Saturday, February 6, 2021

ನನ್ನ ಕರ್ತವ್ಯ ಕವನ ಪ್ರಕಟ

 ನನ್ನ ಕರ್ತವ್ಯ ಕವನ ಪ್ರಕಟ



ಸೂತ್ರವಿರದ ಗಾಳಿಪಟ ಕವನ ಮರು ಪ್ರಕಟ

 ಸೂತ್ರವಿರದ ಗಾಳಿಪಟ ಕವನ ಮರು ಪ್ರಕಟ

ದಿನಾಂಕ : ೨೨-೦೧-೨೦೨೧ ರಂದು ಪ್ರಕಟವಾದ ಕವನ



ದುಃಖ ಕಲಿಸುವುದು ಜೀವನ ಪಾಠ ಕವನ

 ಕವನದ ಶೀರ್ಷಿಕೆ

ದುಃಖ ಕಲಿಸುವುದು ಜೀವನ ಪಾಠ


ಸುಖ ಶಾಂತಿ ನೆಮ್ಮದಿ ಮಾನವನ ಬಯಕೆ

ನೋವ ನುಂಗಿ ನಗುವ ಸೂಸಿಹರು ಸಜ್ಜನರು

ಕಷ್ಟ ಸಹಿಷ್ಣುತೆಯ ಪೆಟ್ಟು ತಿಂದು ಬೆಂಕಿಯಲಿ 

ಬೆಂದ ಬಂಗಾರದಿ ಹೊಳೆಯೋ ಅಳಲ ಮರೆತು


ನಿತ್ಯ ದುಡಿ ಸತ್ಯ ನುಡಿ ನೀತಿಯ ಕಲಿಸುವದು

ಬಯಸದೆ ಬರುವ ಅತಿಥಿಗಳಂತೆ ಬಾಳ ಬುತ್ತಿ

ಬಿಚ್ಚಿ ಉಂಡಾಗಲೇ ಅರ್ಥವಾಗುವದು ಒಳ ಆಳ

ತಿಳಿದವಗೆ ತಿಳಿದೀತು ಅವುಗಳ ಮಹಿಮೆ ಅಪಾರ


ಲೋಕ ರೂಢಿಯ ನಡುವೆ ನಡೆವ ಮನುಜ

ಹಾದಿ ತಪ್ಪಲು ನೋಡಿ ನಗುವರು ಹಲವರು

ಎಲ್ಲರೊಳಗೊಂದಾಗಿ ಅತೀ ಆನಂದದಿ ನಕ್ಕು

ನಲಿವುದನು ಮರೆಯದಿರು ನೀ ಎಂದೆಂದೂ


ಸಂಸಾರದ ನೋಗಕ್ಕೆ ಗಂಡ ಹೆಂಡತಿ ಹೆಗಲಿಗೆ

ಹೆಗಲು ಗೊಟ್ಟು ಸಾಗಲು ಸರಸ ವಿರಸಗಳೆಂಬ

ಮಿಶ್ರಣದಿ ಬೆಂದು ಸವಿಜೇನ ಸವಿದಂತೆ ರಸಬಾಳೆ 

ಹಣ್ಣ ಮೆದ್ದಂತೆ ಸುಖಾನುಭವವ ಅನುಭವಿಸು


ಸುಖ ಬಂತೆಂದು ಹಿಗ್ಗದಿರು ದುಃಖಕ್ಕೆ ಕುಗ್ಗದಿರು

ಸುಖ ದುಃಖಗಳನ್ನು ಸಮವಾಗಿ ನೀ ಸ್ವೀಕರಿಸು

ಕನ‌ಸಿನಿರುಳಂತೆ ಕಳೆದು ಹೋಗುವವು ಪಯಣದಿ

ನೆನೆಯುತ್ತಿರು ಸವಿ ನೆನಪಿನ ಜಾಡಲ್ಲಿ ಜೀವನವಿಡೀ



ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ





ಓದುವ ಇಚ್ಛೆ,ಓದಲಾಗುತ್ತಿಲ್ಲ ಕವನ

 ಕವನದ ಶೀರ್ಷಿಕೆ

"ಓದುವ ಇಚ್ಚೆ,ಓದಲಾಗುತ್ತಿಲ್ಲ"


ಚಂಚಲ ಮನ ಚಂಗನೆ ಜಿಗಿಯುತ್ತಿದೆ

ಮರದಿಂದ ಮರಕ್ಕೆ ಮರಕೋತಿ ಆಟ

ಹೊತ್ತಿಗೆ ಹಿಡಿದರೆ ಸಾಕು ನಿದ್ದೆ ಬರುವುದು

ಆಟ ಆಡು ಎನ್ನು ಕುಣಿದು ಕುಪ್ಪಳಿಸುವುದು


ಗೆಳೆಯರೊಂದಿಗೆ ಒಣ ಹರಟೆ ಹೊಡೆಯುತ್ತ

ಕಿಲ ಕಿಲ ನಕ್ಕು ಹೊತ್ತು ಹೋದದ್ದೇ ಗೊತ್ತಿಲ್ಲ

ಟಿವಿ ಪೋನು ನೋಡಲು ಅತೀ ಉತ್ಸಾಹ

ಬರೆಯೋಣ ಬಾ ಎಂದು ಕರೆಯಲು ಮನ ಭಾರ!


ದಿನ ಬೆಳಗಾದರೆ ಶಾಲೆಗೆ ಹೋಗೆಂಬ ಬೈಗುಳ

ಇಂದು ರಜೆ ಇದ್ದರೆ ಚೆನ್ನಾಗಿತ್ತು ಅನ್ನೊ ಬಯಕೆ

ಸಮಯಕ್ಕೆ ಸರಿಯಾಗಿ ಊಟ ನಿದ್ದೆ ಇರಲು

ಬೇಡುವುದಿಲ್ಲ ಇಂದು ಒಂದೂ ಮತ್ತೊಂದನು


ಓದಿ ಜೀವನದಿ ಮುಂದೆ ಬರುವ ಅಗಾಧ ಕನಸು

ಪರಿಶ್ರಮವಿಲ್ಲದೆ ಯಾರೂ ಬಾರರು ಮುಂದೆ!

ತಿಳಿದರೂ ಯಾಕೋ ಒಪ್ಪುತ್ತಿಲ್ಲ ನನ್ನ ಮನವು

ನಾಳೆ ಓದಿದರಾಯ್ತು ಬಿಡು ಅನ್ನೋ ಭಂಡ ಧೈರ್ಯ


ಇಂದು ನಾಳೆಗಳಿಗೆ ಕೊನೆ ಎಂಬುದಿಲ್ಲ ಈಗಾಗಲೆ

ಕಳೆದಿರುವೆ ಹಲವು ದಿನಗಳೆ ಕೆಟ್ಟ ಮೇಲೆ ಯಾರಿಲ್ಲ

ಕಳೆದು ಹೋದ ಸಮಯ ಮತ್ತೆ ಬಾರದು ಗೊತ್ತ

ಜತನಾಗಿ ಅರಿತು ಬಾಳಿದರೆ ಹಸನಾಗುವುದು ಬಾಳ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


ಭೀಕರ ಬರಗಾಲದ ಛಾಯೆ ಕವನ

 


 ಕವನದ ಶೀರ್ಷಿಕೆ

"ಭೀಕರ ಬರಗಾಲದ ಛಾಯೆ"


ಬರಗಾಲ ಬಂದು ಕೂಲಿ-ನಾಲಿ ನೆಲೆಗಾಣದೆ

ಆಗಸದ ಕಡೆ ನೋಡುತ್ತಿರುವನು ಹಸಿವಿನಿಂದ

 ರೈತನ ಗೋಳು ಕೇಳುವವರಿಲ್ಲ ಈ ನಾಡಿನಲ್ಲಿ

ಶ್ರೀಮಂತರ ಸೊಕ್ಕು ಹೆಚ್ಚುತ್ತಿದೆ ಇನ್ನೂ ಇನ್ನೂ..


ದುಡಿದು ನಾಲ್ಕು ಜನಕ್ಕೆ ಅನ್ನ ನೀಡೋ ರೈತ

ಅನ್ನಕ್ಕಾಗಿ ಬೇರೆಯವರಿಗೆ ಕೈ ಒಡ್ಡುವ ಸ್ಥಿತಿ

ಕರುಣೆಯ ತೋರೋ ಮಹಾದೇವ ಕೃಷಿಕನ

ಹೊಟ್ಟೆ ಮೇಲೆ ಹೊಡೆದರೆ ಜಗವೆಲ್ಲ ನಲುಗೀತು


ನ್ಯಾಯ ನೀತಿ ಧರ್ಮ ಉಳಿದಿರುವುದು ಅವನಲ್ಲಿ

ಮೋಸ ವಂಚನೆಯ ತಿಳಿಯದ ಪರಿಶುದ್ಧ ಮನ

ಲೋಕಕ್ಕೆ ಸಲಹೋ ನಾಯಕನ ಬೆನ್ನು ಬಿಡಬ್ಯಾಡ

ನಿನ್ನ ನಂಬಿ ಬೀಜ ಬಿತ್ತಲು ಕಾಯ್ದಾನ ಮಳೆರಾಯ


ಪರುಕಿಸದಿರು ಮಹಾರಾಯ ನೆಚ್ಚಿದವರ ಕಣ್ಣೀರ

ಬರಿಸದಿರು, ಮೋಡ ಮುಸುಕಿ ಮುಗಿಲರಿದು ಇಳೆಗೆ

ಧಾರಕಾರ ಮಳೆಬಂದು, ಕೆರೆ ಹಳ್ಳ ಕೊಳ್ಳ ತುಂಬಿ ರೈತ

ಬೆಳೆ ಬೆಳೆದು ಕೈ ಸೇರಲು ಆನಂದಕ್ಕೆ ಪಾರವೇ ಇಲ್ಲ ದೇವ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


ಶಬ್ಧ ಗಾರುಡಿಗನ ಮೋಡಿ ಕವನ

 ಕವನದ ಶೀರ್ಷಿಕೆ

"ಶಬ್ದ ಗಾರುಡಿಗನ ಮೋಡಿ"


ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು

ಸಾಧನಕೇರಿಯ ಗುಂಟ ಚಿಕ್ಕಂದಿನಲಿ ಅಡ್ಡಾಡಿ

ತಿರುಗಿ ತುಂಟತನದಿ ಪಂಟೆ ಪಂಟೆ ಜಿಗಿದಾಡಿ

ಮನೆಯ ಅಜ್ಜಿ ಅಮ್ಮನ ಸಲುಗೆಯಿಂದ ಬೆಳೆದು 


ಕಾಮನ ಕಟ್ಟೆಯ ಶಾಲೆಯಲಿ ಆಟಪಾಠ ಕಲಿತು

ಊರಿಂದೂರಿಗೆ ಹೋಗಿ ಅನುಭವದ ಗಣಿಯಾಗಿ

ಸಹೋದರ ಸಹೋದರಿಯರ ಪ್ರೀತಿ ವಿಶ್ವಾಸ ಗೆದ್ದು

ಹೆಂಡತಿ ಮಕ್ಕಳ ಅನುಬಂಧದಿ ನೋವ ನುಂಗಿ 


ತಾಯಿ ಶಾರದೆ ಲೋಕ ಮಾತೆಯ ವರಪುತ್ರನೀತ

ಬರೆದುದೆಲ್ಲ ಬಂಗಾರ ಸಿಗಲಿಲ್ಲ ಸಿರಿ ಸಂಪತ್ತು

ಬಡತನದ ಬೇಗೆಯಲ್ಲಿ ಬೆಂದು ನೊಂದ ಬೇಂದ್ರೆ

ಭಾರತಾಂಬೆಯ ಮುಡಿಗೆ ಮುಡಿಸಿದರು ಜ್ಞಾನಪೀಠ 


ವರಕವಿ, ಶಬ್ದ ಗಾರುಡಿಗನ ಮೋಡಿಗೆ ಕನ್ನಡ ನುಡಿ

ಓದುಗರ ನರನಾಡಿಗೆಲ್ಲ ಮೀಟಿ ಹೃನ್ಮಂದಿರ ಸೇರಿ

ನೂರಾರು ವರ್ಷಗಳೇ ಸಂದರಿನ್ನೂ ನೆನಪಿನಂಗಳದಿ

ಸದಾ ರಾರಾಜಿಸುತ್ತಿಹೆ ಕನ್ನಡಿಗರ ಎದೆಯ ಗೂಡಲ್ಲಿ 


ಗರಿ,ನಾದಲೀಲೆ,ನಾಕುತಂತಿ,ಸೂರ್ಯಪಾನ,ನರಬಲಿ, ಸಖಿಗೀತ,ಉಯ್ಯಾಲೆ,ಮೇಘದೂತ,ಅರಳು ಮರಳು,

ಗಂಗಾವತರಣ,ಹಾಡುಪಾಡು,ಕೃಷ್ಣಕುಮಾರಿ,ಶ್ರೀಮಾತಾ

ಹೀಗೆ ಹಲವಾರು ಕೃತಿಗಳು ಜನಮನಸೂರೆಗೊಂಡಿವೆ.


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ




ಲಾಕ್ ಡೌನ್ ಮದುವೆ ಕವನ

 ಕವನದ ಶೀರ್ಷಿಕೆ

"ಲಾಕ್ ಡೌನ್ ಮದುವೆ"


ಸಾವಿರಾರು ಲಗ್ನ ಪತ್ರಿಕೆ ಹಂಚಿ ಪ್ರಭಾವಿ

ರಾಜಕಾರಣಿಗಳ ಕರೆಸಿ ಅದ್ದೂರಿಯಾಗಿ

ಬಟ್ಟೆಗಳ ತೊಟ್ಟು ಮದುವಣಿಗರಾಗಿ ಪುರ

ಜನರ ಮಧ್ಯೆ ನಾವಿಬ್ಬರು ಏರುವೆವು ಹಸೆಮಣೆ


ಎಂದೆಲ್ಲಾ ಮದುವೆಯ ಕಲ್ಪನೆಯ ಕಟ್ಟಿ

ಕನಸ ಕಾಣುತ್ತಿದ್ದ ಯುವಕರೆಲ್ಲರೂ ಇಂದು

ಆದರು ನಿರಾಸೆ ಏಕೆಂದರೆ? ಲಾಕ್ ಡೌನ್

ಎನ್ನೋ ಭೂತ! ಬಿಡದೆ ಕಾಡಿತ್ತು ನಿದ್ದೆಗೆಡಿಸಿ.


ದೇಗುಲದ ಪೂಜಾರಿಯ ಮಂತ್ರ ಘೋಷಗಳ

ನಡುವೆ ಬೆರಳೆಣಿಕೆಯ ನೆಂಟರಿಷ್ಟರ ಮುಂದೆ

ಆಡಂಬರ ವೈಭೋಗದ ಖರ್ಚಿಲ್ಲದೆ ಯಾವ ಸದ್ದು

ಗದ್ದಲಗಳ ಜಂಜಾಟವಿಲ್ಲದೆ ತಾಳಿಯ ಕಟ್ಟಿದರು


ದೂರದ ಬಂಧು-ಬಾಂಧವರು ಬಾರದೆ 

ತಂಗಾಳಿಯ ಚುಮುಚುಮು ಚಳಿಯ ಲೆಕ್ಕಿಸದೆ

ಮುಂಜಾವಿನ ಸೂರ್ಯ ನಡುಬಾನ ಸೇರುವ

ಮುಂಚೆ ನಡದೆ ಬಿಟ್ಟವು ಹಲವು ಮದುವೆಗಳು


ಯಾವ ಆಯರಿ ಉಡುಗೊರೆಗಳಿಲ್ಲದೆ

ಅತ್ಯಾಧುನಿಕ ಧ್ವನಿವರ್ಧಕ ಸಂಗೀತ ಕಲಾ

ತಂಡಗಳ ಹಾಡು ನೃತ್ಯದ ಸಂಭ್ರಮವಿಲ್ಲದೆ

ಸರಳ ಜೀವನ ಪ್ರತೀಕದ ಹೆಗ್ಗುರುತಾಗಿ ಉಳಿದು


ಕಾಲ ಬದಲಾದರೇ ಹೀಗೂ ಮಾಡಬಹುದು

ಮದುವೆಗಳು ಎಂಬ ಸಂದೇಶವನು ಸಾರಿ ಸಾರಿ

ಹೇಳಿದಂತೆ ಈ ವರ್ಷದ ಮದುವೆಗಳು ನಡೆದು 

ಮಾನವ ಸಂಕುಲಕ್ಕೆ ಕಲಿಸಿದವು ಪಾಠ ಮರೆಯದಂತೆ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

Tuesday, January 26, 2021

ನೇತಾಜಿ ಎಂಬ ಕ್ರಾಂತಿ ಸಿಂಹ ಕವನ

 ಕವನದ ಶೀರ್ಷಿಕೆ

"ನೇತಾಜಿ ಎಂಬ ಕ್ರಾಂತಿ ಸಿಂಹ"


ಭಾರತಾಂಬೆಯ ವೀರ ಪುತ್ರ ದೇಶಕ್ಕಾಗಿ

ಪ್ರಾಣದ ಹಂಗು ತೊರೆದು ನಿಂತಿಹನು

ಆಂಗ್ಲರ ಗುಲಾಮಗಿರಿಗೆ ಸೆಡ್ಡು ಹೊಡೆದು

ಕ್ರಾಂತಿಯ ಕಹಳೆ ಮೊಳಗಿಸಿ ಸೈನ್ಯ ಕಟ್ಟಿ


ಯುವಕರ ಮನಸ್ಸಲ್ಲಿ ಸ್ವಾತಂತ್ರ್ಯ ಕನಸ ಬಿತ್ತಿ

ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ

ಕೊಡಿಸುವೆ ಎಂದು ಹೇಳುತ ಸಿದ್ಧಗೊಳಿಹನು 

ಸೈನ್ಯವು ನಡುಕ ಹುಟ್ಟಿಸಿದೆ ಆಂಗ್ಲ ಅಧಿಕಾರಿಗಳಿಗೆ


ಗಲ್ಲಿಗೇರುವ ಧೀರನು ಕೂಗಿಹನು ವಂದೇ

ಮಾತರಂ ಅನ್ನೋ ಮಂತ್ರ ಒಂದೇ ಸಮನೆ

ತಾಯಿ ತಾಯ್ನಾಡಿಗೆ ಅರ್ಪಿಸಿಹರು ಪ್ರಾಣವ

ರವಿಯ ತೇಜಸ್ಸು ಹೊತ್ತಿಹರು ಎದೆಯಲ್ಲಿ


ಸತ್ಯ,ಶಾಂತಿ,ಅಹಿಂಸೆ,ತ್ಯಾಗ,ಬಲಿದಾನ ಮಾಡಿ

ಪಡೆಯುವೆವು ಸ್ವಾತಂತ್ರ್ಯ ಅನ್ನೋ ಭ್ರಮೆ ಬಿಟ್ಟು

ಧೈರ್ಯದಿ ಮುನ್ನುಗ್ಗಿ ಹೋರಾಡಿ ಆಂಗ್ಲ ಹೇಡಿಗಳ

ರುಂಡ ಚಂಡಾಡಿ ಪಡೆಯಲು ಸದಾ ಆತೋರೆದರು


ಕ್ರಾಂತಿ ಕಲಿಗಳನು ಸೇರಿಸಿ ದಿಟ್ಟತನದಿ ಹೋರಾಡುವ

ಸ್ವಾತಂತ್ರ್ಯ ಕಿಚ್ಚು ಹಚ್ಚುವ ಹುಚ್ಚು ತುಂಬಿದರು ಜನಕ್ಕೆ

ಆಂಗ್ಲರ ವಿರುದ್ಧ ಹೋರಾಡುವ ಆತ್ಮ ವಿಶ್ವಾಸ ತುಂಬಿ

ನಾಂದಿ ಹಾಡಿಹರು ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


ಬರಹಗಾರರ ಬಳಗದ ಹೆಮ್ಮೆ ಕವನ

 ಕವನದ ಶೀರ್ಷಿಕೆ

"ಬರಹಗಾರರ ಬಳಗದ ಹೆಮ್ಮೆ"


ಕರುನಾಡ ಕವಿ ಪುಂಗವರನು ಒಗ್ಗೂಡಿಸಿ

ಕನ್ನಡಮ್ಮನ ನುಡಿ ಸೇವೆಗೆ ಹಚ್ಚಿಹದು

ಕವನಗಳ ಬರೆಯುತಿಹರು ಹಲವು ಜನ

ಕತೆ ಕವನಗಳ ಹೊತ್ತಿಗೆ ಬರುತಿಹವು ಕೆಲವು


ಟಂಕ,ಅದ್ವಿಜೋ,ಅಲಂಕಾರಿಕ,ಪ್ರಾಸ, ಹಾಯ್ಕು

ಷಟ್ಪದಿ ಹೀಗೆ ಸಾಹಿತ್ಯ ಪ್ರಕಾರಗಳನು ಕಲಿಯಬೇಕು

ಅನುಭಾವದಿಂದ ಅನುಭವ ಗಳಿಸುತಿಹೆವು ನಾವು

ಬೆಳಗಿನಿಂದ ಸಂಜೆಯವರೆಗೆ ಬರೆಯಬೇಕು ಒಮ್ಮೆ


ಸಾಹಿತ್ಯ ದಿಗ್ಗಜರು ಸಲಹೆ ನೀಡುವರು ಖುಷಿಯಲಿ

ನಾವು ಅವರಂತಾಗಲು ಹಂಬಲಿಸಿ ಬರೆಯಬೇಕು

ಕನ್ನಡ ನಾಡು ನುಡಿ ನೆಲ ಜಲ ವೇ‌ಷ ಭಾಷೆ ಸಂಸ್ಕೃತಿ

ಪ್ರಕೃತಿ ಸೌಂದರ್ಯ ಮಾನವೀಯ ಮೌಲ್ಯಗಳ ರಚನೆ


ಸಂಬಂಧಗಳೇ ಅಳಿಸುತ್ತಿರುವ ಕಾಲದಲ್ಲಿ ನಾವೆಲ್ಲರೂ

ಒಂದಾಗಿ ತಾಯಿ ಭುವನೇಶ್ವರಿ ದೇವಿ ಉತ್ಸವ ಜಾತ್ರೆ

ಮಾಡಿ ಹುರಿದುಂಬಿಸಿ ಪ್ರರೇಪಿಸುವರು ನಲ್ಮೆಯ ಗುರು

ಮಿತ್ರರು ಹಿರಿ-ಕಿರಿಯರ ಬೆಳೆಸೋದು ಬಳಗದ ಹೆಮ್ಮೆ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ





ಅನಿವಾರ್ಯತೆ ಕಾಡಿದಾಗ ಕವನ

 ಕವನದ ಶೀರ್ಷಿಕೆ

"ಅನಿವಾರ್ಯತೆ ಕಾಡಿದಾಗ"


ಬದುಕಿನ ಭವಣೆಗೆ ಜೋತುಬಿದ್ದು ಕಷ್ಟಗಳ

ಬಲೆಗೆ ಸಿಲುಕಿ ಒದ್ದಾಡಿ ದಡ ಸೇರುವ ತವಕ

ಮನದಲ್ಲಿದ್ದರೂ ಸುಖಾಸುಮ್ಮನೆ ಬರುವ

ಸಂಪತ್ತಿಗೆ ಆಸೆ ಪಟ್ಟು ಒಲ್ಲದ ಕಾರ್ಯಕ್ಕೆ ಒಗ್ಗುವ


ಸ್ವತಂತ್ರನಾದ ಮನುಜ ಸ್ವೇಚ್ಛೆಯಿಂದ ಬಾಳೋ

ಕನಸ ಕಂಡು ಕಲ್ಪನೆಗಳ ಲೋಕದಲ್ಲಿ ವಿಹರಿಸಿ

ಆಸೆಗಳು ಅನೇಕ ಹೀಡೇರದಾದಾಗ ಕೊನೆಗೆ ತಾನು

ಇದ್ದುದ್ದರಲ್ಲಿ ಹೊಂದಿಕೊಂಡು ಸಾಗಿವನು ಜೀವನ


ಸಂಬಂಧಗಳು ಸಡೀಲಗೊಂಡು ಅಳಿಸಿ ಹಾಕಿ

ಬೇಡವೇ ಬೇಡ ಇವರ ಸಹವಾಸ ಎಂದವರು

ಯಾರದೋ ಮಾತಿಗೆ ಕಟ್ಟುಬಿದ್ದು ಅನಿವಾರ್ಯತೆ ಕಾಡಿದಾಗ ಮೆತ್ತೆ ಜೊತೆಗೂಡಿ ಬಾಳುವರು ಒಂದಾಗಿ


ಕಷ್ಟಗಳ ಸುರಿ ಮಳೆಯೇ ಸುರಿಯಲಿ ಅಂಜದಿರು

ಅಳುಕದಿರು ನೋವು ನಲಿವುಗಳು ಕ್ಷಣಕಾಲ ತಿಳಿ

ನೀನು ಅನುಭವಿಸಿದ ದುಃಖ ದುಮ್ಮಾನಗಳ ಮರೆತು

ಮುಂದಿಹದು ಬಹು ಸ್ವಾರಸ್ಯಕರ ಗಳಿಗೆ ನಿನಗಾಗಿ ತಿಳಿ


ಕಾಣದ ಆಸೆಗಳೆಂಬ ಮೂಟೆಗಳ ಹೊತ್ತು ತಿರುಗದೆ

ತನ್ನ ಯೋಗ್ಯತೆಯ ಪರಿಮಿತಿಯನು ಅರಿತು ನಡೆದರೆ

ಸುಖ ಸಂಸಾರಕ್ಕೆ ರಹದಾರಿ ಎಂಬ ಸತ್ಯ ತಿಳಿದುಕೊಂಡು

ಸ್ವಚ್ಛ ಮನದಿ ಬಿಚ್ಚು ಭಾವದಿ ಬಾಳಿ ತೋರಬಾರದೇ



ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


 

ಅನ್ನದಾತ ಚುಟುಕು

 ಚುಟುಕು ಕವನಗಳು

ವಿಷಯ : ಅನ್ನದಾತ


          ‌‌ ‌‌ ೧

ದೇಶಕ್ಕೆ ಅನ್ನ ನೀಡೋ ರೈತನ ಬೆವರಿನ 

ದುಡಿಮೆಗೆ ಬೆಲೆ ಇಲ್ಲದಂತಾಗಿದೆ ತಾನು 

ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ 

 ಋಣ ಭಾರದಲಿ ಕಂಗಾಲಾಗಿ ಅಂಗಲಾಚಿ 

ಬೇಡಿದರೂ ಸಿಗದಾಗಿದೆ ಸಾಲವೇ ಶೂಲವಾಗಿ 

ಕಾಡಿದಾಗ ತೀರಿಸಲಾಗದೆ ಮಡಿವನು ನಿರಾಶನಾಗಿ


              ‌ ೨

ಬದುಕಿನಲಿ ಕಷ್ಟ ಕೋಟಲೆಗಳು ನೂರಾರು

ನಂಬಿದ ಕುಟುಂಬಕ್ಕೆ ಆಸರೆಯಾಗಿ ನಿಂತು

ಕೇಳಿದಕ್ಕೆಲ್ಲ ಹಣ ನೀಡಿ ಬರೀ ಗೈಲಾದಾಗ

ಹುಸಿನಗುವ ಬೀರುವವನು ರೈತ ಕೃಷಿಯ

ನೆಚ್ಚಿ ಖುಷಿಯ ಕಳೆದುಕೊಂಡರು ಬಿಡೆನೆನ್ನುವ

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲೆಂದು ನಂಬಿ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

Monday, January 18, 2021

ಕರ್ನಾಟಕ ಸಿವಿಲ್ ಸೇವಾ ನಿಯಮಗಳು - ೨೦೨೧

 ಸೇವಾ ನಿಯಮಗಳು - ೨೦೨೧ನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

೮ನೇ ಎಲ್ಲಾ ವಿಷಯಗಳ ಚಂದನ ಟಿವಿಯಲ್ಲಿ ಪ್ರಸಾರವಾದ ಪಾಠಗಳು

 ೮ನೇ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು ನೋಡಲು ಇಲ್ಲಿ ಕ್ಲಿಕ್ ಮಾಡಿ

ಈ ಮೇಲಿನ ☝️ ಲಿಂಕನ್ನು ಒತ್ತಿ ವೀಡಿಯೊ ವೀಕ್ಷಿಸಬಹುದು

೯ನೇ ಎಲ್ಲಾ ವಿಷಯಗಳ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು

 ೯ನೇ ಎಲ್ಲಾ ವಿಷಯಗಳ ಪಾಠಗಳು

ನೋಡಲು ಈ ಮೇಲಿನ ☝️ ಲಿಂಕನ್ನು ಒತ್ತಿ ವೀಡಿಯೊ ವೀಕ್ಷಿಸಬಹುದು

ಸಂಕ್ರಾಂತಿ ಸುಗ್ಗಿಯ ಹಿಗ್ಗು ಕವನ

ಹತ್ತನೇ ತರಗತಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು

 ಹತ್ತನೇ ತರಗತಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಪಾಠಗಳು

ಹತ್ತನೇ ತರಗತಿ ಪಾಠಗಳು ನೋಡಲು ಈ ಮೇಲಿನ☝️ ಲಿಂಕನ್ನು ಒತ್ತಿ ವೀಡಿಯೊ ವೀಕ್ಷಿಸಬಹುದು


ಪ್ರಸಾದ ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : ಪ್ರಸಾದ


                                   ೧

ದೇಗುಲದಲ್ಲಿ ತಿಂದುಂಬರೆ ಪ್ರಸಾದ ಎನ್ನುವರಯ್ಯ

ಮನೆಯಲ್ಲಿ ಕುಳಿತುಂಡರೆ ಊಟ ಎಂಬುವರಯ್ಯ

ಅದೇ ಪ್ರೀತಿ ಇಲ್ಲದವರಿಗೆ ಬಡಿಸಲು ಕೂಳೆನ್ನುವರ

ನಾನಾ ರೀತಿ ಹೊಟ್ಟೆ ತುಂಬಿಸುವದು ಗೂಳಿ ಬಸವ 


                     ‌     ‌‌ ೨

ಭಕ್ತಿ ಇತ್ತು ಪ್ರಸಾದವ ಸೇವಿಸಯ್ಯ ಅದು ಶಕ್ತಿ 

ಉಲ್ಲಾಸವ ನೀಡುವುದಯ್ಯ ಅನ್ನದ ಅಗುಳಿಗೆ 

ಸೊಕ್ಕು ತೋರದಿರು ರೊಕ್ಕ ಎ‌ಷ್ಟಿದ್ದರೇನು ಅದು

ಎಂದಿಗೂ ರೊಟ್ಟಿಯಾಗದು ನೋಡ ಗೂಳಿ ಬಸವ


ರಚನೆ

ಯಗುಮಾಶ 

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಭಕ್ತಿ ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : "ಭಕ್ತಿ"


                  ೧

ಅಜ್ಞಾನಿಗೆ ಜ್ಞಾನದ ಬೆಳಕು ಬೇಕು

ಸಿರಿವಂತರಿಗೆ ದಾನ ಗುಣವೇ ಬೇಕು

ಬಡವನಿಗೆ ಸಿರಿತನವೇ ಬೇಕು ಇರ್ವರಿಗೂ

ಭಕ್ತಿ ಇತ್ತು ಸಲಹು ಶ್ರೀ ಗುರು ಗೂಳಿ ಬಸವ


                    ೨

ವ್ಯಾಪಾರಿಯ ಮನ ಮಾರಾಟಕ್ಕೆ ಎಳೆವುದು

ಪೂಜಾರಿಯ ಮನ ತಟ್ಟೆಯ ಹಣಕ್ಕೆ ಎಳೆವುದು

ಭಕ್ತನ ಮನವನ್ನು ಚಂಚಲತೆಯು ಎಳೆವುದನು

ತಡೆದು ದೇವರ ಧ್ಯಾನಕ್ಕೆ ಎಳೆದು ತಾ ಗೂಳಿ ಬಸವ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


ಗುರು ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : ಗುರು


 ಗುರುವಿನಿಂದ ಅರಿವಿನ ಅಲೆಗಳು ಬಂದು 

ಅಪ್ಪಳಿಸಲು ಅಜ್ಞಾನ ಅಂಧಕಾರ ಮೂಢನಂಬಿಕೆ

ಜ್ಯಾತ್ಯಾಂಧತೆ ಅಧರ್ಮ ವೈಷಮ್ಯ ವೈರುಧ್ಯಗಳು

ಕೊಚ್ಚಿಕೊಂಡು ಹೋಗುವವು ಗೂಳಿ ಬಸವ


ರಚನೆ

ಯಗುಮಾಶ 

Tuesday, January 12, 2021

ಸೇಡು ಕವನ

 ಸೇಡು ಕವನ

ದಿನಾಂಕ : ೧೨/೦೧/೨೦೨೧ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ



ಮೋಬೈಲ್ ಗೇಮ್ ಆಡದಿರಿ ಕವನ

 ಮೋಬೈಲ್ ಗೇಮ್ ಆಡದಿರಿ ಕವನ

ದಿನಾಂಕ : ೦೯/೦೧/೨೦೨೧ ರಂದು ಕಡಲವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕವನ



ಬಾಳ ನೌಕೆ ಕವನ

ದಿನಾಂಕ : ೦೮/೦೧/೨೦೨೧ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ


ಕಾಯಕ ಆಧುನಿಕ ವಚನ

 ಆಧುನಿಕ ವಚನಗಳು

ವಿಷಯ : ಕಾಯಕ


ಮನುಷ್ಯ ಯಾವುದೋ ಒಂದು ಕಾಯಕ

ಮಾಡು ವ್ಯರ್ಥ ಕಾಲಹರಣ ಮಾಡದಿರು

ಇಷ್ಟದ ಕೆಲಸವ ಶ್ರದ್ಧೆಯಿಂದ ಮಾಡಲು

ಯಶಸ್ಸು ತಾನಾಗಿಯೇ ಲಭಿಸುವದಯ್ಯ

ಕಾಯಕ ನಿಷ್ಠೆ ಮರೆತು ಉಡಾಳನಾಗಿ ತಿರುಗಲು

ಕಾಸಿನ ಕಿಮ್ಮತ್ತು ಇರದಯ್ಯ ಗೂಳಿ ಬಸವ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ನಾದಮಯ ಈ ಲೋಕ ಕವನ

 ಕವನದ ಶೀರ್ಷಿಕೆ

"ನಾದಮಯ ಈ ಲೋಕ"


ಬ್ರಹ್ಮಾಂಡದಲಿ ಸಂಗೀತ ಸಾಧನಗಳನೇಕ

ಮನಸೂರೆಗೊಳ್ಳುವವು ಮನುಜರೆಲ್ಲರಲಿ

ಪ್ರಾಣಿ ಪಕ್ಷಿಗಳೂ ತಲೆದೂಗುವವು ನಾದಕ್ಕೆ

ನಾದಮಯ ಈ ಲೋಕವೆಲ್ಲ ಮರೆಯದಿರು


ಬಾಜಾ ಭಜಂತ್ರಿ ಶಹನಾಯಿ ಪಿಟಿಲು ಕೊಳಲು

ತಂಬೂರಿ ಪೇಟಿ ತಾಳ ತಬಲ ಮದ್ದಲೆ ಗೆಜ್ಜೆ

ಪುಂಗಿ ಪೀಪಿ ಡೋಲು ತಮಟೆ ನಗಾರಿಯು

ಡಮರುಗ ಸದ್ದು ಪರಮಾತ್ಮನಿಗೆ ಪ್ರಿಯವು


ಕೊಳಲಿಡಿದು ಶ್ರೀ ಕೃಷ್ಣ ನುಡಿಸಲು ಹಸುಗಳು

ಬರುವವು ದೇವಲೋಕದ ಇಂದ್ರಾದಿ ದೇವಾನು

ದೇವತೆ ರಂಭೆ ಊರ್ವಶಿ ಮೇನಕೆರ ಅಚ್ಚುಮೆಚ್ಚು

ವೀಣಾ ಪಾಣಿ ಸರಸ್ವತಿ ತಂಬೂರಿಯ ನಾರದರು


ಪಿಟಿಲು ಚೌಡಯ್ಯ ಶಹನಾಯಿ ಅಪ್ಪಣ್ಣನವರು

ಪಂಡೀತ ಪುಟ್ಟರಾಜ ಗವಾಯಿಗಳು ಜೀವತುಂಬಿ

ಹಾಡುಗಳ ಹಾಡಿ ಶ್ರೇಷ್ಠ ಮಹನಿಯರು ಸಂಗೀತ 

ಸರಸ್ವತಿ ಶಾರದೆಯ ಕೃಪಾಕಟಾಕ್ಷದಿಂದ ಮೆರೆದರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

 






 




ಸಂಕ್ರಾಂತಿ ಹಬ್ಬದ ಹಿಗ್ಗು ಕವನ

 ಸಿರಿಗನ್ನಡ ಕವನ ಸ್ಪರ್ಧೆ

ಕವನದ ಶೀರ್ಷಿಕೆ

"ಸಂಕ್ರಾಂತಿ ಹಬ್ಬದ ಹಿಗ್ಗು"


ಸಂಕ್ರಾಂತಿಯು ಬರಲು ಪಥ ಬದಲಿಸಿಹನು

ಸೂರ್ಯ ಉತ್ತರಾಯಣದ ಪುಣ್ಯ ಸ್ಪರ್ಶಕ್ಕೆ

ರೈತರೆಲ್ಲರೂ ಹಿಗ್ಗಿಹರು ಕಬ್ಬು ಬೆಲ್ಲವ ತಿಂದು

ಬಂಧು ಬಾಂಧವರೊಂದಿಗೆ ಹಬ್ಬ ಆಚರಿಸುತ


ಜೋಳದ ತೆನೆಯ ಸೀತನೆಯ ರಸ ಸವಿದಿಹರು

ಪರಮ ಪಾವನ ನದಿಯಲ್ಲಿ ಮಿಂದೆದ್ದಿಹರು

ದೈವದ ದರುಶನ ಪಡೆದು ರಕ್ಷೆಯ ಬೇಡಿಹರು

ನರ ನಾಡಿಗೆಲ್ಲ ಒಳಿತನು ತಾವೆಲ್ಲ ಬಯಸಿಹರು


ಸೇಂಗದ ಹೋಳಿಗೆ ಊಟ ಮಾಡಿ ನಾರಿಯರು

ಹೆಮ್ಮರದ ರೆಂಬೆ ಕೊಂಬೆಗೆ ಜೋಕಾಲಿಯ ಕಟ್ಟಿ

ಹೆಂಗೆಳೆಯರ ದಂಡು ಹಂಚಿಕೊಳ್ಳುತಲೇ ಭಾವ

ಬಾನಂಗಳದಲ್ಲಿ ಚಿತ್ತಾರದ ಆಸೆಗಳ ಕಲ್ಪನೆ ಒಡ್ಡಿ


ಸುಗ್ಗಿಯ ಕಾಲ ಬಂದೈತೆಂದು ಸದ್ದು ಮಾಡುತ್ತಾ

ಚಿಕ್ಕವರು ದೊಡ್ಡವರು ಗುಂಪುಕಟ್ಟಿ ಗೆಜ್ಜೆ ಕಟ್ಟಿ

ಹೆಜ್ಜೆ ಆಕಿ ನಾಟ್ಯ ನಟನೆ ಮಾಡಿ ಡೋಲು ತಮಟೆ

ತಾಳ ಮದ್ದಲೆಗೆ ಗತ್ತು ಗಾಂಭೀರ್ಯದಿ ಕುಣಿಯುವರ


ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣವೆಂದು

ಪ್ರೀತಿ ಪ್ರೇಮದ ವಾತ್ಸಲ್ಯ ತೋರುತ ಶಾಂತಿ ಮಂತ್ರವ

ಪಠಿಸುತ ಗುರು ಹಿರಿಯರ ಆಶೀರ್ವಾದವ ಬೇಡುತಲೇ

ಸಂಕ್ರಾಂತಿಯ ಸೊಬಗನು ಸವಿಯುತ ನಲಿದಾಡಿಹರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ










ಸಾಹಸ ಗಾಥೆ ಕವನ

 ಕವನದ ಶೀರ್ಷಿಕೆ

"ಸಾಹಸ ಗಾಥೆ"


ವೀರ ಯೋಧರು ರಣರಂಗದಲ್ಲಿ ಅಗಾಧ 

ಪರಾಕ್ರಮದಿ ಹೋರಾಡಿ ಮಡಿವರು ಕೆಲವರು

ಕೈ ಕಾಲುಗಳ ಕಳೆದುಕೊಂಡು ನರಳುತಿರುವರು

ಸಾವು ನೋವುಗಳ ಬೆಲೆ ಅರಿಯದವರು ಇಹರು


ಗುಂಡುಗಳ ಸುರಿಮಳೆಯೇ ಸುರಿದರೂ

ಸರಿಯೇ ಎದೆಯೊಡ್ಡಿ ನಿಲ್ಲುವರು ಅಂಜದೆ

ರುಂಡ ಮುಂಡವ ಕತ್ತರಿಸಿ ಬಿದ್ದರೂ ಕೂಡ

ಲೆಕ್ಕಿಸದೆ ನಿಂತು ಅಮರ ವೀರರಾಗಿಹರು ಪೂರ


ದೇಶದ ಉದ್ದಗಲಕ್ಕೂ ಸಂಚರಿಸಿ ಗಡಿ ಕಾಯೋ ಸೈನಿಕರು ಅನ್ನ ನೀಡೋ ರೈತರು ಕೂಲಿ ನಾಲಿ

ಮಾಡುವ ಕಾರ್ಮಿಕರು ತಮ್ಮ ಕೈ ಕೆಸರಾದರೇ 

ಬಾಯಿ ಮೊಸರು ತತ್ವವನು ನಂಬಿದವರು ತಾವು


ಶತಮಾನಗಳಿಂದ ರಾಜರು ಮಾತ್ರ ಅಧಿಕಾರ 

ದಾಹ ಸಾಮ್ರಾಜ್ಯ ವಿಸ್ತರಣೆ ಪರಾಕ್ರಮ ಪ್ರತಿಷ್ಠೆ

ತೋರಿಸಲು ಶತೃರಾಜರ ಹೊಟ್ಟೆಯ ಬಗೆದಿಹರು

ಮಣ್ಣಲ್ಲಿ ಮಣ್ಣಾಗಿ ಮುಚ್ಚಿ ಹೋಗಿಹರು ತಾವು


ಶಕ್ತಿ ಶಾಲಿ ಹೋರಾಟದ ಕಥಾನಕ ಕಥೆಗಳಲ್ಲಿ

ಲಕ್ಷಾಂತರ ಯೋಧರ ಬಾಹುಗಳ ರಕ್ತ ತರ್ಪಣ 

ಕೊಟ್ಟು ಯೋಧರ ಸಾಹಸ ಗಾಥೆಯ ಬಲ್ಮೆಯಿಂದ

ಇತಿಹಾಸದ ಪುಟಗಳಲ್ಲಿ ನಾಯಕರು ಉಳಿದಿಹರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ



ನಾಡ ದೊರೆಗೆ ಆತ್ಮೀಯ ಸ್ವಾಗತ ಕವನ

 ಕವನದ ಶೀರ್ಷಿಕೆ

"ನಾಡ ದೊರೆಗೆ ಆತ್ಮೀಯ ಸ್ವಾಗತ"


ಜನ ನಾಯಕ ನಾಡ ದೊರೆಯು ಬರುವನು

ಗಿರಿನಾಡಿಗೆ ಜಿಲ್ಲೆಯ ಕಿರೀಟ ತೊಡಿಸಿದವರು

ಇಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆಯ

ನೀಡಿ ಆರೋಗ್ಯ ದೇಗುಲದ ಉದ್ಘಾಟನೆ ಮಾಡಿ


ಹೊಸ ವರ್ಷದ ಶುಭ ಗಳಿಗೆಯಲ್ಲಿ ಹೊಸದಾದ

ಯೋಜನೆ ಜನರಿಗೆ ಅರುಹಿ ಮೆಚ್ಚುಗೆ ಪಡೆವರು

ತಮ್ಮೊಂದಿಗೆ ಸಚಿವರ ದಂಡು ಕಾರ್ಯಕರ್ತರು ರಾಜಕೀಯ ಪಕ್ಷಗಳ ಮುಖಂಡರು ಬರುವರು


ಹೊಸದಾಗಿ ಪಂಚಾಯಿತಿಗೆ ಆರಿಸಿ ಬಂದಂತ

ಸದಸ್ಯರು ತಮ್ಮನ್ನು ನಾಡ ದೊರೆಯು ಬಂದು

ಸನ್ಮಾನಿಸುವರು ಎಂಬ ಸಣ್ಣ ಆಸೆಯು ಮನದಲಿ

ಹೊತ್ತು ಗಿರಿ ನಗರಕ್ಕೆ ನವನವೀನ ಪಿತಾಂಬರಗಳ


ಧರಿಸಿ ತಮ್ಮ ಜನ ಬೆಂಬಲಿಗರೊಂದಿಗೆ ಹೋಗುವರು

ದೊರೆಯು ಬರುವ ದಾರಿಯುದ್ದಕ್ಕೂ ತಮ್ಮ ದೊಡ್ಡ

ದೊಡ್ಡ ಕಟೌಟ್ ಗಳ ಅಲಂಕಾರ ಮಾಡಿ ಭೇಷ್ 

ಎನಿಸಿಕೊಂಬರು ಸ್ಥಳೀಯ ಪ್ರಮುಖ ಮುಖಂಡರು


ಸರ್ವರಿಗೂ ಹಾರ್ಧಿಕ ಶುಭಾಶಯಗಳು ಕೋರುವೆವು

ಎಲ್ಲರ ಅಭಿಮತದಂತೆ ಅಭಿವೃದ್ಧಿ ಕಾರ್ಯಗಳಿಗಿಂದು

ಚಾಲನೆ ನೀಡಲು ಬರುತ್ತಿರುವ ಮಾನ್ಯ ಮುಖ್ಯಮಂತ್ರಿ,

ಸಚಿವರು, ಶಾಸಕರಿಗೆ ಆತ್ಮೀಯ ಸ್ವಾಗತ ಕೋರುವೆವು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


ಹುಚ್ಚು ಕೋಡಿ ಮನಸು ಕವನ ೦೬/೦೧/೨೦೨೧

 ಕವನದ ಶೀರ್ಷಿಕೆ

"ಹುಚ್ಚು ಕೋಡಿ ಮನಸು"


ಹದಿ ಹರೆಯದ ಯುವಕರ ಮನಸು

ಬದಲಾಗುವುದು ಕಂಡ ಕಂಡ ಕಡೆಗೆ

ಅದಾಗಿಯೇ ಎಳೆದೊಯ್ಯುವುದು ಎಲ್ಲಾ

ಇದು ವಯಸ್ಸಿನ ಮಹಿಮೆಯೋ ಗೊತ್ತಿಲ್ಲ


ಹುಡುಗ ಹುಡುಗಿಯರು ತಮ್ಮತಮ್ಮಲ್ಲೇ

ಸಡಗರ ಸಂಭ್ರಮದಿಂದ ನಲಿದಾಡುತ್ತಲೇ

ಬಡವರು ಶ್ರೀಮಂತರು ಜಾತಿ ಭೇದವಿಲ್ಲದೆ

ಮಡಿವಂತಿಕೆಯನು ದಿಕ್ಕರಿಸಿ ಪ್ರೀತಿಸುವರು


ಮುಂದಿನ ಜೀವನದ ಆಗುಹೋಗುಗಳನ್ನು

ಚಂದದಿ ಲೆಕ್ಕಿಸದೆ ಕೆಲವರು ಅವಸರದಿಂದ

ಒಂದಾಗುವೆವು ಎಂದು ತಪ್ಪು ಮಾಡುವವರು

ತಂದೆ ತಾಯಿಯರು ಒಪ್ಪದ ಇದ್ದಾಗ ಜೋಕೆ


ಹುಚ್ಚು ಕೋಡಿ ಮನಸು ಇದು ಅರಿಯದೆ 

ಸ್ವಚ್ಛ ಮನಸ್ಸಿನಿಂದ ಪ್ರೀತಿಸಿ,ಆದ್ರೆ ಹಾಳಾಗಬೇಡಿ

ಬಿಚ್ಚು ಮನದಿ ಎಲ್ಲಾ ವಿಷಯಗಳ ತಿಳಿ ಹೇಳಿ

ಮುಚ್ಚಿಟ್ಟು ಮರೆಮಾಚಲು ಕಷ್ಟಕ್ಕೆ ಸಿಲುಕುವಿರಿ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ







Tuesday, January 5, 2021

ಹಳ್ಳಿಯ ಸಿರಿ ಸೊಬಗು ಕವನ ಪ್ರಕಟ ೦೫/೦೧/೨೦೨೧

 ಹಳ್ಳಿಯ ಸಿರಿ ಸೊಬಗು ಕವನ

ದಿನಾಂಕ : ೦೫/೦೧/೨೦೨೧ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾದ ಕವನ



ಜೋಳದೊಲವ ನೋಡಿರಣ್ಣ ಕವನ ೦೫/೦೧/೨೦೨೧

 ಕವನದ ಶೀರ್ಷಿಕೆ

*"ಜೋಳದೊಲವ ನೋಡಿರಣ್ಣ"*


ರೈತನೋರ್ವ ಭುವಿಯ ಹುತ್ತಿ ಬೆಳೆಯ ತೆಗೆದು

ಅನ್ನವ ನೀಡುವ ಯೋಗಿಯು ತಾನಾಗಿರುವನು

ಉತ್ತಿರಿ ನೀವು ಬಿತ್ತಿರಿ ನಾ ಬರೋದಿದ್ರೆ ನೀವು ಸತ್ರಿ

ಎನ್ನೋ ಗಾದೆಯಂತೆ ಮಳೆ ನೋಡಿ ಬಿತ್ತುವನು


ಭುವಿಯು ಭಿರಿಯಲು ಮಳೆ ಬರಲು ಬೆಳೆಯು

ತಾನು ತಾನಾಗೆ ಮೊಳಕೆಯೊಡೆದು ಚಿಗುರಿಕೊಂಡು

ಬಂದೆ ಬರುವುದು ಅದರೊಂದಿಗೆ ಕಳೆ ಬರುವುದು

ಊಳುವ ಯೋಗಿಯ ನೋಡಿ ನಗುವುದು ಕಳೆ


ಮನಸೆಳೆಯುವ ಮಡದಿ ಜೊತೆಗಿರಲು ಹಾಯಾಗಿ

ಬಾಳುವ ಮನುಜನಂತೆ ಸಮಯಕ್ಕೆ ಸರಿಯಾಗಿ

ಎಡೆಯೊಡೆದು ಸ್ವಲ್ಪ ನೀರು ಕೊಡಲು ಕುಣಿಕುಣಿದು

ಬರುವುದು ಬೆಳೆಯು ಮನುಜನ ಎತ್ತರಕ್ಕೆ ಬೆಳೆದು


ಜೋಳದ ತೆನೆಯು ಮುತ್ತು ರತ್ನದಂತೆ ಕಾಣುತ್ತಿರಲು

ಹಕ್ಕಿಗಳ ಹಿಂಡು ಚಿಲಿಪಿಲಿ ಕಲರವ ಗೈಯುತ್ತ ಬಂದು

ಎಳೆಯ ಕಾಳುಗಳ ತಿಂದು ರಸವ ಕುಡಿದು ಸೀತನೆಯ

ಹಾಳು ಮಾಡುತ್ತಿರಲು ರೈತ ಬಂದೊಡಿಸುವಾಗ ಪುರ್ರನೆ


ರೆಕ್ಕೆಯ ಬೀಸುತ ಮಿತ್ರರ ಕೂಡ ಓಡಿ ಹೋಗುವವು

ಹಿಂಡನಗಲಿದ ಆನೆಯಂತೆ ನಿರಾಶನಾಗುವ ಮನುಜ

ದುಡಿತವೇ ದುಡ್ಡಿನ ತಾಯಿ ಎಂಬಂತೆ ಹಂಚಿಕೊಂಡು

ತಿನ್ನುವುದನ್ನು ರೈತರ ನೋಡಿ‌ ಕಲಿತು ಬಾಳಿದರಾಗದೇ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ


Monday, January 4, 2021

ಸ್ವಪ್ನ ಸುಂದರಿ ಕವನ ೦೪/೦೧/೨೦೨೧

 ಕವನದ ಶೀರ್ಷಿಕೆ

*"ಸ್ವಪ್ನ ಸುಂದರಿ"*


ಕತ್ತಲಾದರೆ ಸಾಕು ಕನಸಲಿ ಬರುವಳು

ಸ್ವಪ್ನ ಸುಂದರಿ,ಬಗೆಬಗೆಯ ಅಲಂಕಾರ

ವೈಯ್ಯಾರ ಮಾಡುತ ಆಗುವಳ ಪ್ರತ್ಯಕ್ಷ !

ಬಿಡದೆ ಕಾಡುವಳು ರಾತ್ರಿಯಲ್ಲ ನಿದ್ದೆಗೆಡಿಸಿ


ಎಲ್ಲೆಲ್ಲೋ ಸುತ್ತಾಡಿದಂತ ಅನುಭವ ಬೇರೆ

ಜೊತೆ ಜೊತೆಯಲ್ಲಿಯೇ ತುಂಟಾಟದ ಕಳ್ಳಾಟ

ಒಮ್ಮೊಮ್ಮೆ ಅನಿರಿಕ್ಷಿತವಾಗಿ ಮದುವೆ ಆದಂತೆ 

ಹೊಸ ಬದಕು ನಡೆಸಿದಂತೆ ಕಲ್ಪನೆಗೆ ನಿಲುಕದು


ಆಗಾಗ ಅಲ್ಪ ಸ್ವಲ್ಪ ತೊಳಲಾಟ ಬೇರೆ

ಅಲೆಮಾರಿಯ ಜೀವನದಂತೆ ತಿರುಗಾಟ

ದಿಗ್ಗನೆ ಎಚ್ಚರಾದರೆ ಎಲ್ಲವೂ ಮಾಯವಾಗಿ

ಅದೇ ಹಾಸಿಗೆ ಅದೇ ದಿಂಬು ನೆನೆದರೆ ನಾಚಿಕೆ!


ಆಗೊಮ್ಮೆ ಈಗೊಮ್ಮೆ ಕಣ್ಮುಂದೆ ಬಂದು

ವಿಶೇಷ ಉಪಚಾರವ ಗೈವ ಪ್ರೀತಿ ತೋರುವ

ಕನಸಲ್ಲಿ ಕಾಡಿದ ಆ ಮಾಯಾಂಗಿನಿ ಯಾರು ?

ಎಂದು ಇನ್ನುವರಿಗೆ ತಿಳಿಯಲಾರದ ಕಗ್ಗಂಟು?


ಆಕೆಯ ಅಪ್ಪುಗೆ,ಆಲಿಂಗನ,ಚುಂಬನ,ಕುಚೇಷ್ಟೆ 

ನಗು,ಅಕ್ಕರೆಯ ಮಾತುಗಳು ನೆನೆದರೆ ಏನೋ

ಮೋಡಿ ಮಾಡಿದಂತೆ ಎಳೆಯುವುದು ಅವಳೆಡೆಗೆ

ಮತ್ತೆ ಮತ್ತೆ ಕನಸು ಕಾಣುವ ಬಯಕೆ ತೀರದಾಗಿದೆ.


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



ಅಕ್ಕರೆಯ ಅಕ್ಕರಗಳು ಕವನ ೦೪/೦೧/೨೦೨೧

 ಅಕ್ಕರೆಯ ಅಕ್ಕರಗಳು ಕವನ

ದಿನಾಂಕ : ೦೪/೦೧/೨೦೨೧ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾದ ಕವನ



Sunday, January 3, 2021

ಸೃಷ್ಟಿಯ ವೈಚಿತ್ರ್ಯ ಕವನ ೦೩/೦೧/೨೦೨೧

 ಕವನದ ಶೀರ್ಷಿಕೆ

*"ಸೃಷ್ಟಿಯ ವೈಚಿತ್ರ್ಯ"*


ಸೃಷ್ಟಿಯಲ್ಲಿ ಅನೇಕ ವಿಸ್ಮಯ

ಭೂಮಿ ತಿರುಗುವುದು ಎನ್ನುವರು

ಅದು ನಮ್ಮ ಅನುಭವಕ್ಕೆ ಬಾರದು


ಆಕಾಶವು ವಿಶಾಲ ಅಂತ್ಯವೆಂಬುದೆ

ಇಲ್ಲ ಕಂಡವರಂತೂ ಯಾರಿಲ್ಲ

ಕಣ್ಣಿಗೆ ಗೋಚರಿದ್ದೆ ಕರೆ ಕರೆ...!


ಹಗಲು ರಾತ್ರಿ ಆಗುವುದೇ ಒಂದು

ವಿಚಿತ್ರ ಗೊತ್ತಿಲ್ಲ ಯಾರಿಗೂ... 

ಕತ್ತಲು ಬೆಳಕುಗಳ ಆಟ...


ಗ್ರಹಗಳು ಅನೇಕ ಎಂಬುವರು

ಸೂರ್ಯ ಚಂದ್ರರರಂತೆ ದೊಡ್ಡವರು

ಸಣ್ಣವರು ಅನಂತ ಅನಂತ....


ನಕ್ಷತ್ರ ಪುಂಜಗಳು ಬಹಳ..

ಹೊಳೆಯುವ ಕಂಗಳಂತೆ

ಗೋಚರ ಅಗೋಚರ ಅಪಾರ....


ಚಂದ್ರನ ಮೇಲೆ ನೀರು ಇದೆ

ಎಂಬರು ಗಾಳಿ ಇಲ್ಲವೆ ಇಲ್ಲಂತೆ

ಹೋಗಿ ಬರುವರು ಎಲ್ಲರೂ ಮುಂದೊಮ್ಮೆ..


ವಿಜ್ಞಾನದ ಗುಟ್ಟೊಂದು ತಿಳಿದರೆ

ಹೊಳೆಯುವದು ಎಲ್ಲಾ ವಿಸ್ಮಯಕ್ಕೆ

ಉತ್ತರ ಬಲ್ಲವರೇ ಬಲ್ಲರು ಜಾಣರು..


ಸಮಸ್ತ ಜನತೆಯು ವೈಜ್ಞಾನಿಕ

ನೆಲೆಗಟ್ಟಿನಲಿ ವಿಚಾರ ಮಾಡಿ ತಿಳಿದರೆ

ಏನಿಲ್ಲ ಎಲ್ಲಾ ಬಟ್ಟಬಯಲು ಬಯಲು..


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*








ವಿಸ್ಮಯ ಪ್ರಕೃತಿ ಕವನ ೦೨/೦೧/೨೦೨೧

 ಕವನದ ಶೀರ್ಷಿಕೆ

*"ವಿಸ್ಮಯ ಪ್ರಕೃತಿ"*


ಪ್ರಕೃತಿಯಲ್ಲಿ

ಗಿಡಮರಗಳನ್ನು

ನೆಟ್ಟವರಾರು

ಧುಮ್ಮಿಕ್ಕುವ ನದಿಗೆ

ನೀರು ಬಿಟ್ಟವರಾರು?


ಕ್ರೀಮಿ ಕೀಟಕ್ಕೆ

ಆಹಾರ ನೀಡುವಂತ

ಕಾಣದ ಕೈಯ

ನೋಡಿದವರು ಇಲ್ಲ

ಕೇಳಿದವರೂ ಇಲ್ಲ ..


ಸೂರ್ಯ ಚಂದ್ರರ

ನಡುವಿನ ಅಂತರ

ಕೊಟ್ಟು ಬೆಳಕು

ನೀಡುವ ಆದೇಶವ

ಕೊಟ್ಟವರಾರು ಒಮ್ಮೆ


ಯೋಚಿಸಿದರೆ

ಪ್ರಕೃತಿಯ ರಮ್ಯತೆ

ಅರಿವಾಗ್ತದೆ

ಆ ದೇವರು ಎಲ್ಲವೂ

ಒದಗಿಸಿರುವನು


ಮಾನವ ಮಾತ್ರ

ತನಗೆ ಇಷ್ಟ ಬಂದ

ಹಾಗೆ ಗಾಳಿಯ

ನೀಡುವ ಮರಗಳ

ಕಡಿದು ಹಾಕುವನು


ತನ್ನ ಬುಡಕ್ಕೆ

ತಾನೆ ಕೊಡಲಿ ಹಾಕಿ

ವಿನಾಶದೆಡೆ

ಪಯಣ ಬೆಳೆಸಿಹ

ಎಚ್ಚತ್ತರೆ ಉಳಿವ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*









ಮಕ್ಕಳು ಕವನ ೦೧/೦೧/೨೦೨೧

 ಕವನದ ಶೀರ್ಷಿಕೆ

"ಮಕ್ಕಳು"


ಮಕ್ಕಳು ಕಂಡ

ಕನ್ಸು ನನಸಾಗಲು

ಏಕಾಗ್ರತೆಯ

ಓದು ಸತತವಾದ

ಪ್ರಯತ್ನ,ಪರಿಶ್ರಮ


ನಾಳಿನ ಭವ್ಯ

ಪ್ರಜೆಗಳಿಗೆ ನಾವು

ಮಾನವೀಯತೆ

ಅನುಕಂಪ ತುಂಬಲು

ಸತ್ಪ್ರಜೆಯಾಗುವರು


ತಂದೆ ತಾಯಿಯ

ನೀತಿಯ ಮಾತುಗಳು

ಕೇಳಿ ಅವರ

ಸೇವೆ ಮಾಡುವ ಬುದ್ಧಿ

ಸಂಸ್ಕಾರ ಅಗತ್ಯವು


ತಾವು ಪಟ್ಟಣ

ಸೇರಿದ ಪಾಲಕರು

ಮಕ್ಕಳಿಗೆಲ್ಲ

ಸಂಬಂಧಗಳ ಬೆಲೆ

ತಿಳಿಸಬೇಕು ಆಗ


ಯಾರ ಜೊತೆಗೆ

ಹೇಗೆ ನಡೆಯಬೇಕು

ಎಂಬ ಸಾಮಾನ್ಯ

ಜ್ಞಾನ ಬೆಳೆಯುವುದು

ಹಾಗೆ ನಡೆಯುವರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಭೂ ಒಡಲಾಳ ಕವನ ೩೧/೧೨/೨೦೨೦

 ಕವನದ ಶೀರ್ಷಿಕೆ

*ಭೂ ಒಡಲಾಳ*


ಭೂ ಜೀವ ರಾಶಿ

ಒಡಲಲ್ಲಿ ತುಂಬಿದ

ಚಮತ್ಕಾರವ

ಎಂತಹದು ಅದುವೇ

ಪರಮಾಶ್ಚರ್ಯ ಮಾಯೆ


ಕಡಲು ಬೆಟ್ಟ

ಗುಡ್ಡ ಪರ್ವತಗಳ

ಶ್ರೇಣಿ ಇರಲು

ಎಂಬತ್ತನಾಲ್ಕು ಲಕ್ಷ

ಕೋಟಿ ಪ್ರಬೇಧಗಳು


ಅದರಲ್ಲಿಯೂ

ಈ ನರ ಮಾನವನ

ಕೃತಕ ಸೃಷ್ಟಿ

ಸಮಷ್ಟಿಗೆ ಸಿಗದು

ಧುತ್ತೆಂದು ಬರುವವು


ಗಾಡಿ ಮೋಟಾರು

ಅದು ಮೀರಿಯೂ ತಾನು

ತನ್ನಂತೆ ಇರುವ

ರೋಬೋಟ್ಗಳ ಬುದ್ಧಿಯ

ಕ್ಷಮತೆಯ ಕಗ್ಗಂಟು


ಕೃಷಿಯ ಯಂತ್ರ,

ಸಲಕರಣೆಗಳು

ಆಸ್ಪತ್ರೆಯಲ್ಲಿ

ಬಳಸುವಂತ ಶಸ್ತ್ರ

ಚಿಕಿತ್ಸೆಯ ಸಾಮಾನು


ಕೈಗಾರಿಕೆಗೆ

ಬೇಕಾಗುವಂತ ಕಚ್ಚಾ

ವಸ್ತು,ಕಂಪನಿ

ಜನ ನಗರಗಳು

ಭೂ ಒಡಲು ತುಂಬಿವೆ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*





ಬನ್ನಿ ಗೆಳೆಯರೇ ಶಾಲೆಗೆ ಹೋಗೋಣ ಕವನ ೩೧/೧೨/೨೦೨೦

 ಕವನದ ಶೀರ್ಷಿಕೆ

"ಬನ್ನಿ! ಗೆಳೆಯರೇ ಶಾಲೆಗೆ ಹೋಗೋಣ"


ಬನ್ನಿ! ಬನ್ನಿ! ಗೆಳೆಯರೇ ಶಾಲೆಗೆ ಹೋಗೋಣ

ವಿದ್ಯೆಯ ಕಲಿತು ನಾವೆಲ್ಲ ಜಾಣರಾಗೋಣ!

ಹೊಸ ವರ್ಷದ ಹೊಸ ತರಗತಿಯ ಪಾಠಗಳ

ಓದುತ್ತ ನವೀನ ವಿಷಯ ಅರಿತು ಬೆಳೆಯೋಣ


ಭಾರತಾಂಬೆಯ ಹೆಮ್ಮೆಯ ವೀರರ ಸಾಹಸ

ಗಾಥೆಗಳ ಕೇಳುತ ಅವರಂತಾಗಲು ಮನಸ್ಸು

ಮಾಡೋಣ ವಿಜ್ಞಾನಿಗಳ ಸಂಶೋಧನೆ ತಿಳಿದು

ನಾವೂ ಮಾಡಿ ಅನುಭವ ಪಡೆದರೆ ಉಲ್ಲಾಸ


ಕನ್ನಡ ನಾಡು ನುಡಿ ನೆಲ ಜಲ ಭಾಷೆ ಸಾಹಿತ್ಯದ

ಕುರಿತು ಕವಿ ನಾಣ್ನುಡಿ ಕೇಳಿ ನಲಿಯುತ ಅದೇ

ತರ ನಾವು ಬರೆಯಲು ಆರಂಭಿಸಿ ಹೆಚ್ಚಿಸುವೆವು

ಸಾಹಿತ್ಯ, ಶಾರದೆಯ ವರವ ಬೇಡುತ ಎಂದೆಂದು


ಗಣಿತದ ಸೂತ್ರಗಳ ಮೂಲಕ ಸೊಗಸಾಗಿ ಕಲಿತು

ಪ್ರಮೇಯಗಳ ಅರಗಿಸಿಕೊಂಡು ಮುನ್ನಡೆಯುತ

ಸಾಗಲು ಸರಳ ಸುಲಲಿತವಾಗಿ ಬಿಡುವುದು ನೊಡು

ಮೊಗ್ಗಿಗಳನು ಕಲಿತರೆ ಗುಣಿಸಲು ಸುಲಭದ ಮಾತು


ಆಂಗ್ಲ,ಹಿಂದಿ ಭಾಷೆಯ ಜ್ಞಾನ ಪ್ರಚಲಿತಕೆ ಬೇಕು

ಆಳ ಸಾರವ ತಿಳಿಯಲು ಅವಶ್ಯ ಉನ್ನತ ಶಿಕ್ಷಣ ಕಲಿಕೆ

ತಂತ್ರಜ್ಞಾನದ ತರಬೇತಿ ಪಡೆದು ಆವಿಷ್ಕಾರ ಬಗ್ಗೆ

ಮಾಹಿತಿ ಹೊಂದಿ ಅರ್ಥಪೂರ್ಣ ಬದುಕು ಸಾಗಬೇಕು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಯರಗೋಳ ತಾ.ಜಿ. ಯಾದಗಿರಿ.





