Monday, September 7, 2020

ಸ್ವರಚಿತ ಕವನ ೦೬/೦೯/೨೦೨೦

*೧೫೧ನೇ ಕವಿಗೋಷ್ಠಿ*


*ವಿಷಯ - ಅಲಂಕೃತ ಪ್ರಕಾರ*


*ಕವನದ ಶೀರ್ಷಿಕೆ *

"ರೈತನ ಪಾಡು"


ಧರೆಯು ಇಂದು ಧನಿಕರ ಪಾಲಾಗುವ

ಕಾಲವು ಬಂದಿದೆ ಬದುಕಿನಲಿ ಬಡವನು

ಭುವಿಯು ಬೆಳೆಯದೆ ಬಾಳನು ಹಾಳು

ಮಾಡಿಕೊಂಡು ಕೈಯಲಿ ಕಾಸು ಇಲ್ಲದೆ

ಹಿಂದಿನಿಂದ ನೆಚ್ಚಿಬಂದ ಭುವಿ ಮಾರುತಿದ್ದಾನೆ


ಬೆಳೆಯು ಬಾರದೆ ರೈತ ಆಗಸಕೆ ನೋಡಿ ನೋಡಿ

ನಿರಾಸೆಯಿಂದ ತನ್ನ ಮಕ್ಕಳು ಕಾಡಿ ಕಾಡಿ

ಬೇಡಿದಾಗ ಸಾಲದ ಸುಳಿಗೆ ಸಿಕ್ಕು ಮರಮರ 

ಮರಗುತ ಮಡದಿ ಮಕ್ಕಳ ಸಾಕಲಾಗದೆ ದೇವರ ಬೇಡಿ ಬೇಡಿ

ಕೈಮುಗಿದು ಬೇಡುವನು ಕಾಪಾಡು ಕಾಪಾಡೆಂದು


ಅಂನ್ದದ ಚಂನ್ದದ ಸುನ್ದರ ಬಾಳನು

ಬನ್ದು ಭಾನ್ದವರ ಬನ್ದನವ ಬಿಟ್ಟು

ಸಾಲ್ದ ಸುಳ್ಗೆ ಕನ್ದಿದ ಕಣ್ ಬರ್ವಸೆ ಕಾಣ್ದೆ

ಬದುಕಲಿ ಸಮ್ಭ್ರಮ ಸನ್ತಸ ಕಾಣೋದ ಬಿಟ್ಟು

ಜೀವ ಜೀವ್ನ ತೊರೆಯ ಬಯಸ್ವನು ದಾತಾರ


ರೈತನ ಬೆಲೆ ಅರಿಯದೆ ಅರಿಯಂತೆ ಕಾಣುವರು

ನೆರೆ-ಬರಬಂದು ಅವನ ಬದುಕಿನ ಬರ ತೀರದು

ಬರೆಯಲು ಬಾರದ ರೈತ ಬರೆ ಹಾಕಿಕೊಳ್ಳುವನು

ಕಳೆ ಕೀಳುವ ರೈತನ ಪಾಡನು ಕೀಳಾಗಿ ಕಾಣಬಾರದು

ಗುಡಿಯ ಮುಂದೆ ಗುಡಿಸಿಯಾದರೂ ಜೀವ ಉಳಿಯಲಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಸಾ||ಯರಗೋಳ ತಾ||ಜಿ|| ಯಾದಗಿರಿ*

🌸 *೧೫೧ ನೇ ಗೋಷ್ಠಿ*


🌹 *ಬರಹಗಾರರ ಬಳಗ ರಾಜ್ಯ* *ಘಟಕ* 

           *ಹೂವಿನಹಡಗಲಿ* 


🌺 *ವಾರ-ಬಾನುವಾರ* 


🌼 *ದಿನಾಂಕ-೦೬.೦೯.೨೦೨೦* 

        *ಮತ್ತು ೦೭.೦೯.೨೦೨೦* 


🌻 *ವಿಷಯ-ತಮಗೆ ಇಷ್ಟವಾದ* *ವಿಷಯ* 

🌸 *ನಿರ್ವಹಣೆ-ಶ್ರೀ* *ಹೆಚ್.ರಾಠೋಡ್ ,ಶ್ರೀ ವಿರುಪಾಕ್ಷಪ್ಪ* *ಯು* *ಶ್ರೀ* *ನಾಗಭೂಷಣ ಆಯ್.ಎಸ* 

 *ಮಧುನಾಯ್ಕ.ಲಂಬಾಣಿ* 

 

