Tuesday, September 8, 2020

ಸ್ವರಚಿತ ಕವನ ೦೮/೦೯/೨೦೨೦

 ಕವನದ ಶೀರ್ಷಿಕೆ

"ಕರೋನಾ ಕಾಲದ ಕಲಿಕೆ"


ಕಿರಿಯರಿಂದ ಹಿರಿಯರವರೆಗೆ ಮನೆಯಲ್ಲೇ ಇದ್ದು 

ಮಡದಿ ಮಕ್ಕಳ ಕಡೆಗೆ ಯಜಮಾನನ ಗಮನ

ಚಿಕ್ಕವರು ಟೀವಿ ನೋಡಿದರೆ ದೊಡ್ಡವರು ಮನೆಗೆ

ಅವಶ್ಯಕತೆ ಇರುವ ಯಾವುದನ್ನಾದರೂ ಮಾಡಿದರು


ಹಿರಿಯ ಜೀವಗಳು ಮಕ್ಕಳಿಗೆ ಕಥೆ ಹೇಳಿದರು

ಗೃಹಿಣಿಯರು ಮನೆಯ ಯೋಗಕ್ಷೇಮದ ಗಮನ

ಗಂಡಸರು ಕೈಯಲ್ಲಿ ಕಾಸು ಇಲ್ಲದೆ ಬದುಕುತ

ದುಂದುವೆಚ್ಚ ಮಾಡದೆ ಅಗತ್ಯ ವಸ್ತುಗಳ ಕೊಂಡರು


ಕಾರ್ಖಾನೆ ಕೆಲಸಗಾರರ ಸೇವೆ ಮನೆಯಿಂದಲೇ 

ಸರ್ಕಾರಿ ನೌಕರರು ಕರೋನ ಸ್ವಯಂ ಸೇವಕರಾದರು

ಆರೋಗ್ಯ ಕಾರ್ಯಕರ್ತರು ಎಡೆಬಿಡದೆ ಜೀವದ ಹಂಗು

ತೊರೆದು ಹೋರಾಡುತ ತಮ್ಮ ಸೇವೆ ಸಲ್ಲಿಸುತ್ತಿರುವರು


ಶಾಲಾ ಶಿಕ್ಷಕರು ಮಕ್ಕಳಿಗೆ ಅಂತರ್ಜಾಲ ಆಧಾರಿತ

ಶಿಕ್ಷಣದ ಕಡೆಗೆ ವಿದ್ಯಾರ್ಥಿಗಳ ಪ್ರೇರೆಪಿಸಿ ಮನೆಯಲ್ಲಿ

ಮಕ್ಕಳು ಕುಳಿತು ಚಂದನ ವಾಹಿನಿ ತರಗತಿ ವೀಡಿಯೊ

ನೋಡುತ ತರಗತಿಯ ಅನುಭವ ಪಡೆಯುವಂತಾಯಿತು


ಈಗ ದೇಶದೆಲ್ಲೆಡೆ ಸ್ವದೇಶಿ ನಿರ್ಮಿತ ಆಂದೋಲನದಲಿ

ಯುವಕರ ಮನವು ತಂತ್ರಜ್ಞಾನ ಬಳಕೆಯ ಮೂಲಕ

ಸ್ವದೇಶಿ ವಸ್ತುಗಳನ್ನೇ ಎತ್ತಿ ಹಿಡಿಯುವ ನಿಟ್ಟಿನಲಿ 

ಆಫ್ಗಳ ತೈಯಾರಿಸುತ ಭವ್ಯ ಭಾರತವ ಬೆಳೆಸುವರು


ರಚನೆ

ಯಗುಮಾಶ

*ಶರಣಬಸಪ್ಪ ಎಂ ಗುಳೇದ*


🌸 *೧೫೩ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

         *ಹೂವಿನಹಡಗಲಿ* 


🌼 *ವಾರ-ಮಂಗಳವಾರ* 


🌹 *ದಿನಾಂಕ-೦೮.೦೯.೨೦೨೦*


🌷 *ವಿಷಯ-ನಿಮಗಿಷ್ಟವಾದ* *ವಿಷಯ* 


🌻 *ನಿರ್ವಹಣೆ-ಶ್ರೀಮತಿ ಕಲಾಶ್ರೀ* *ಮ ಹಾದಿಮನಿ*


೧.ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

೨.ಕವಿತೆ ಹದಿನಾರರಿಂದ ಇಪ್ಪತ್ತು ಸಾಲುಗಳಿರಲಿ

೩.ರಾಜಕೀಯ ಸಮಾಜಕ್ಕೆವಿರೋಧಿ ಕವಿತೆಗಳು ಬೇಡ

೪.ಗೋಷ್ಠಿಯ ಮಧ್ಯೆ ಬೇರೆ ಕವಿತೆ ಬೇರೆ ವಿಷಯ ಹಾಕಬಾರದು


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*


No comments:

Post a Comment

Videos