ರೈತ ನಮ್ಮ ದೇವರು ಕವನ ೩೦/೧೨/೨೦೨೦

 ಕವನದ ಶೀರ್ಷಿಕೆ

*ರೈತ ನಮ್ಮ ದೇವರು*


ಪ್ರಜೆಗಳಿಗೆ

ಅನ್ನ ನೀಡೋ ಕಾಯಕ

ಹಿಡಿದ ನೇಗಿಲ

ಯೋಗಿ ನೀನಯ್ಯ ಬೆಳೆ

ಬೆಳೆದು ನೀ ಸಾಕುವೇ


ನಂಬಿದವರ

ಕೈ ಬಿಡದೆ ಬಾಳನು

ಹಸನಾಗಿಸೋ

ವ್ಯಕ್ತಿ ನೀನಯ್ಯ ನಮ್ಮ

ನೆಚ್ಚಿನ ನಾಯಕ ನೀ


ದುಡಿಯೋದನು

ಕಲಿಸಿ ಬುದ್ಧಿ ಹೇಳೋ

ಸೇವಕ ನೀನು

ಕಾಣದೆ ದೇವರಿಗೆ

ಕೈ ಮುಗಿಯೋ ಬದಲು


ಹಗಲು ರಾತ್ರಿ

ಎನ್ನದೆ ಅನುದಿನ

ದುಡಿದು ಅನ್ನ

ನೀಡುವ ನಿಜವಾದ

ರೈತ ನಮ್ಮ ದೇವರು


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಕರುನಾಡ ಕವಿ ಕುವೆಂಪು ಕವನ ೨೯/೧೨/೨೦೨೦

 ಕವನದ ಶೀರ್ಷಿಕೆ

"ಕರುನಾಡ ಕವಿ ಕುವೆಂಪು"


ಕರುನಾಡಿನ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯ ಕುಡಿ 

ಕುವೆಂಪರು ವಿಶ್ವ ಮಾನವತೆಯ ಸಂದೇಶ ಸಾರಿಹರು

ಕಾವ್ಯ ಪಯಣದ ಕವಲೊಳೆಗೆ ಕೈಯಾಡಿಸಿ ಎಲ್ಲಾ

ಸಾಹಿತ್ಯದಲಿ ಕೃತಿಯ ರಚಿಸಿ ಸೈ ಎನಿಸಿಕೊಂಡವರು


ತಾಯಿಯ ತವರು ಹಿರೇಕೂಡಿಗೆಯಲ್ಲಿ ಜನಿಸಿದರು

ಮರಳಿನ ಮೇಲೆ ಆರಂಭವಾಯಿತು ಅಕ್ಕರ ಬೀಜ

ಮುಂದೆ ಬಿತ್ತಿದ್ದೆಲ್ಲ ಕಾವ್ಯದಾರೆಯಾಗಿ ಹರಿಯಿತು

ಜ್ಞಾನ ಪೀಠದಂತ ಭವ್ಯ ಪ್ರಶಸ್ತಿಗಳ ಸೆಳೆಯುವಂತೆ


ಕಲಿಕೆಯ ವೇಳೆ ಮೂಡಿದವು ಹಲವು ಕಾವ್ಯ ಕವನ

ಮಹಾರಾಜ ಕಾಲೇಜಿನಲ್ಲಿ ಕಲಿತು ತಾ ಕಲಿಸಿದ್ದು 

ಕೈಹಿಡಿದ ಹೇಮಾವತಿ ಹೆಗಲಿಗೆ ಹೆಗಲಾಗಿ ನಿಂತು

ನೀಡಿದಳು ಎರಡು ಗಂಡು ಎರಡೆಣ್ಣು ಮಕ್ಕಳನ್ನು


ಮಲೆನಾಡಿನ ರಮ್ಯ ಪ್ರಕೃತಿಯ ಮಡಿಲಲ್ಲಿ ಕವಿಮನೆ,

ಮನಸೆಳೆದುದು ಕವಿಶೈಲ ಒಡಮೂಡಿ ಬಂದವು

ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು,ಬೆರಳ್ಗೆ

ಕೊರಳು, ಶ್ರೀ ರಾಮಾಯಣದರ್ಶನಂ ಮಹಾಕಾವ್ಯಗಳು


ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ನುಡಿ

ವಿಶ್ವಮಾನವ, ವಿಶ್ವ ಚೇತನ ಆಗುವಂತೆ ಮಾಡಿಹದು

ಕೇಂದ್ರ ಸಾಹಿತ್ಯ,ಪದ್ಮಭೂಷಣ, ಪದ್ಮವಿಭೂಷಣ,

ರಾಷ್ಟ್ರ ಕವಿ ಪ್ರಶಸ್ತಿ ಬಂದವು ರಸ ಋಷಿಯ ಸಿರಿಮುಡಿಗೆ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ.






ವಿಶ್ವ ಮಾನವ ಕವನ ೨೯/೧೨/೨೦೨೦

 ಕವನದ ಶೀರ್ಷಿಕೆ

*ವಿಶ್ವ ಮಾನವ*

(ಟಂಕಾ ಪ್ರಕಾರ)


ನೀ ಅಗಣಿತ

ತಾರೆಗಳ ನಡುವೆ

ಹೊಳೆಯುವಂತ

ಸೂರ್ಯನಾದೆ ಕಾವ್ಯದ

ಗಿರಿ ಶಿಖರ ಏರಿ


ವಿಶ್ವ ಮಾನವ

ಸಂದೇಶ ಸಾರಿದಿರಿ

ಜಗತ್ತಿಗೆಲ್ಲ

ಜಾತಿ ಮತ್ಸರ್ರಹಿತ

ಪುಣ್ಯ ಪುರುಷ ನೀವು


ಮಲೆನಾಡಿನ

ಪರಿಸರದಿ ಹುಟ್ಟಿ

ಕವಿಶೈಲದಿ

ಕಾನೂರು ಹೆಗ್ಗಡತಿ

ಕೃತಿಯನು ರಚಿಸಿ



ಮಲೆಗಳಲ್ಲಿ

ಮದುಮಗಳು ಮತ್ತು

ಕಲಾಸುಂದರಿ

ಕೊಳಲು,ನವಿಲು,ಶ್ರೀ 

ರಾಮಾಯಣದರ್ಶನಂ


ಪದ್ಮಭೂಷಣ

ಕೇಂದ್ರ ಸಾಹಿತ್ಯ ಮತ್ತು

ಪಂಪ ಪ್ರಶಸ್ತಿ

ಜ್ಞಾನ ಪೀಠ, ರಾಷ್ಟ್ರ

ಕವಿಯಾದ ಕುವೆಂಪು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*







ಪತ್ನಿ ಚುಟುಕು ೨೮/೧೨/೨೦೨೦

 ಚುಟುಕು ಕವನದ ಶೀರ್ಷಿಕೆ

"ಪತ್ನಿ"


ಹೆಂಡತಿ ಮನೆಯೊಳಗಿದ್ದರೆ

ನೀಡುವಳು ಪ್ರೀತಿ ತವರಿಗೆ

ಓದರೇ ಈರ್ವರು ವಿರಹ 

ವೇದನೆ ಅನುಭವಿಸುವರು

ಗಂಡ ಹೆಂಡಿರ ಜಗಳ ಗಂಧ

ತೀಡಿದ್ಹಂಗ ಎಂದು ಜಗಳ 

ಕಾಯ್ದರೆ ಉಪವಾಸವೇ ಗತಿ

ಹೊಂದಿಕೊಂಡಿರೆ ಸ್ವರ್ಗ ಸುಖ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ



ಮಮತಾ ಮಾಯಿ ಅಮ್ಮ ಚುಟುಕು ೨೭/೧೨/೨೦೨೦

 ಸ್ಪರ್ಧೆಗಾಗಿ

ಚುಟುಕುಗಳ ಶೀರ್ಷಿಕೆ

*ಮಮತಾ ಮಯಿ ಅಮ್ಮ*


ಮಗುವ ‌ಪ್ರೀತಿಯಲಿ ನೋವ ಮರೆತಿಹಳು

ಕಂದನ ಅಪ್ಪುಗೆಯಲಿ ತನ್ಮಯಳಾಗಿಹಳು

ಒಲವಿನ ಭಾವದಲಿ ಖುಷಿಯ ತಂದಿಹಳು

ಅನುರಾಗ ಅರಳಿ ಸಂಭ್ರಮ ಪಡುತಿಹಳು

ಅಂಬೆಗಾಲಿಕ್ಕುತ ಅರಗಿಳಿಯಂತೆ ಉಲಿತಿಹಳು

ಕಿಲಕಿಲ ನಗುವ ನೀನೇ ನನಗೆಲ್ಲ ಎನುತಿಹಳು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ನನ್ನ ಓಟು ಹರಾಜಿಗಿಲ್ಲ ಕವನ ೨೬/೧೨/೨೦೨೦

 ಕವನದ ಶೀರ್ಷಿಕೆ

"ನನ್ನ ಓಟು ಹರಾಜಿಗಿಲ್ಲ"


ಚುನಾವಣೆಯಲ್ಲಿ ಹೆಂಡ ಸಾರಾಯಿ ಕುಡ್ಸುತ

ಇಲ್ಲದ ಆಸೆ ಆಮಿಷಗಳ ತೋರಿಸಿ ಹೆಚ್ಚು ಹಣ

ಕೊಟ್ಟವರಿಗೆ ಮತ ನೀಡಲು ನನ್ನ ಓಟು ಹರಾಜಿಗಿಲ್ಲ

ನಿಮ್ಮ ಮುಲಾಜಿಗೆ ಬೀಳಲು ನಾನು ಬಯಸಲ್ಲ


ಈಗ ಓಟು ಆಕಿಸಿಕೊಂಡು ಕಳೆದು ಹೋದವರು

ಐದು ವರ್ಷಗಳ ಕಾಲ ಈಕಡೆ ಸುಳಿಯದವರು        

ಹಣ ಚೆಲ್ಲಾಡಿದರೆ ಯಾರು ಬೇಕಾದರೂ ಗೆಲ್ಲುವೆವು

ಎಂದು ತಿಳಿದವರಿಗೆ ಬುದ್ಧಿ ಕಲಿಸಿ ಮನೆಗೆ ಕಳಿಸಬೇಕು


ನಾನು ನಮಗಾಗಿ ದುಡಿಯುವರಿಗೆ ಹಾಕುವೆ ಮತ

ಗ್ರಾಮಗಳ ಉದ್ದಾರಕ್ಕೆ ಶ್ರಮಿಸುವರಿಗೆ ನನ್ನ ಮತ

ಕಷ್ಟ ಸುಖಗಳಲ್ಲಿ ಜೊತೆಯಾಗಿರುವವರಿಗೆ ನನ್ನ ಮತ

ಜನತೆಗೆ ಗೌರವನೀಡಿ ಬೆರೆಯುವವರಿಗೆ ನನ್ನ ಮತ


ಬದಲಾವಣೆ ಬಯಸಿ ಅಭಿವೃದ್ಧಿ ಮಾಡುವವರನ್ನು

ಜನಹಿತ ಕಾರ್ಯ ಮಾಡುತ ಜನಕ್ಕೆ ಇಷ್ಟವಾದವರನ್ನು

ಜಾತಿ ಮತ ಪಂಥ ಎಂಬ ಕಟ್ಟುಪಾಡುಗಳಿಗೆ ಬೀಳದೆ

ಕೆಟ್ಟ ವ್ಯಕ್ತಿಗಳ ದಿಕ್ಕರಿಸಿ ಒಳ್ಳೆಯವರನ್ನು ಗೆಲ್ಲಿಸೋಣ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ







ಅತ್ತೆ ಹನಿಗವನ ೨೫/೧೨/೨೦೨೦

 ಹನಿಗವನಗಳ ಶೀರ್ಷಿಕೆ

"ಅತ್ತೆ"


               (೧)

ಸೊಸೆಯಾಗಿ ಮನೆ ಸೇರಿ 

ಮಕ್ಕಳಾದ ಮೇಲೆ ಬೆಳೆಸಿ

ದೊಡ್ಡವರ ಮಾಡಿ ಮದುವೆ

ಮಾಡಲು ಸೊಸೆಯಿಂದ 

ಅತ್ತೆಯಾಗಿ ಮಗನ ಮಡದಿಗೆ

ತಾಯಿಯಾಗುವ ಆಸೆಯಿದ್ದರೂ

ತನ್ನ ಅತ್ತೆಯ ನೆನೆದು ತಾನು

ತನ್ನ ವರಸೆಯ ತೋರುವಳು.


                (೨)

ಅತ್ತೆ ಹೇಳುವಳು ಅಳಿಯ ನೀ 

ನನ್ನ ಮಗನಾಗಿ ಬಂದಂತೆ ಬಂದು

ಮಗಳನ್ನು ಚೆನ್ನಾಗಿ ನೋಡಿಕೊಳ್ಳು

ಎಂದು ತಿಳಿಸಲು ಗಂಡನನ್ನೆ ತಾನು

ಹೇಳಿದಂತೆ ಕೇಳುವ ಪರಿಯನು

ಅರುಹಿ ಮಗಳ ಕೈಗೊಂಬೆಯಾಗಿ

ಬಾಳುವ ಅಳಿಯನ ಗೋಳು

ಕೇಳೋರ್ಯಾರು ಮನುಜ.


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ




ನಾರಿ ಹನಿಗವನ ೨೪/೧೨/೨೦೨೦

 ಹನಿಗವನಗಳ ಶೀರ್ಷಿಕೆ

*"ನಾರಿ"*


          ‌ (೧)

ಇಂದಿನ ನಾರಿಯರಿಗೆ ಸೀರೆಯ

ನಿರಿಗೆಯು ಸರಿಮಾಡುಡಲು

ಬಾರದೇ ಹುಡುಗರಂತೆ ಬಟ್ಟೆ

ತೊಟ್ಟು ನಲಿದಿಹರು ಚಂದಾಗಿ

ಕಾಣುವೆವು ಎಂಬಂತೆ ಆಂಗ್ಲರ

ಸೋಗಿಗೆ ಒಳಗಾಗಿ ಗಂಡು ಹೆಣ್ಣು

ಯಾವುದೆಂದು ತಿಳಿಯದೆ ಜನರು

ಪರದಾಡೋ ಕಾಲವು ಬಂದಿಹದು.


                   (೨)

ನಾರಿಯರು ಒಲಿದು ಬಾಳಿದರೆ

ಸರ್ವಸ್ವವ ನಮಗೆ ಅರ್ಪಿಸುವರು

ಅದೇ ತಿರುಗಿ ಬಿದ್ದರೆ ಗಂಡಸುಕಚ್ಚೆ 

ಕೈಯಲ್ಲಿ ಹಿಡಿದು ದಿಕ್ಕು ದೆಸೆ ಕಾಣದೆ 

ಓಡಿ ಹೋಗುವ ಸಮಯ ಬಂದೆ 

ಬರುವುದು ಅದಕ್ಕೆ ಒಲಿದರೆ ನಾರಿ 

ಮುನಿದರೆ ಮಾರಿ ಎಂದಿಹರು ತಿಳಿದ 

ಜಾಣರು ಹೊಂದಿಕೊಂಡು ಬಾಳೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*




ಚಳಿಗಾಲದ ಚಳಿ ಚಳಿ ....ಕವನ ೨೪/೧೨/೨೦೨೦

 ಕವನದ ಶೀರ್ಷಿಕೆ

"ಚಳಿಗಾಲದ ಚಳಿ ಚಳಿ...."


ಚಳಿಗಾಲವು ಬಂದೈತೆ ತಂಗಾಳಿಯು ಬೀಸೈತೆ

ಹುಡುಕುವೆವು ಬೆಚ್ಚನೆಯ ಉಡುಪುಗಳ ||ಪ||


ಮನೆಯೊಳಗಿನ ಮಕ್ಕಳು ಉಡುಪುಗಳ ತೊಟ್ಟು

ಅಂದು ಚಂದದಿ ಕಾಣುವರು ಗೊಂಬೆಯ್ಹಾಂಗೆ 

ಸಂಭ್ರಮದಿ ನಲಿಯುವರು ತಾವೆಲ್ಲ ಮೈಮರೆತು

ಅಮ್ಮ ಕರೆದಾಗ ಆಟ ಬಿಟ್ಟು ಓಡೋಡಿ ಬರುವರು ||೧||


ಹಿರಿಯರು ಕಿರಿಯರು ಎಲ್ಲಾರು ಸೇರಿ ಒಟ್ಟಾಗಿ

ಕೂಡುವರು ಚಳೆಗಂಜಿ ಬೆಚ್ಚನೆಯ ಬಟ್ಟೆಗಳುಟ್ಟು

ಬೆಳಗಾಗಿ ಬಾನಿನಲಿ ಸೂರ್ಯನು ಮೂಡಲು

ತಂಡಿಯು ಬಿಡದು ನಗುನಗುತಾ ಹೊರಗೆ ಬಾರಣ್ಣ ||೨||


ಗಡಗಡ ನಡುಗುವ ಚಳಿಗಂಜಿ ನಾವು ಹಾಸಿಗೆಯ

ಜಗ್ಗಿ ಜಗ್ಗಿ ಎಳೆದು ಹೊದ್ದುಕೊಂಡು ಮಲಗುವೆವು

ಚಳಿ ಚಳಿಯು ಬಿಟ್ಟಾಗ ಬೆಚ್ಚನೆಯ ಮನೆಯಿರಲು 

ಬಿಸಿ ಬಿಸಿಯ ಚಹಾ ಸಿಗಲು ಆನಂದವೋ ಆನಂದ ||೩||


ಸಂಜೆಯ ಹೊತ್ತಿಗೆ ಸರಿಯಾಗಿ ಮನೆಸೇರೊ ನೀನು

ಅನುದಿನವು ಉಂಡಾಗ ಬೇಗ ಬಿಸಿಯೂಟ ಸಿಕ್ಕರೆ 

ಸವಿರುಚಿಯು ಹೆಚ್ಚುವುದು ದೇಹಕ್ಕೂ ಒಳಿತಾಗಿ

ಮೈಮನವು ಉಲ್ಲಾಸದಿ ಒಳಗೊಳಗೆ ಪುಳಕಿತವು ||೪||


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಯರಗೋಳ ತಾ.ಜಿ. ಯಾದಗಿರಿ




ಗುಂಡ ಚುಟುಕು ೨೩/೧೨/೨೦೨೦

 ಚುಟುಕುಗಳ ಶೀರ್ಷಿಕೆ

*ನಮ್ಮ ಗುಂಡ*


ಜಾಣ ವಿದ್ಯಾರ್ಥಿಗೆ ಪುಸ್ತಕ ಜ್ಞಾನ

ಹಿಂದಿನ ಬೆಂಚಿನ ಗುಂಡನಿಗೆ

ಸಾಮಾಜಿಕ ಜ್ಞಾನ ವಿದ್ಯೆಯಲಿ

ಮುಂದಿಲ್ಲದಿದ್ದರೂ ಜೀವನದಲ್ಲಿ

ಅವನೆ ಮುಂದೆ ಇರುವವನು

ನಮ್ಮ ಗುಂಡ ಇಂತವರೇ ಬಹಳ


ರಚನೆ

ಯಗುಮಾಶ

ಶ್ರೀ ಶರಣಬಸ್ಸಪ್ಪ ಎಂ ಗುಳೇದ

ಬನ್ನಿ ಗೆಳೆಯರೇ ಶಾಲೆಗೆ ಹೋಗೋಣ ಕವನ ೦೩/೦೧/೨೦೨೧

 ಬನ್ನಿ ಗೆಳೆಯರೇ ಶಾಲೆಗೆ ಹೋಗೋಣ ಕವನ

ದಿನಾಂಕ : ೦೩/೦೧/೨೦೨೧ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ


ಬನ್ನಿ ಗೆಳೆಯರೇ ಶಾಲೆಗೆ ಹೋಗೋಣ ಕವನ

ದಿನಾಂಕ : ೦೩/೦೧/೨೦೨೧ ರಂದು ಕಡಲವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಕವನ



ಜಾತ್ಯಾತೀತತೆ ಕವನ ಮತ್ತು ತಾಯೇ ಭುವನೇಶ್ವರಿ ಕವನ ೩೧/೧೨/೨೦೨೦

 ಜಾತ್ಯಾತೀತತೆ ಕವನ

ದಿನಾಂಕ : ೩೧/೧೨/೨೦೨೦ ರಂದು ಯಾದಗಿರಿ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಕವನ


ತಾಯೇ ಭುವನೇಶ್ವರಿ ಕವನ

ದಿನಾಂಕ : ೩೧/೧೨/೨೦೨೦ ರಂದು ಹಸಿರು ಕ್ರಾಂತಿ ಪತ್ರಿಕೆಯಲ್ಲಿ ಪ್ರಕಟವಾದ ಕವನ





ಧನಿಕರ ದೌರ್ಜನ್ಯ ಕವನ 30/12/2020

 ಧನಿಕರ ದೌರ್ಜನ್ಯ ಕವನ

ದಿನಾಂಕ : ೩೦/೧೨/೨೦೨೦ ರಂದು ಧನಿಕರ ದೌರ್ಜನ್ಯ ಕವನ ಮತ್ತೊಮ್ಮೆ ಪ್ರಕಟವಾಗಿದೆ.



Videos