ಕವನದ ಶೀರ್ಷಿಕೆ
*ಧರಣಿ ಮಂಡಲ ಮಧ್ಯದೊಳಗೆ*
ಇಳೆಯ ಮೇಲೆ ಗೆಳೆಯ ಸಳಸಳ ಹರಿವ
ಹಳ್ಳ ಕೊಳ್ಳ ಬಳ್ಳಿ ತಿಳಿ ತಿಳಿ ಹೂರಾಶಿ
ಮನಸೆಳೆಯುವ ತಳತಳ ಬಿಳಿಹೊಳೆ
ಬಣ್ಣದ ಜುಳುಜುಳು ಹರಿಯುವ ನದಿ
ಭುವಿಯ ಮೇಲಣ ಸ್ವರ್ಗ ನಿಸರ್ಗ
ಸೌಂದರ್ಯ ಮನಕೆ ಮುದ ನೀಡುವ
ಕಲರವ ನೀಡುವ ಪಕ್ಷಿ ಪ್ರಾಣಿಗಳು
ಸಡಗರದಿ ಮೆರೆವ ಜಲಚರಗಳು
ತಿರೆಯಲಿ ಪಾವನ ಕ್ಷೇತ್ರಗಳ ಗೂಡು
ಭವ್ಯ ಭಾರತದ ಪುಣ್ಯ ಭೂಮಿಯಲ್ಲಿ
ದಿವ್ಯ ದರ್ಶನ ನೀಡುತ ಮಾನವನಿಗೆ
ಮಾರ್ಗದರ್ಶನ ಮಾಡುವ ಮಠಗಳು
ಧರೆಯ ಮೇಲೆ ನಿನಗೆ ಉಲ್ಲಾಸದಿ ಜೀವನ
ಸಾಗಿಸಲು ಸಕಲ ಸೌಭಾಗ್ಯವು ಧರಣಿ
ಮಂಡಲ ಮಧ್ಯದೊಳಗೆ ಇದೆ ಅದನರಿತು
ಬಾಳುತ ನೈಸರ್ಗಿಕ ಸಂಪತ್ತು ಕಾಪಾಡು ಮಾನವ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
🙏 *೧೭೧ ನೇ ಕವಿಗೋಷ್ಠಿ*
✍️ *ಬರಹಗಾರರ ಬಳಗ ರಾಜ್ಯ* *ಘಟಕ*
*ಹೂವಿನಹಡಗಲಿ*
🌹 *ದಿನಾಂಕ-೨೬.೦೯.೨೦೨೦*
🌸 *ವಾರ-ಶನಿವಾರ*
🌷 *ವಿಷಯ-ಧರಣಿ*
🌻 *ನಿರ್ವಹಣೆ-ಕು ಉದಯ ಬಡಿಗೇರ*
೧. ಕವಿತೆ ೧೬ ರಿಂದ ೨೦ ಸಾಲಿರಲಿ
೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)
೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*
೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ
೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ
*ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
🙏 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment