ಕವನದ ಶೀರ್ಷಿಕೆ
"ಅಸತ್ಯ"
(ಕಂದಪದ್ಯ)
ಬದುಕಲಿ ಮತ್ಸರ ತೊರೆದರೆ
ಜೀವನದಲಿ ಸಹ ಅಸತ್ಯ ಸುಳಿಯದು ನೋಡೋ
ಪ್ರೀತಿಯು ಅದನ್ನು ಗೆಲ್ಲಲು
ಸಹಕಾರವ ನೀಡುವುದನು ಕಾಣುವದು ಜಗತ್
ಜನಗಳ ನಂಬಿಕೆ ಗಳಿಸಲು
ಮನುಜಗೆ ಮರ್ಯಾದೆ ಸಿಗಲು ಸಂಸಾರದಲೂ
ಒಮ್ಮೊಮ್ಮೆ ಸುಳ್ಳು ಹೇಳುವ
ಸಂದರ್ಭ ಬರಬಹುದು ಕೆಲವು ಕಡೆಗೆ ಬಂದ್ರೂ
ಆಗಲು ಎದೆಗುಂದದೆ ಬರಿ
ಸುಳ್ಳುಗಳನು ಹೇಳದೆ ನಿಜವಾಗಿ ನಡೆದ ಸಂ
ಗತಿಗಳನು ತಿಳಿಸಿ ಅವರಲಿ
ನಂಬಿಕೆಯನು ಹುಟ್ಟುವಂತೆ ಮಾಡಿದರೂ ನಂ
ನಡೆನುಡಿಯು ಮೊದಲಿನಿಂದಲೆ
ನೋಡಿರುವುದರಿಂದ ಖಂಡಿತ ಅವರು ನಂಬ್ತಾ
ರೆಂದೋ ಸುಳ್ಳನು ಮುಚ್ಚಲು
ಅನೇಕ ಸುಳ್ಳಿನ ಕಥೆಗಳ ಕಟ್ಟುತ ನಡೆವರ್
ಅವರುಗಳು ಜೀವನದಲಿಯು
ನಂಬಿಕೆಯನು ಕಳೆದುಕೊಂಡು ವಿಶ್ವಾಸಿರದೇ
ಜಗದಲಿ ತಿರುಗುತ ನಡೆದರೆ
ಸುಳ್ಳಿನ ಸರದಾರರೆಂಬ ಹೆಸರನು ಪಡೆವರ್
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
*ಯರಗೋಳ ತಾ||ಜಿ|| ಯಾದಗಿರಿ*
ಕಂದ ಪದ್ಯದ ಛಂದೊ ನಿಯಮ
೧) ಇದು ನಾಲ್ಕು ಸಾಲಿನ ಪದ್ಯ ವಾಗಿದ್ದು ಮೊದಲು ಎರಡು ಸಾಲು ಮುಂದಿನ ಎರಡು ಸಾಲುಗಳು ಸಮವಾಗಿರುತ್ತದೆ
೨) ಒಂದು ಮತ್ತು ಮೂರನೇ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಮೂರು ಗಣಗಳು ಇರುತ್ತವೆ
೩) ಎರಡು ಮತ್ತು ನಾಲ್ಕನೆ ಸಾಲುಗಳು ಸಮಾನವಾಗಿದ್ದು ನಾಲ್ಕು ಮಾತ್ರೆಯ ಐದು ಗಣಗಳನ್ನು ಹೊಂದಿರುತ್ತವೆ
೪) ಪದ್ಯದ ಪೂರ್ವಾರ್ಧ ಮತ್ತು ಉತ್ತರಾರ್ಧದ ವಿಷಮ ಸ್ಥಾನಗಳಲ್ಲಿ ಅಂದರೆ ಸ್ಥಾನಗಳಲ್ಲಿ 1,3,5,7ನೇ ಸ್ಥಾನಗಳಲ್ಲಿ ಮಧ್ಯ ಗುರುವುಳ್ಳ ಗಣ(U _U) ಬರಬಾರದು
೫) ಆರನೆಯ ಸ್ಥಾನದಲ್ಲಿ ಮಧ್ಯ ಗುರುವುಳ್ಳ ಗಣ (U _U) ಅಥವಾ ನಾಲ್ಕು ಲಗು ಉಳ್ಳ ಗಣ (UUUU)ಇರಬೇಕು
೬) ಎಂಟನೆಯ ಸ್ಥಾನದಲ್ಲಿ ಎರಡು ಗುರುವುಳ್ಳ ಗಣ( _ _) ಅಥವಾ ಅಂತ್ಯ ಗುರುವುಳ್ಳ (UU _ _)ಗಣ ವಿರಬೇಕು
🌸 *೧೫೫ನೇ ಗೋಷ್ಠಿ*
🌻 *ಬರಹಗಾರರ ಬಳಗ ರಾಜ್ಯ* *ಘಟಕ*
*ಹೂವಿನಹಡಗಲಿ*
🌼 *ವಾರ-ಗುರುವಾರ*
🌸 *ದಿನಾಂಕ-೧೦.೦೯.೨೦೨೦*
🌹 *ವಿಷಯ-ಅಸತ್ಯ*
🍀 *ನಿರ್ವಹಣೆ-ಕು.ಲಕ್ಷ್ಮಿ ಮಾನಸ*
೧.ಕವಿತೆಯು ೧೬ ರಿಂದ ೨೦ ಸಾಲಿರಲಿ
೨.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ
೩.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ
೪.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment