Monday, September 7, 2020

ಸ್ವರಚಿತ ಕವನ ೦೭/೦೯/೨೦೨೦

*೧೫೧ನೇ ಕವಿಗೋಷ್ಠಿ*


*ವಿಷಯ - ಅಲಂಕೃತ ಪ್ರಕಾರ*


*ಕವನದ ಶೀರ್ಷಿಕೆ *

"ವಿದ್ಯಾಗಮ"


ಕಲಿಯುಗ ಕಾಣದ ಕಲ್ಪನೆ ಇಲ್ಲದನು ಕಂಡೆವು 

ಕೈ ಕೈಹಿಡಿದು ಕಲಿಯೋದು ಬಿಟ್ಟು ಕಲಿಯಲು

ಮುಖಗವಿಸು ಮುಖ ಮೂಗು ಮುಚ್ಚಿಕೊಂಡು 

ಕೈಯನ್ನು ಕಾಲಕಾಲಕ್ಕೆ ತೊಳೆದು ಕಲಿಯಲು

ಪ್ರತಿದಿನವು ವಿದ್ಯಾಗಮ ಕೇಂದ್ರಕೆ ಹೋಗುತ್ತಿದ್ದೇವೆ


ನಮ್ಮ ಊರಿನ ದೊಡ್ಡ ದೊಡ್ಡ ಮರಗಳು

ದೇವಸ್ಥಾನದ ಬಯಲು ಬಯಲೆಲ್ಲವೂ ಶಾಲೆಗಳಾಗಿ

ಮಕ್ಕಳನು ಅಂತರದಿ ಗುಂಪು ಗುಂಪುಗಳಾಗಿ ಮಾಡಿ 

ದಿನ ದಿನವು ದಯೆ,ಪ್ರೀತಿಯಿಂದ ಕಲಿಸುವಂತ

ಗುರುಗಳು ಗುರುಮಾತೆಯರ ಧೈರ್ಯವು ನೋಡಾ


ಮೈದಾನದಿ ಅನ್ದ ಚಂನ್ದದಿ ಒನ್ದಾಗಿ ಸ್ವಚ್ಛನ್ದದಿ

ಆಟ ಆಡ್ಕೊನ್ಡು ಗುಮ್ಪು ಗುಮ್ಪಾಗಿ ಸನ್ತಸದಿ

ಆಡ್ದೆ ಅನ್ತರ ಅನ್ತರವಾಗಿ ಕುನ್ತು ನೆಮ್ದಿ ಇಲ್ದೆ

ಮನ್ದಲ್ಲೆ ಮರ್ಗತಾ ಗೆಳ್ತೆರ ಸನ್ಗಡ ಸೇರ್ದೆ

ರಜೆಯ ಮಜಾ ಅನ್ಭೋಸದನ್ತೆ ಮಾಡ್ತು ಕರೋನಾ


ಅಕ್ಷರಗಳ ಕಲಿಯುತ ಹಾಡು ಹಾಡುವುದು

ಗೆಳೆಯರ ನೆನಪಿನ ಮರೆವು ಮರೆಯಾಗದಂತೆ

ಕಳಬೇಡ ಎಂಬುದು ಕಳೆಯದಂತೆ ಜತನದಿ ಕಾಪಾಡುತ

ಜಾಣನಾಗುತ ಕಲಿಕೆಯನು ಕಲಿಯಂತೆ ಕಲಿತು ಧೈರ್ಯದಿ

ಅರಿ ಎಂಬ ಕರೋನನ ಅರಿತು ಬಾಳುವುದ ಕಲಿಯೋಣ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಸಾ||ಯರಗೋಳ ತಾ||ಜಿ|| ಯಾದಗಿರಿ*



    

No comments:

Post a Comment

Videos