Thursday, September 17, 2020

ಸ್ವರಚಿತ ಕವನ ೧೬/೦೯/೨೦೨೦

 ಕವನದ ಶೀರ್ಷಿಕೆ

*"ಗುಣವಂತ ಅಳಿಯ"*


ಇಂದಿನ ಯುವಕ ಮದುವೆಯಾಗಲು ಬೇಕು

ಒಳ್ಳೆಯ ಗುಣ,ನಡತೆ ಮತ್ತು ಸಚ್ಚಾರಿತ್ರ್ಯ ಸಾಕು

ಆಸ್ತಿ ಅಂತಸ್ತು ಇಲ್ಲದಿದ್ದರೂ ನಡೆಯುತ್ತದೆ

ಚಂದಾಗಿ ಸಂಸಾರ ಮಾಡಿಕೊಂಡು ಓದ್ರೆ ಸಾಕು


ಅಳಿಯನಿಗೆ ಕೆಟ್ಟ ಚಟಗಳಿರಬಾರದು

ಬೀಡಿ ಸೇದುತ ಸರಾಯಿ ಕುಡಿಯಬಾರದು

ಗುಣವರಿತು ಬಾಳುವೆ ಮಾಡೋದು ಕಲಿತು

ಸಜ್ಜನಾದರೆ ಸಾಕು ಹೆಡ್ಡನಾಗಿರಬಾರದು


ಬಡವನಾದರೂ ದುಡಿದು ತಿನ್ನಬೇಕು

ಕೆಟ್ಟವರ ಸಂಗ ಮಾಡದೆ ಇರಬೇಕು

ಗಳಿಸಿ ಇಡುವದನು ಮರೆಯಬಾರದು

ಮನೆ ಮನೆತನ ದೊಡ್ಡದಾಗಿರಬೇಕು 


ಧೈರ್ಯಶಾಲಿಯಾಗಿರಬೇಕೆಂದು ಬಯಸುವರು

ಚೆನ್ನಾಗಿ ನೋಡಿಕೊಳ್ಳಬೇಕು ಬಂದು-ಬಾಂಧವರ

ಹೆಂಡತಿಯ ಅನುಸರಿಸಿಕೊಂಡು ನಡೆಯಬೇಕು

ಒಟ್ಟಾರೆ ಗುಣವಂತ ಅಳಿಯನ ಬೇಡುವರು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*೧೬೧ನೇ ಗೋಷ್ಠಿ* 

       🌼🌼

 *ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ*

        🌸🌸

 *ದಿನಾಂಕ-೧೬.೦೯.೨೦೨೦*

        🌹🌹

   *ವಾರ-ಬುಧವಾರ*

        🌷🌷

     *ವಿಷಯ-ಗುಣ*

         🌻🌻

 *ನಿರ್ವಹಣೆ-ಶ್ರೀಹುಸೇನಪ್ಪ*

 *ಸಜ್ಯೋಲಿ*

         🙏🙏

   *ಪ್ರಕಾರ ರುಬಾಯಿ*


೧.ನಾಲ್ಕು ಸಾಲಿನ ರುಬಾಯಿ

    ೧.೨ ಮತ್ತು ೪ ನೇಸಾಲು 

    ಅಂತ್ಯಪ್ರಾಸವಿರುತ್ತದೆ.

    ೩ನೇ ಸಾಲು ಅಂತ್ಯಪ್ರಾಸ

    ಇರುವುದಿಲ್ಲ.

೨.ಮೂರು ಅಥವಾ ನಾಲ್ಕು 

    ರುಬಾಯಿ ಬರೆಯಿರಿ

೩.ಗೋಷ್ಠಿಯ ಮಧ್ಯೆ ಬೇರೆ ವಿಷಯ

    ಹಾಕಬಾರದು.

೪.ಸಮಯ ಮುಂಜಾನೆ 

    ಎಂಟರಿಂದ ಸಂಜೆ ಆರು


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*














 

No comments:

Post a Comment

Videos