Friday, September 11, 2020

ಸ್ವರಚಿತ ಕವನ ೧೧/೦೯/೨೦೨೦

 ಕವನದ ಶೀರ್ಷಿಕೆ

"ತಂತ್ರಜ್ಞಾನದ ಆವಿಷ್ಕಾರ"


ತಂತ್ರಜ್ಞಾನದ ಆವಿಷ್ಕಾರಗಳು

ಕಲ್ಪನೆಗೆ ನಿಲುಕದ ಹಾಗೆ ಬೆಳೆದಿದೆ

ಪುರಾಣಗ್ರಂಥಗಳಲಿ ಕೇಳಿದ್ದು ಜನ

ಅಶರೀರವಾಣಿ ನುಡಿವುದು ಅಂತ

ಆ ಸ್ಥಾನ ಮೋಬೈಲ್ ತುಂಬಿದೆ


ಮಹಾಭಾರತದ ಸಂಜಯ 

ಮನೆಯಲ್ಲಿ ಕುಳಿತು ರಣರಂಗದಲ್ಲಿ

ನಡೆವ ಯುದ್ದದ ಬಗ್ಗೆ ಮಾಹಿತಿ

ನೀಡುತ್ತಿದ್ದದ್ದು ಕೇಳಿ ನಮಗೆ ಅಚ್ಚರಿ

ಆ ಜಾಗದಲ್ಲಿ ಇಂದು ಉಪಗ್ರಹ ಇಲ್ಲವೇ


ಪುಷ್ಪಕ ವಿಮಾನದಲ್ಲಿ ರಾವಣ

ಸೀತೆಯನ್ನು ಅಪಹರಣ ಮಾಡಿದ

ಎಂದು ಹೇಳಿದರೆ ಅದ ಕೇಳಿದ

ಜನ ಗರಬಡಿದವಂತಾಗುತ್ತಿರಲಿಲ್ಲವೇ

ಈಗ ವಿಮಾನ, ರಾಕೆಟ್ ನೋಡಿ ನಿಜ ಅನಿಸುತ್ತೆ


ಅದೆಲ್ಲಾ ಏನು ನಮ್ಮ ಮನೆಯಲ್ಲಿ

ಬಟನ್ ಹಾಕಿದರೆ ಸಾಕು ಒತ್ತಿ 

ಉರಿಯುವ ಬುರುಡೆ ಬಲ್ಬು

ಗಿರಗಿರ ತಿರಗೋ ಪಂಕ, ದೂರದರ್ಶನ ಇತ್ಯಾದಿ

ಅದಕ್ಕೆಲ್ಲಾ  ವಿದ್ಯುತ್ ಇದಿರದೆ ಕೆಲಸವಿಲ್ಲ



ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


🌸 *೧೫೬ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಶುಕ್ರವಾರ*


🌸 *ದಿನಾಂಕ-೧೧.೦೯.೨೦೨೦*


🌹 *ವಿಷಯ-ನಿಮಗಿಷ್ಟವಾದ ವಿಷಯ* 


🍀 *ನಿರ್ವಹಣೆ-ಶ್ರೀ ಗಿರೀಶ ಪೂಜಾರ* 


೧.ಕವಿತೆಯು ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ

೩.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ

೪.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*

No comments:

Post a Comment

Videos