 *ಪ್ರಕಾರ-ಅಲಂಕೃತ* 


*ಅಲಂಕೃತ ಕವನ ಸಂಕಲನಕ್ಕೆ ಕವಿತೆ ರಚಿಸುವ ಬಗ್ಗೆ*


ಸ್ನೇಹಿತರೇ ಇದನ್ನು ದಯವಿಟ್ಟು ಒಮ್ಮೆಪೂರ್ಣವಾಗಿ ಓದಿ


 *ಬಾನುವಾರ* ಮತ್ತು *ಸೋಮವಾರ* 

ಬರೆಯಬೇಕು

ವಿಷಯ ಉತ್ತಮವಾಗಿರಲಿ

ಬಲ್ಲವರಿಂದ ತಿಳಿದು ತಿದ್ದಿಕೊಂಡು ಎಲ್ಲರೂ ಬರೆಯಿರಿ ಭಾಗವಹಿಸಿ


 ೧. *ವೃತ್ತ್ಯನುಪ್ರಾಸ* :-ಈ ಪ್ರಕಾರದಲ್ಲಿ

ಪ್ರತೀ ಒಂದು ಸಾಲಿನಲ್ಲಿ ಒಂದು ಅಥವಾ ಎರಡು ಅಕ್ಷರಗಳು ಎರಡು ಅಥವಾ ಮೂರುಬಾರಿ ಪುನರಾವರ್ತನೆಯಾಗಿರಬೇಕು


ಉದಾ-

 *ಬದುಕಿನ ಭ್ರಮೆಯಲ್ಲಿ ಬಡಿದಾಡಿ* 

ಇಲ್ಲಿ *ಬ* ಎಂಬ ಅಕ್ಷರ ಮೂರು ಬಾರಿ ಬಂದಿದೆ.


ಐದು ಸಾಲು ಬರೆಯಬೇಕು


೧. *ಛೇಕಾನುಪ್ರಾಸ* -ಈ ಪ್ರಕಾರದಲ್ಲಿ ವ್ಯಂಜನ ಅಕ್ಷರಗಳು ಜೋಡಿ ಪದಗಳು ಪ್ರತೀ ಸಾಲಿನಲ್ಲಿ ಕನಿಷ್ಠ  ಒಂದು ಬಾರಿ ಬರಬೇಕು

ಉದಾ:-

 *ಮಾಡಿ ಮಾಡಿ* ಕೆಟ್ಟರೋ ಮನವಿಲ್ಲದೇ


ಇಲ್ಲಿ *ಮಾಡಿ ಮಾಡಿ* ಇದು ವ್ಯಂಜನಾಕ್ಷರಗಳ ಜೋಡಿ ಪದ


ಐದು ಸಾಲು ಬರೆಯಬೇಕು


 *೩.ಚಿತ್ರಕವಿತ್ವ* -ಈ ಪ್ರಕಾರದಲ್ಲಿ

ಪ್ರತೀ ಸಾಲಿನಲ್ಲಿ ಕನಿಷ್ಠ ಎರಡು ಬಾರಿ ಪದಗಳು ಒಂದೇತೆರನಾಗಿ

ಹೊಂದಿಕೆಯಾಗುವಂತೆ ಪದಗಳನ್ನು ಕೂಡಿಸಿ/ಬಂಧಿಸಿ ಬರೆಯಬೇಕು

ಉದಾ-

 *ಅನ್ದದ ತೋಟದಲಿ ಚೆನ್ದದ ಹೂಗಳು*


ಇಲ್ಲಿ ಅನ್ದ ಮತ್ತು ಚನ್ದ ಇವು ಹೋಲಿಕೆಯಾಗುವ ಪದಗಳು


ಐದುಸಾಲು ಬರೆಯಬೇಕು


 *೪.ಶ್ಲೇಷಾಲಂಕಾರ* :-ಈ ಪ್ರಕಾರದಲ್ಲಿ

ಪ್ರತೀ ಸಾಲಿನಲ್ಲಿ ಯಾವುದಾದರೊಂದು ಪದ ಕನಿಷ್ಠ ಎರಡು ಬಾರಿ ಬರಬೇಕು ಆದರೆ ಅರ್ಥ ಬೇರೆ ಬೇರೆ ಆಗಿರಬೇಕು

(ಪದ ಒಂದೇ ಅರ್ಥ ಬೇರೆ)


ಉದಾ:-

*"ಅರಿಯದು ಜನರಿಗೆ ಅರಿಗಳು ಯಾರೆಂದು"*


ಇಲ್ಲಿ 'ಅರಿ' ಎರಡುಬಾರಿ ಬಂದಿದೆ

'ಅರಿ' ಎಂದರೆ 'ತಿಳಿ' ಮತ್ತೊಂದು

'ಅರಿ' ಎಂದರೆ 'ವೈರಿ'

ಹೀಗೆ ಪದ ಒಂದೆ ಅರ್ಥ ಬೇರೆ 


ಐದು ಸಾಲು ಬರೆಯಬೇಕು


 *ಒಟ್ಟು ಇಪ್ಪತ್ತುಸಾಲಿನ ಒಂದು ಕವಿತೆ* 


ವಿಷಯ ನಿಮಗಿಷ್ಟವಾದದ್ದು

ಆದರೆ ರಾಜಕೀಯ, ವೈಯುಕ್ತಿಕ, ಸಮಾಜಕ್ಕೆ ವಿರೋಧವಾಗುವ ಕವಿತೆಗಳು ಬೇಡ


ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*


    

No comments:

Post a Comment

Videos