ಕವನದ ಶೀರ್ಷಿಕೆ
*ಓ.... ಗಾಂಧಿ ತಾತಾ*
ಓ... ಗಾಂಧಿ ತಾತಾ ನೀವು ಜಗದ ಮನುಜರ
ಮನವ ಗೆದ್ದು ಮಹಾತ್ಮರಾಗಿ ಮೆರೆದಿರುವಿರಿ
ಸತ್ಯ,ಅಹಿಂಸೆ, ಸತ್ಯಾಗ್ರಹ ಎಂಬ ಅಸ್ತ್ರಗಳಿಗೆ
ಬ್ರಿಟೀಷರ ಗುಂಡುಗಳು ಅಂಜಿದವು ನಿಮ್ಮ ನಡೆಗೆ
ನೀವು ಎಂದೂ ಮರೆಯದ ಭಾರತ ರತ್ನ ತಾತಾ
ನೀವಾಡುವ ಮಾತು ಕೇಳಿ ಶಾಲಾ ಕಾಲೇಜುಗಳ
ತೊರೆದು ಭಾರತಾಂಬೆಯ ಸೇವೆಗೆ ಕಂಕಣ ಬದ್ಧರಾಗಿ
ಹೋರಾಡಿ ವೀರ ಮರಣ ಹೊಂದಿದವರ ಲೆಕ್ಕವಿಲ್ಲ
ದೇಶದಗಲಕ್ಕೂ ಸಂಚರಿಸಿ ನಾಡಿನಾದ್ಯಂತ
ದಶದಿಕ್ಕುಗಳಲ್ಲೂ ಸ್ವಾತಂತ್ರ್ಯ ಕಹಳೆಯನ್ನು
ಮೊಳಗಿಸುತ ಕಾಯಕ ನಿಷ್ಠೆಯ ಮಹತ್ವವ
ತಿಳಿಸಿ ಭವ್ಯ ಭಾರತದ ಕನಸು ಕಾಣಲು ಬಿಟ್ಟೀರಿ
ಯಾವ ವೈಭವ ಅಧಿಕಾರಕ್ಕೆ ಅಂಟಿಕೊಳ್ಳದೆ
ಸೇವಾಭಾವದಿ ದುಡಿದು ನಿಸ್ವಾರ್ಥ ಪ್ರೀತಿಯ ನೀಡಿ
ನೀವು ನುಡಿದಂತೆ ನಡೆದು ಮಾದರಿ ಪುರುಷರಾದಿರಿ
ಭಾವ ಅಂತರಂಗದಲ್ಲಿ ಮನೆಮಾಡಿ ಅಜರಾಮರಾದಿರಿ
ಓ....ತಾತಾ ನಿಮ್ಮ ಕಾರ್ಯ ಕ್ಷಮತೆ ನಮಗೆ ಪ್ರೇರಣೆ
ನಿಮ್ಮ ಆದರ್ಶ,ನಡೆ ನುಡಿ,ತಾಳ್ಮೆ ತಪಕೆ ಸಮ ತಾತಾ
ನಿಮ್ಮ ಜನ್ಮ ದಿನದ ಸಂಭ್ರಮ ಇಂದಿನ ಯುವಕರಿಗೆ
ಸಾಮರಸ್ಯದಿ ಜೀವನ ನಡೆಸಲು ನಿಮ್ಮ ಅಸ್ತ್ರ ಬೇಕು ತಾತಾ
ರಚನೆ
ಯಗುಮಾಶ
*ಶ್ರೀ ಶರಣಬಸ್ಸಪ್ಪ ಎಂ ಗುಳೇದ*
ಯರಗೋಳ ತಾ.ಜಿ. ಯಾದಗಿರಿ
🙏 *೧೭೩ ನೇ ಕವಿಗೋಷ್ಠಿ*
✍️ *ಬರಹಗಾರರ ಬಳಗ ರಾಜ್ಯ* *ಘಟಕ*
*ಹೂವಿನಹಡಗಲಿ*
✍🏻✍🏻💐💐 *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* 💐💐✍🏻✍🏻
🌹 *ದಿನಾಂಕ-೩೦.೦೯.೨೦೨೦*
🌸 *ವಾರ-ಬುಧುವಾರ*
🌷 *ವಿಷಯ-ಕಾಯಕ*
🌻 *ನಿರ್ವಹಣೆ-ಶ್ರೀಮತಿ ಸುನಿತಾ ಎಸ್ ಪಾಟೀಲ್*
೧. ಕವಿತೆ ೧೬ ರಿಂದ ೨೦ ಸಾಲಿರಲಿ
೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)
೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*
೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ
೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ
೬. ಕವಿತಾ ಸಪ್ತಾಹದ ೭ ಕವಿಗೋಷ್ಠಿಯಲ್ಲಿ ಭಾಗವಹಿಸಿದವರಿಗೆ ಮಾತ್ರ *ಅಭಿನಂದನಾ ಪತ್ರ* ವನ್ನು ನೀಡಿ ಗೌರವಿಸಲಾಗುವುದು.
೭. ನಿಮ್ಮ ಪೂರ್ಣಹೆಸರನ್ನು (ಶ್ರೀ, ಶ್ರೀಮತಿ ಅಥವಾ ಕು ) ಬಳಸಿ
೮. *ಡಾ ಎಸ್ ಪಿ ಬಿ ಕವಿತಾ ಸಪ್ತಾಹ* ಸ್ಪರ್ಧೆಗಾಗಿ ಅಂತ ಸೂಚಿಸಿ
*ಬನ್ನಿ*
*ಬರೆಯೋಣ*
*ಬರೆಸೋಣ*
*ಕಲಿಯೋಣ*
*ಕಲಿಸೋಣ*
🙏 *ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment