ಕವನದ ಶೀರ್ಷಿಕೆ
*ಅತ್ಯಾಚಾರ*
ಹೆಣ್ಣಿನ ಮೇಲೆ ನಿರಂತರ ನಡೆಯುತ್ತಿದೆ
ಕಾಣದ ಕೈವಾಡ ಕಲ್ಪನೆಗೆ ಸಿಗದಂತಾಗಿದೆ
ಸಣ್ಣವರು ದೊಡ್ಡವರೆನ್ನದೆ ಕೈಗೆ ಸಿಕ್ಕವರನು
ಬಣ್ಣದ ಮಾತಿನಿಂದ ಮರುಳು ಮಾಡುವರು
ಹಲವಾರು ಕನಸುಗಳ ಕಟ್ಟಿ ಬಾಳಬೇಕಾದ
ಕೆಲವು ಮಕ್ಕಳು ಬಂಢರ ದಾಳಿಗೆ ಸಿಲುಕಿ
ವಿಲವಿಲನೆ ಒದ್ದಾಡಿ ಪ್ರಾಣ ತ್ಯಾಗ ಮಾಡಿ
ಸಲುಹಿ ಸಾಕಿದವರು ಗೋಳಿಡುವಂತೆ ಮಾಡಿ
ಭಾರತ ದೇಶ ಆದರ್ಶದ ಬೀಡು ಅನಾಚಾರದಂತ
ಖಾರವಾದ ವಿಷಯಗಳಿಂದ ಕೆಟ್ಟೆಸರನು
ತರುವಂತವರ ಬದುಕಿಗೆ ಸಿಗಬೇಕು ಗಲ್ಲು
ನಾರಿಯರ ಶಾಪ ಬಿಡದೆಂದು ಗೊತ್ತಾಗಬೇಕು
ದುಷ್ಟ ಶಕ್ತಿಗಳನ್ನು ಮೂಲೆಗುಂಪು ಮಾಡುವ
ಕಷ್ಟ ಕೊಟ್ಟವರ ವಿರುದ್ಧ ಸಿಡಿದು ಬಿಳುವ
ಶ್ರೇಷ್ಠ ಕಾನೂನು ಜಾರಿಗೆ ತರುವ ಮೂಲಕ
ಶಿಷ್ಟರ ರಕ್ಷಣೆ ಮಾಡಿ ಅತ್ಯಾಚಾರ ತಡೆಯಬೇಕು
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
No comments:
Post a Comment