Saturday, September 19, 2020

ಸ್ವರಚಿತ ಕವನ ೧೭/೦೯/೨೦೨೦

 ಕವನದ ಶೀರ್ಷಿಕೆ

*"ಅಂತರಂಗ"*


ಜೀವನದಲ್ಲಿ

ಅಪರಾಧಿ ಭಾವನೆ

ಇದ್ದಾಗ ತಮ್ಮ

ಅಂತರಂಗದ ಕದ

ತೆರೆಯುವದು ನೋಡಾ


ಸುಳ್ಳು ಮುಚ್ಚಲು

ಮೇಲ್ನೋಟಕ್ಕೆ ನಾಟಕ

ಮಾಡಬಹುದು

ಮನದ ಮುಂದಣದ

ಮಾಯೇ ಕಳಚವುದೇ


ದೇವರ ಮುಂದೆ

ನಿಂತು ಕೈಮುಗಿದರೆ

ಕಲ್ಮಶ ಗುಣ

ಕಳೆದು ಪರಿಶುದ್ಧ

ಭಾವನೆ ಮೂಡುವುದೆ


ಮನದ ಮಾತು

ಪರಮಾತ್ಮನ ಕಿವಿ

ತಲುಪವಂತೆ

ನಿಷ್ಠೆಯಿಂದ ಕೂಡಿದ

ನಿರ್ಮಲ ಭಕ್ತಿ ಬೇಕು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*೧೬೨ನೇ ಗೋಷ್ಠಿ* 

       🌼🌼

 *ಬರಹಗಾರರ ಬಳಗ ರಾಜ್ಯ ಘಟಕ* 

          *ಹೂವಿನಹಡಗಲಿ*

        🌸🌸

 *ದಿನಾಂಕ-೧೭.೦೯.೨೦೨೦*

        🌹🌹

   *ವಾರ-ಗುರುವಾರ*

        🌷🌷

     *ವಿಷಯ-ಅಂತರಂಗ*

         🌻🌻

 *ನಿರ್ವಹಣೆ-ಶ್ರೀ ಚನ್ನಕೇಶವ ಪವಾರ*

         🙏🙏

   *ಟಂಕಾ ಪ್ರಕಾರ*


೧.ಟಂಕಾ ಐದು ಸಾಲಿನ ಪದ್ಯ

೨.ಮೊದಲಸಾಲು ೫ ಅಕ್ಷರ

    ಎರಡನೇ ಸಾಲು ೭ಅಕ್ಷರ

    ಮೂರನೇ ಸಾಲು ೫ ಅಕ್ಷರ

    ನಾಲ್ಕನೇ ಸಾಲು ೭ಅಕ್ಷರ

    ಐದನೇ ಸಾಲು ೭ ಅಕ್ಷರ

          ಒಟ್ಟು ೩೧ ಅಕ್ಷರಗಳ 

         ಒಂದು ಪದ್ಯ

೨.ಮೂರು ಅಥವಾ ನಾಲ್ಕು 

    ಟಂಕಾ ಬರೆಯಿರಿ

೩.ಗೋಷ್ಠಿಯ ಮಧ್ಯೆ ಬೇರೆ ವಿಷಯ

    ಹಾಕಬಾರದು.

೪.ಸಮಯ ಮುಂಜಾನೆ 

    ಎಂಟರಿಂದ ಸಂಜೆ ಆರು


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*



No comments:

Post a Comment

Videos