*೧೬೬ನೇ ಕವಿಗೋಷ್ಠಿ*
*ಮಕ್ಕಳ ಕಥೆ*
*ಸಿಂಚನಾಳ ದೃಢ ನಿರ್ಧಾರ*
ಒಂದು ಊರಿನಲ್ಲಿ ಒಬ್ಬ ರೈತನ ಮಗಳಿದ್ದಳು ಅವಳ ಹೆಸರು ಸಿಂಚನಾ ಆಕೆ ತಮ್ಮ ಹಳ್ಳಿಯ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದಳು ಶಾಲೆಯಲ್ಲಿಯೇ ಅತ್ಯಂತ ಜಾಣ ಹುಡುಗಿ ಆವಾಗಾವಾಗ ಶಾಲೆಗಳು ರಜೆ ಇದ್ದಾಗ ತಮ್ಮ ತಾಯಿ ತಂದೆಯರ ಜೊತೆಗೆ ಹೊಲಕ್ಕೆ ಹೋಗಿ ಸಹಾಯ ಮಾಡುತ್ತಿದ್ದಳು ಒಮ್ಮೆ ಅವರ ತಂದೆ ಹೊಲದಲ್ಲಿ ಬೆಳೆದ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುತ್ತಿದ್ದರು ಅದನ್ನು ನೋಡಿದ ಸಿಂಚನಾ ಅಪ್ಪಾ ನೀವು ಹೀಗೆ ಯಾವುದೇ ಸುರಕ್ಷತಾ ವಸ್ತುಗಳನ್ನು ಬಳಸದೆ ಹಾಗೆ ಸಿಂಪಡಿಸುತ್ತಿರುವಿರಲ್ಲಾ ನಿಮಗೆ ಏನಾದರೂ ತೊಂದರೆ ಆದ್ರೆ ಏನ್ಮಾಡೋದು ಎಂದು ಕೇಳಿಯೇ ಬಿಟ್ಟಳು.
ಆಗ ತಂದೆ ಏನ್ಮಾಡೋದು ಮಗಳೆ ಈ ಚಿಕ್ಕ ಹಳ್ಳಿಯಲ್ಲಿ ಎಲ್ಲಮ್ಮಾ ಅವೆಲ್ಲ ಸಿಗೋದು ನಮ್ಮ ಊರಲ್ಲಿ ಎಲ್ಲರೂ ಹೀಗೆಯೇ ತಾಯಿ ಸಿಂಪಡಿಸೋದು ಎಂದ ಮೊನ್ನೆ ಮೊನ್ನೆನೆ ಏನಾಯ್ತು ಅಂದ್ರೆ ನಮ್ಮ ಊರಲ್ಲಿ ಹೊಲದಲ್ಲಿ ತೊಗರಿ ಬೆಳೆಗೆ ಕೀಟನಾಶಕ ಸಿಂಪರಣೆ ಮಾಡುವಾಗ ಕೀಟನಾಶಕ ಮೈಗತ್ತಿ ಆಸ್ಪತ್ರೆಗೆ ಹೊಯ್ದ್ರು ಚಿಕಿತ್ಸೆ ಫಲಕಾರಿಯಾಗದೆ ಸತ್ತೋದ್ನಂತೆ ಕಣಮ್ಮಾ ಎಂದ ಆಗ ಆಕೆ ಹೌದಂತೆ ಅಪ್ಪ ನಮ್ಮ ಶಾಲೆಯಲ್ಲಿ ಟೀಚರ ಹೇಳ್ತಾರೆ ವರ್ಷಕ್ಕೆ ಸಾವಿರಾರು ರೈತರು ಹೀಗೆ ಸಾವನ್ನಪ್ಪುತ್ತಾರಂತೆ ಎಂದು ತಿಳಿಸಿದ್ದಾರೆ.ವಿಜ್ಞಾನ ತಂತ್ರಜ್ಞಾನ ಇಷ್ಟು ಮುಂದುವರೆದರೂ ಇದಕ್ಕೆ ಪರಿಹಾರ ಇಲ್ಲವೇ ಎಂದು ಮುಂದೆ ತಾನು ದೊಡ್ಡವಳಾದಮೇಲೆ ಇದಕ್ಕೆ ರೈತರಿಗೆ ಅನುಕೂಲ ಆಗುವಂತೆ ಏನಾದರೂ ಪರಿಹಾರ ಕಂಡುಹಿಡಿಯಲೇಬೇಕೆಂದು ಮನಸ್ಸಿನಲ್ಲೇ ಯೋಚಿಸಿದಳು.
