Monday, September 28, 2020

ಸ್ವರಚಿತ ಕವನ ೨೪/೦೯/೨೦೨೦

 ಕವನದ ಶೀರ್ಷಿಕೆ

*ಹಗಲು ಕಂಡ ಬಾವಿಗೆ ಇರುಳು ಬೀಳುವರಯ್ಯಾ*


ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ ಎಂದರೆ

ಸಾವಧಾನದಿಂದ ನೋಡಿಯು ಉಗಿವರಯ್ಯಾ

ದಂಡ ವಸೂಲಿ ಮಾಡಲಾಗುವದು ಎಂದು

ದೊಡ್ಡ ಅಕ್ಷರಗಳಲ್ಲಿ ಬರೆದರೂ ಬಿಡರಯ್ಯಾ


ಹೆಂಡತಿಗೆ ಅವಳ ತಂದೆ ತಾಯಿ ಇಬ್ಬರೂ ಪ್ರೀತಿ

ಗಂಡನ ತಾಯಿ ತಂದೆಯರು ಅನಾದಾರ

ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ ಕೃತಿಯಲಿ ತರದೆ

ಬೆಲ್ಲದಂತ ಮಾತಾಡಿ ನೀತಿಯ ಹೇಳುವರಯ್ಯಾ


ಮಕ್ಕಳು ಮರಿ ಎಂದು ಹಗಲಿರಳು ದುಡಿದು

ಚಿಕ್ಕಂದಿನಿಂದಲೂ ಬೇಡಿದನು ನೀಡಿ

ಓದಿಸಿ ವಿದ್ಯೆ ಬುದ್ಧಿಯ ಕಲಿಸಿ ಬೆಳಸಿದರು

ಅದನು ಮರೆತು ಅನಾಥಾಶ್ರಮಕ್ಕೆ ದಬ್ಬುವರಯ್ಯಾ


ಸಮಾಜದ ನೀತಿ ನಿಯಮಗಳ ಅರಿತರು ಲೆಕ್ಕಿಸದೆ

ಮಮತೆಯ ತೊರೆದ *ಜಾಣ ಕುರುಡರಣ್ಣ* ಇವರು

ಸಾಗುವ ಹಾದಿಗೆ ಬಿದ್ದ ಮುಳ್ಳು ತಗೆದು ನಡೆವುದನು ಬಿಟ್ಟು

ಹಗಲು ಕಂಡ ಬಾವಿಗೆ ಇರುಳು ಬೀಳುವರಯ್ಯಾ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ||ಜಿ|| ಯಾದಗಿರಿ

🙏 *೧೬೮ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೪.೦೯.೨೦೨೦* 


🌸 *ವಾರ-ಗುರುವಾರ* 


🌷 *ವಿಷಯ-ಜಾಣಕುರುಡುತನ* 


🌻 *ನಿರ್ವಹಣೆ-ಶ್ರೀ ಶ್ರೇಯಶ್ ಬಳೆ* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*










No comments:

Post a Comment

Videos