿಸರ್ಗ,ಒತ್ತಕ್ಷರಗಳು,ಲೇಖನ ಚಿಹ್ನೆಗಳನ್ನು ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳುವಂತದಲ್ಲ.


ಹಾಗದರೆ ಎಂಥವುಗಳನ್ನು *ಹಾಯ್ಕು* ಗಳೆನ್ನಬೇಕು.


ನಮಗೆ ಸಿಕ್ಕ ಮಾಹಿತಿ ಪ್ರಕಾರ......ನಿಸರ್ಗದಲ್ಲಿ ನಡೆಯುವ ಘಟನೆಗಳು ಅಥವಾ ಬೆಳವಣಿಗೆ ಹೊಂದಿರುವ ವಿಷಯಗಳಿರಬೇಕು.ಇಲ್ಲಿ ನಮ್ಮ ಪಾತ್ರ ಇರಕೊಡದು. ಅದು ಹೊರಗಿನ ಯಾವುದೇ force ಇಲ್ಲದೇ ಸ್ವಯಂಪ್ರೇರಿತವಾಗಿ ನಡೆಯುವ ಬೆಳವಣಿಗೆಯಾಗಿರಬೇಕು. ಇಲ್ಲಿ ಕವಿ ಘಟನೆಗಳನ್ನು ದೂರ ನಿಂತು ದಾಖಲಿಸಬೇಕು.ತಾನೇ ಅದರಲ್ಲಿ ಇಳಿಯಬಾರದು.


ಇದು ಬರೀ ಕವಿತೆಯಾಗದೆ ಒಂದು ಸ್ತಬ್ಧಚಿತ್ರವಾಗಿರಬೇಕು. ಘಟನೆಗಳನ್ನುಮಾನವೀಯ ಅಂಶಗಳ ಚೌಕಟ್ಟಿನಲ್ಲಿ ಚಿತ್ರಿಕರಿಸುವಂತಿರಬೇಕು.


ಇಲ್ಲಿ ಒಂದು ಘಟನೆ,ಬೆಳವಣಿಗೆಗಳನ್ನೆ ಚಿತ್ರಕರಿಸುವುದಲ್ಲ.ಒಂದು ರೂಪಕದ ಹೋಲಿಕೆಯನ್ನು ಸಹ ಮಾಡಬಹುದು.

     

            (ಹೋಲಿಕೆಗೆ)

ಉದಾ : ಕತ್ತಲ ಹಾದಿ

              ಪೋರನಿಗೆ ಹಾಡೋಂದೇ

              ಅಪತ್ಭಾಂಧವ



ಇವುಗಳನ್ನು ಓದಿದರೆ ಏನೋ ಒಂಥರಾ ರೋಚಕವೆನಿಸಬೇಕು.ಅದರ ಅನುಭವ ಮಿಂಚೋಡದಂಗಿರಬೇಕು.


ಉದಾ : ಚಡ್ಡಿ ಹೇಗಿದ್ರು

           ಪರವಾಗಿಲ್ಲ ಮಾಸ್ಕ

           ಸರಿ ಇರಬೇಕು

        (ಕೆ.ಬಾರವಲಿ)


ಇವುಗಳು ಹೇಗಿರಬೇಕಂದ್ರೆ...... ಭಾವನೆಗಳನ್ನು ಬೀಸಿ ಒಗೆದಂತಿರಬೇಕು. ಥಟ್ ಅಂತ ಹೊಳೆದದ್ದನ್ನು ಫಟ್ ಅಂತ ಬರೆದು ಚಟಾಪಟ್ ಅರ್ಥವಾಗುವಂತೆ.


ಹಾಗೇ ನಮ್ಮಲ್ಲಿ ಒಂದು ಪ್ರಶ್ನೆ ಮೂಡುವುದು ಸಹಜ.


ಚುಟುಕು ಸಾಹಿತ್ಯಕ್ಕೂ,ಹಾಯ್ಕುಗಳಿಗೂ ವ್ಯತ್ಯಾಸವಿದೆಯೇ ? ಎಂದು.


ಹೌದು

ಇದೆ

 ಚುಟುಕಿನಲ್ಲಿ ಅಕ್ಷರಗಳ,ಸಾಲುಗಳ ನಿಯಮವಿಲ್ಲ.ಇಲ್ಲಿ ಇದೆ ಅಷ್ಟೇ‌. 


ಹಾಗಾದರೆ ಮತ್ತೊಂದು ಪ್ರಶ್ನೆ ಮೂಡಬಹುದು........


ಇದರ ಸಂಕಲನ ಹೇಗೆ ಹೊರ ತರಬಹುದು? ಎಂದು.


ಒಂದು *ಹಾಯ್ಕು* ಸಂಕಲನ(ಪುಟದಲ್ಲಿ ಎರಡರಂತೆ) 140ಹಾಯ್ಕು ಗಳನ್ನು ಹೊಂದಿದ್ದರೆ ಚೆನ್ನ. ಹೆಚ್ಚಿದ್ದರೂ ಪರವಾಗಿಲ್ಲ. ಪ್ರತಿ ಪುಟಗಳಲ್ಲಿ ಆಯಾ ಹಾಯ್ಕು ಗಳಿಗೆ ಸಂಬಂಧಿಸಿದ ರೇಖಾಚಿತ್ರಗಳು ಇದ್ದರೆ ಇನ್ನೂ ಚೆಂದ.


ಹೀಗೆ.......ಹಾಯ್ಕುನ ಬಗ್ಗೆ ಸಿಕ್ಕ ಮಾಹಿತಿ ನಿಮಗಾಗಿ...‌ 


ನಿಮ್ಮ ಪ್ರತಿಕ್ರಿಯೆಗಾಗಿ ಕಾದಿರುವೆ...........??



*ಧನ್ಯವಾದಗಳು*


*ಈ ಲೇಖನದ ಸ್ಪೂರ್ತಿ ದಾತರು*


# ರಾಘವೇಂದ್ರ ಜೋಶಿ

#ಡಾ. ಮಲ್ಲಿನಾಥ ಶಿ. ತಳವಾರ 

#ಹುಳಿಯಾರ್ ಷಬ್ಬಿರ್

#ಕೆ.ಬಾರವಲಿ

#ಮಧುನಾಯ್ಕ.ಲಂಬಾಣಿ



✒️📝 *ಖಂಡು ಬಂಜಾರ*

            *ಸೇವಾನಗರ.ಹರಪನಹಳ್ಳಿ. ಬಳ್ಳಾರಿ*






No comments:

Post a Comment

Videos