ಕವನದ ಶೀರ್ಷಿಕೆ
*ಮಂಗಳ ಸೂತ್ರ*
ಕರಿಮಣಿ ತಾಳಿಗೆ ಬೆಲೆ ಕೊಡುವ ನಾಡು ನಮ್ಮದು
ಕರದಲಿ ಬಳೆ,ಕಾಲುಂಗುರ,ಕುಂಕುಮ,ಹೂ ಮುಡಿದ
ಸಿರಿ ಸೊಬಗು ನೋಡಲು ಕಣ್ಣೆರಡು ಸಾಲದು
ಭಾರತೀಯ ನಾರಿಯ ಅರಿಯಲು ಇದೆ ಸಾಕು
ಗಂಡನೇ ದೇವರೆಂದು ಭಾವಿಸಿ ನಡೆಯುವರು
ಹೆಂಡತಿಗೆ ಹೊಡೆದು ಬಡಿದರು ಸಹಿಸುವಳು
ಸಡಗರದಿ ಸಂಭ್ರಮಿಸುವಳು ಮಕ್ಕಳ ಪ್ರೀತಿಗೆ
ಗಡಿಯಾರದಂತೆ ಸದಾ ದುಡಿವಳು ಮನೆಗಾಗಿ
ನಯ ವಿನಯದಿ ನಡೆಯುವಳು ಹಿರಿಯರಲಿ
ಕಾಯ,ವಾಚ,ಮನಸ ಮಮತೆಯನು ನೀಡುತ
ಸಂಯಮದಿಂದ ಇನಿಯನ ಮಾತ ಕೇಳುವಳು
ಕಾರ್ಯ ಸಾಧನೆಗೆ ಸದಾ ಸಲಹೆ ನೀಡುವಳು
ಇದ್ದುದರಲ್ಲೇ ತೃಪ್ತಿಯ ಜೀವನ ನಡೆಸುತ
ಬದುಕಿನ ಬಂಡಿ ಸುಗಮವಾಗಿ ಸಾಗುವಂತೆ
ಸದಾ ತನ್ನ ಮಂಗಳ ಸೂತ್ರ ಗಟ್ಟಿಯಾಗಿರಲೆಂದು
ಬಂಧು ಬಾಂಧವರ ಏಳ್ಗೆಗೆ ಬೇಡುವಳು ದೇವರಿಗೆ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
🙏 *೧೭೦ ನೇ ಕವಿಗೋಷ್ಠಿ*
✍️ *ಬರಹಗಾರರ ಬಳಗ ರಾಜ್ಯ* *ಘಟಕ*
*ಹೂವಿನಹಡಗಲಿ*
🌹 *ದಿನಾಂಕ-೨೫.೦೯.೨೦೨೦*
🌸 *ವಾರ-ಶುಕ್ರವಾರ*
🌷 *ವಿಷಯ-ಮಂಗಳ ಸೂತ್ರ*
🌻 *ನಿರ್ವಹಣೆ-ಶ್ರೀ ಸೀಗೇಹಳ್ಳಿ ಮುನಿರಾಜು*
೧. ಕವಿತೆ ೧೬ ರಿಂದ ೨೦ ಸಾಲಿರಲಿ
೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)
೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*
೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ
೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ
*ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
🙏 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment