Monday, September 28, 2020

ಸ್ವರಚಿತ ಕವನ ೨೮/೦೯/೨೦೨೦

 ಕವನದ ಶೀರ್ಷಿಕೆ

*ದ್ರೋಹಿಗಳು*


ತಿನ್ನುವ ಅನ್ನ ಬೆಳೆಯುವದೆಲ್ಲೆಂದು ಗೊತ್ತಿಲ್ಲದ

ಕನಸಲೂ ಕೈಗೆ ಕೆಸರನು ಮೆತ್ತಿಕೊಳ್ಳದವರು

ಕನ್ನಡಿಯ ಕುಸುಮಕೆ(ಬೊಕ್ಕೆ) ಮುಗಿಬೀಳುವವರು

ಇನಿಯಳು ಮುಡಿಯುವ ಹೂ ಬೆಳೆದವರ ಕಾಣದವರು


ರುಚಿ ರುಚಿಯಾಗಿ ಸವಿಯಲು ತರಕಾರಿಗಳು

ಶುಚಿಯಾದ ಹಣ್ಣು- ಹಂಪಲು ನಾನಾತರದ

ಗೊಂಚಲು ಗೊಂಚಲು ಇರುವ ಹಣ್ಣುಗಳು

ಕೊಂಚವೂ ಕಡಿಮೆಯಾಗದಂತೆ ತಿನ್ನುವರು


ದನಕರು,ಕುರಿ,ಕೋಳಿಗಳನು ಸಾಕುವವರನು

ತನ್ನ ಹೊಲದಲ್ಲಿ ಹಗಲು ರಾತ್ರಿ ದುಡಿವವರನು

ಮನೆಗಳಲಿ ಗಂಡನಿಗೆ ಬುತ್ತಿ ಹೊಯ್ಯುವವರನು

ತನ್ನ ದೇಶಕ್ಕೆ ಅನ್ನ ನೀಡುವ ರೈತನ ಮರೆಯುವವರು


ಉಂಡ ಮನೆಗೆ ಎರಡು ಬಗೆಯುವ ದ್ರೋಹಿಗಳು

ಕಂಡದೆಲ್ಲ ಬೆಲೆಕೊಟ್ಟು ಕೊಳ್ಳುವವರೆ ಬಿಮ್ಮು ಬಿಟ್ಟು

ಉಂಡುಡಲು ಬೇಕಾಗುವ ಕಚ್ಚಾ ವಸ್ತು ಬೆಳೆಯುವ

ಗಂಡೆದೆಯ ರೈತರಿಗೆ ಬೆಂಬಲ ನೀಡಿದರೆ ಅಷ್ಟೇ ಸಾಕು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ.ಜಿ. ಯಾದಗಿರಿ




🙏 *೧೭೩ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


✍🏻✍🏻💐💐 *ಕವಿತಾ ಸಪ್ತಾಹ* 💐💐✍🏻✍🏻


🌹 *ದಿನಾಂಕ-೨೮.೦೯.೨೦೨೦* 


🌸 *ವಾರ-ಸೋಮವಾರ* 


🌷 *ವಿಷಯ-ದ್ರೋಹ* 


🌻 *ನಿರ್ವಹಣೆ-ಶ್ರೀ ಯೋಗೇಶ ಜಿ ಲಮಾಣಿ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*











No comments:

Post a Comment

Videos