Tuesday, September 15, 2020

ಸ್ವರಚಿತ ಕವನ ೧೫/೦೯/೨೦೨೦

 ಕವನದ ಶೀರ್ಷಿಕೆ

*"ವಿರಸ"*

(ಹನಿಗವಿತೆ)


                   ೧

ಯಾವಾಗಲೂ ಸರಸ-ವಿರಸವಿದ್ದರೇ

ಜೀವನದ ಮಜಾನೇ ಬೇರೆ

ನೋವು ನಲಿವುಗಳನ್ನು ನಮ್ಮವರ

ಸಲುವಾಗಿ ಅನುಭವಿಸೋ ಸೊಗಸೇ ಬೇರೆ


                   ೨

ಗಂಡ ಹೆಂಡಿರ ಜಗಳ ಗಂಧ

ತೀಡಿದಂಗ ಎನ್ನುವರು ಹಿರಿಯರು ವಿರಸವು

ಗಡಿಬಿಡಿಯ ಜೀವನದಲಿ ಅನುಭವಿಸಕ್ಕೆ

ಬಿಡುತ್ತಿಲ್ಲ ಸಂಬಂಧಗಳ ಸ್ವಾದಿಷ್ಟದ ಸಾರ


                     ೩

ಪರಮ ಪವಿತ್ರ ಪ್ರೇಮದಲಿ ಆಗಾಗ

ಗಿರಕಿ ಹೊಡೆಯುವದಿ ಈ ವಿರಸ

ಸರಳವಾಗಿ ಅದನ್ನು ತೆಗೆದುಕೊಂಡರೆ

ವಿರಸವನು ನಿರ್ಮಲ ಪ್ರೇಮವು ಗೆಲ್ಲುವುದು


                      ೪

ಸ್ನೇಹದ ಕಡಲಲ್ಲಿ ಇಣುಕಿ ನೋಡುವದು

ಇಹಪರಕ್ಕೂ ಬಿಡದೆ ಕಾಡುವುದು ಪರಸ್ಪರ

ಸಹಾಯ ಸಹಕಾರವೇ ಗೆಳೆತನದ ಬಂಧ ಗಟ್ಟಿಮಾಡಿ

ಸೌಹಾರ್ದತೆ ಒಡಮೂಡಿ ವಿರಸ ದೂರ ಮಾಡುವುದು


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


*✍️ಬರಹಗಾರರ ಬಳಗ ರಾಜ್ಯ ಘಟಕ* 

       *(ಹೂವಿನಹಡಗಲಿ)*

*---------------------------------*

   🌹 *೧೬೦ನೇ ಗೋಷ್ಠಿ*🌹

           🌼🌼🌼

        *ವಾರ-ಮಂಗಳವಾರ*

         💐💐💐 *ದಿನಾಂಕ-೧೫.೦೯.೨೦೨೦*

          🌺🌺🌺

*ವಿಷಯ - ವಿರಸ (ಹನಿಗವಿತೆ)* 

          🌷🌷🌷

 *ನಿರ್ವಹಣೆ - ಶ್ರೀ ಕೆ ಉದೇದಪ್ಪ ಕ್ಯಾದಿಗೆಹಾಳ್.* 

            🌻🌻🌻

 

         *ಬಳಗದ ನಿಯಮಗಳು*

೧). ೪ ಅಥವ ೫ ಹನಿಗವಿತೆ ಬರೆಯಿರಿ

೨)ಸಮಯ ಮುಂಜಾನೆ ಎಂಟರಿಂದ     

      ಆರರ ವರೆಗೆ.

೩)ನಿಮ್ಮ ಕವನಗಳನ್ನು ವಾಟ್ಸಪ್

    ಬರಹದಲ್ಲಿಯೇ ಹಾಕಬೇಕು.

೪)ಕವನದ ಕೊನೆಯಲ್ಲಿ ತಮ್ಮ

    ಹೆಸರನ್ನು ನಮೋದಿಸಿ.

೫)ಗೋಷ್ಠಿಯ ಮಧ್ಯೆ ಬೇರೆ ಕವನ

     ವಿಷಯ ಹಾಕಬಾರದು.

೬) ರಾಜಕೀಯ ಮತ್ತು ವ್ಯಕ್ತಿಗತ ಮತ್ತು

   ಸಾಮಾಜಿಕವಾಗಿ ತೊಂದರೆ ಆಗುವ

    ಕವಿತೆಗಳು ಬೇಡಾ.

೭) ಯಾವುದೇ ಕಾರಣಕ್ಕೂ ಬೇರೆ

   ಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ.

    ಮಾಡಿದರೆ, ಮತ್ತು ಇಲ್ಲಿಯ

    ನಿಯಮಗಳನ್ನು ಮುರಿದರೆ.

    ಬಳಗದಿಂದ ತೆಗೆಯಲಾಗುವುದು.


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*






No comments:

Post a Comment

Videos