Tuesday, September 29, 2020

ಸ್ವರಚಿತ ಕವನ ೨೯/೦೯/೨೦೨೦

 ಕವನದ ಶೀರ್ಷಿಕೆ

*ಮಧುರ ಬಾಂಧವ್ಯ*


ದುಡ್ಡು ಕೊಟ್ಟು ಬೇಕಾದ್ದು ಪಡೆಯಬಹುದು

ಬಾಂಧವ್ಯಕೆ ಬೆಲೆ ಕಟ್ಟಲು ಸಾಧ್ಯವಿಲ್ಲ

ತಂದೆ ತಾಯಿಯ ಪ್ರೀತಿ,ವಾತ್ಸಲ್ಯ,ಮಮತೆ

ಮಧುರ ಬಾಂಧವ್ಯದ ಮೌಲ್ಯ ತಿಳಿಯಲಾದಿತೆ


ಹಿತ ಮಿತವಾದ ಬುದ್ಧಿವಾದ ಹೇಳಿವರು

ಅತೀ ಕಾಳಜಿಯ ಸಂಕೇತ ಎಂದು ಗೊತ್ತಾಗದು

ರಾತ್ರಿ ಹತ್ತಾದರೂ ಸರಿಯೇ ಊಟ ಮಾಡದೆ

ಕಾತುರದಿ ಕಾಯುವರು ಮಕ್ಕಳು ಬರುವದನು


ಕಾಣದ ದೇವರಿಗೆ ಹರಕೆ ಹೊತ್ತು ಬೇಡಿದ ನಿಮಗೆ

ಕ್ಷಣ ಕಾಲವು ತೊಂದರೆ ಆಗದಂತೆ ಬಯಸುವರು

ದಣಿವರಿಯದಂತೆ ನೋಡಿಕೊಂಡಿರುವರು ನಿಮ್ಮನು

ಬಾಣದಂತೆ ಅರಿತ ಮಾತನಾಡಿ ನೊಯ್ಸದಿರಿ ಅವರನು


ನಮಗಾಗಿ ದುಡಿದಿಹರು ಹಗಲು ಇರಳೆನ್ನದೆ ನಾವು

ಗಮನಿಸಬೇಕು ಹಿರಿಯರ ಯೋಗಕ್ಷೇಮವನು

ಸಮತೆಯಿಂದ ಆ‌ಲಿಸಬೇಕು ಮಾತುಗಳನು ಅವೇ

ಚಿಮ್ಮಿಸುವವು ಮಧುರ ಬಾಂಧವ್ಯದ ಬೆಸುಗೆಯನು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ||ಜಿ|| ಯಾದಗಿರಿ



🙏 *೧೭೩ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೨೯.೦೯.೨೦೨೦* 


🌸 *ವಾರ-ಮಂಗಳವಾರ* 


🌷 *ವಿಷಯ-ಭಾಂಧವ್ಯ* 


🌻 *ನಿರ್ವಹಣೆ-ಶ್ರೀಮತಿ ಚೈತ್ರ ವಿ ಮಾಲವಿ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ 


೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*









No comments:

Post a Comment

Videos