Thursday, September 17, 2020

ಸ್ವರಚಿತ ಕವನ ೧೬/೦೯/೨೦೨೦

ಕವನದ ಶೀರ್ಷಿಕೆ

*"ಆಪರೇಷನ್ ಪೋಲೋ"*


ಹೈದರಾಬಾದಿನ ನಿಜಾಮನ ಕುತಂತ್ರದಿಂದ

ನಡೆದ ಪೋಲಿಸ್ ಕಾರ್ಯಾಚರಣೆ


ಜೈ ಜೈ ಎಂದು ಹೋರಾಡಿ ಮಡಿದರು

ನಮ್ಮ ಕಲ್ಯಾಣ ನಾಡಿನ ಜನರ

ಧೈರ್ಯ ಸಾಹಸವ ಮೆರೆದು ತಮ್ಮೆಲ್ಲರ

ಪ್ರಾಣವನೆ ಪಣಕ್ಕಿಟ್ಟು ಹೊರಾಡಿರುವರ


ಪಾಕಿಸ್ತಾನದಂತೆ ಸ್ವತಂತ್ರವಾಗಿರಲು ಬಯಸಿದನಲ್ಲಾ

ಬಯಸಿ ರಜಾಕಾರರೆಂಬ ಕೃರ ಸೈನ್ಯ ಸ್ಥಾಪಿಸಿದನಲ್ಲಾ

ಸ್ತ್ರೀಮಾನಭಂಗ,ದೌರ್ಜನ್ಯನಡೆಸಿ ಜನರ ಕಾಡಿದನಲ್ಲಾ

ಕೃರವಾಗಿ ಹಿಂದುಗಳನು ಹಿಂಸಿಸುತ ನಡೆದನಲ್ಲಾ


ಅಮಾಯಕ ಜನರ ಮೇಲೆ ದಾಳಿ ಮಾಡಿದರೋ

ಮಾನಿನಿಯರ ಮಾನಭಂಗ ಮಾಡುತ ನಡೆದಾರೋ 

ಬೆಳೆ ನಾಶ ಮಾಡುತ ಮನೆಲೂಟಿ ಮಾಡ್ಯಾರೋ

ಕೊಡಲಿ ಸುರಾಯಿ ಬಂದೂಕದಿಂದ ಜನರ ಕೊಂದಾರೋ


ನಿಜಾಮನ ದಬ್ಬಾಳಿಕೆಯನು ಸಹಿಸದೆ ಹೋದರಲ್ಲಾ

ಚಿತ್ರ ಹಿಂಸೆಗೆ ತಕ್ಕ ಪಾಠ ಕಲಿಸಲು ಕಾದು ಕುಳಿತರಲ್ಲಾ

ಊರ ಮುಖಂಡರು ಜನರೆಲ್ಲ ಸೇರಿ ಸಂಚು ಮಾಡೆರೆಲ್ಲಾ

ಕಲ್ಯಾಣ ನಾಡಿನ ಮುಖಂಡರೆಲ್ಲಾ ಸಿಂಹ ಸ್ವಪ್ನರಾದರಲ್ಲಾ


ಸರ್ದಾರ್ ಪಟೇಲರ ಪೋಲಿಸ್ ಕಾರ್ಯಾಚರಣೆಯಿಂದ

ಅತ್ತದರಿ ಇತ್ತ ಪುಲಿಯಂತಾಗಿ ಹೈದರಾಬಾದ ತೊರೆದು

ದಿಕ್ಕು ಕಾಣದೆ ಹೋರಾಡಿ ಮಡಿವೆನೆಂಬ ಬರದಲಿ ಬರೀ

ಸ್ವತಂತ್ರನಾಗಿರುವೆನೆಂದು ಬೀಗಿದ ನಿಜಾಮ ಆದ ಪರಾರಿ


ಪಟೇಲರ ದಿಟ್ಟ ನಿರ್ಧಾರದಿಂದ ಪಡೆಯಿತು

ಕರುನಾಡ ಕಲ್ಯಾಣ ಕರ್ನಾಟಕ  ಸ್ವಾತಂತ್ರ್ಯ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*








No comments:

Post a Comment

Videos