Monday, September 28, 2020

ಸ್ವರಚಿತ ಕವನ ೨೭/೦೯/೨೦೨೦


 *ವಿಷಯ: ಚಿತ್ರಕ್ಕೆ ತಕ್ಕ ಕವನ*

ಕವನದ ಶೀರ್ಷಿಕೆ

*ಅತ್ಯಾಚಾರ*


ಅಂದು ಮಹಿಳೆಯ ಗೌರವದ ಸಾಕ್ಷಾತ್ಕಾರ

ಇಂದು ನಡೆಯುತ್ತಿದೆ ಅವಳ ಅತ್ಯಾಚಾರ

ಅಂದು ಭೀಮನು ಮಾಡಿದ ಸಾಹಸ

ಅವನು ಹೆಂಡತಿಯ ಅಪಮಾನದ ಸೇಡಿಗಾಗಿ


ಇಂದು ನಡೆಯುತ್ತಿದೆ ಹೆಣ್ಣಿನ ವ್ಯಾಮೋಹಕ್ಕಾಗಿ

ಇಂದು ಕೀಚಕರ ನಾಡೆನ್ನುವ ಹಾಗೆ

ಸದನದಲ್ಲಿ ಗುಡುಗುತ್ತಿದೆ ಈ ಸುದ್ದಿ

ಆದರೆ ಮಾಡುತ್ತಿಲ್ಲ ಕಾನೂನು ಕಟ್ಟಳೆ


ಗದ್ದಲದ ನಡುವೆಯು ಅಟ್ಟಹಾಸದಿ ಮೆರೆಯುತ್ತಿದೆ

ಸದಾಭಿಮಾನದ ಜನ ಇಷ್ಟೇಕೆ ಆದರೂ ಕಠೀಣ

ತಂದೆ ತಾಯಿಯ ಸಂಬಂಧ ಅರಿಯದೆ 

ನಡೆಯುತ್ತಿದೆ ಅತ್ಯಾಚಾರ ಹಗಲಿರುಳು


ಅಕ್ಕ ತಂಗಿಯ ಭಾವನೆ ಬಿಟ್ಟು

ನಾಡಿನಲಿ ನಾಚಿಕೆಗೇಡು ಮೆರೆಯುತ್ತಿದೆ ಇಂದು

ಬರಲೆಂದು ಭಾವಿಸೋಣ ಕಠೀಣ ಕಾನೂನು

ಕರ್ಮವಂತರಿಗೆ ಸಿಗಲಿ ಗಲ್ಲು ಎಂದು.....!


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಸಹ ಶಿಕ್ಷಕರು

ಸರ್ವೋದಯ ಪ್ರೌಢ ಶಾಲೆ


🙏 *೧೭೧ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೭.೦೯.೨೦೨೦* 


🌸 *ವಾರ-ರವಿವಾರ* 


🌷 *ವಿಷಯ-ಚಿತ್ರಕಾವ್ಯ(ತಮಗೆ ಇಷ್ಟವಾದ ಚಿತ್ರಕ್ಕೆ)* 


🌻 *ನಿರ್ವಹಣೆ-ಶ್ರೀ ಮಹೇಶ ಎಸ್ ಹೆಚ್* 


೧. ಕವಿತೆ ೧೬ ರಿಂದ ೨೦ ಸಾಲಿರಲಿ


೨. ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ (ಹಾಕಿದವರು ತಕ್ಷಣವೇ ಡಿಲೀಟ್ ಮಾಡಿ ಇಲ್ಲಾ ಬಳಗದಿಂದ ಅವರನ್ನೇ ತಗೆಯಲಾಗುವುದು)


೩.ಸಮಯ *ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ*


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ದಯವಿಟ್ಟು ಸೇರಿಸಿ ಬರೆಯಿರಿ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*

No comments:

Post a Comment

Videos