ಒಂದು ನಾಲ್ಕೈದು ದಿನಗಳು ಆಗಿರಬಹುದು ಮನೆಯಲ್ಲಿ ತನ್ನ ಚಿಕ್ಕ ತಮ್ಮನಿಗೆ ಸಣ್ಣ ವಯಸ್ಸಿನ ಮಕ್ಕಳಿಗೆ ಮಾಡುವಂತ ಇಂಜೆಕ್ಷನ್ ಚುಚ್ಚಿ ಬಿಟ್ಟಿದ್ರೂ ಆಸ್ಪತ್ರೆಯವರು ಕೂಸು ಆ ನೋವು ಸಹಿಸದೇ ಅಳೋದೇ ಅಳೋದು ಅದು ನೋಡತೀರದು ಇಷ್ಟೊಂದು ಮುಂದುವರಿಯುತ್ತಿರುವ ನಮ್ಮ ದೇಶದಲ್ಲಿ ಹೀಗೆ ಚಿಕ್ಕ ಮಕ್ಕಳಿಗೆ ಇಂಜೆಕ್ಷನ್ ಮಾಡಿದಾಗ ಕೈಕಾಲು ಬಾವುಬರದಂತೆ ಮಾಡಲು ಸಾಧ್ಯವಿಲ್ಲವೇ ಎಂಬ ಯೋಚ್ನೆ ಕೂಡ ಸಿಂಚನನ ತಲೆಯಲ್ಲಿ ಕೂತಿತು.
ಅವರ ಪಕ್ಕದ ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಹಾವು ಕಚ್ಚಿ ಸತ್ತರೆಂಬ ಸುದ್ದಿ ಕೇಳಿದಳು ಇದನ್ನೂ ಕಿವಿಯಲ್ಲಿ ಹಾಕಿಕೊಂಡ ಸಿಂಚನಾನ ಮನದಲ್ಲಿ ವಿಚಾರ ಓಡುತ್ತಿತ್ತು ದೇಶದಲ್ಲಿ ಸಾವಿರಾರು ಜನ ಹೀಗೆ ಹಾವು ಕಚ್ಚಿ ಸಾಯುತ್ತಿರುವರು ಎಂಬ ಸುದ್ದಿ ಕೇಳಿರುವೆ ಇದಕ್ಕೂ ಇನ್ನೂ ಪರಿಹಾರ ಇಲ್ಲವೇ ಎಂದು ಯೋಚಿಸಿ ಒಂದು ಗಟ್ಟಿ ನಿರ್ಧಾರಕ್ಕೆ ಬಂದಳು ಏನಾದರೂ ಮಾಡಿ ನಾನು ದೊಡ್ಡವಳಾದ್ಮೇಲೆ ಕೀಟನಾಶಕ ಸಿಂಪರಣೆಯಿಂದ ಸಾಯುವದನ್ನು ತಪ್ಪಿಸಲು ಎಲ್ಲಾ ರೈತರಿಗೆ ಕಡಿಮೆ ಹಣದಲ್ಲಿ ಸಿಗುವಂತಹ ಯಾವುದಾದ್ರೂ ರೋಬೋಟ್ ಅಥವಾ ಆಕಾಶದ ಮೂಲಕ ಸಿಂಪಡಿಸೋ ಯಂತ್ರನೋ ಕಂಡುಹಿಡಿಯಬೇಕು ಮತ್ತು ಚಿಕ್ಕ ಮಕ್ಕಳಿಗೆ ಇಂಜೆಕ್ಷನ್ ಮಾಡಿದಾಗ ಬಾವುಬರದಂತೆ ಮಾಡುವ ವ್ಯವಸ್ಥೆ ಹಾಗೂ ಹಾವು ಕಚ್ಚಿ ಸಾಯದಂತೆ ಈಗಾಗಲೇ ಎಲ್ಲರೂ ಮೋಬೈಲ್ ಉಪಯೋಗಿಸುತ್ತಿರುವುದರಿಂದ ಹಾವು ಇನ್ನೂ ಒಂದು ಕಿಲೋ ಮೀಟರ್ ದೂರದಲ್ಲಿರುವಾಗಲೇ ರೈತರಿಗೆ ಮತ್ತು ಜನರಿಗೆ ಎಚ್ಚರಿಕೆ ನೀಡುವಂತೆ ಕೂಗಿ ಹೇಳುವ ಯ್ಯಾಪನ್ನು ಕಂಡುಹಿಡಿಯಬೇಕು ಎಂದು ಇದರ ಬಗ್ಗೆ ನನ್ನ ಗೆಳೆಯ ಗೆಳತಿಯರೊಂದಿಗೆ ಚರ್ಚಿಸಿ ಮುಂದಿನ ನಮ್ಮ ಗುರಿ ಈ ಎಲ್ಲಾ ವಿಷಯಗಳ ಪರಿಹರಿಸಲು ನಮ್ಮ ಜೀವನ ಮೀಸಲಿಡಬೇಕು ಇದಕ್ಕೆಲ್ಲಾ ನಮ್ಮ ಶಿಕ್ಷಕರ ಮಾರ್ಗದರ್ಶನ ಪಡೆದು ಮುನ್ನೆಡೆಯಬೇಕು ಎಂದು ಸಿಂಚನಾ ದೃಢವಾಗಿ ನಿರ್ಧರಿಸಿದಳು.
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
No comments:
Post a Comment