Wednesday, September 23, 2020

ಸ್ವರಚಿತ ಕವನ ೨೩/೦೯/೨೦೨೦

 ಕವನದ ಶೀರ್ಷಿಕೆ

*"ಮಗುವಿನ ನಗುವೇ ಎನಗೆ ಸರ್ವಸ್ವ"*


ಓ ಮಗುವೆ ನೀ ನಕ್ಕರೆ ಅದು ಸ್ವರ್ಗವೇ ಸರಿ

ಮಮತೆಯನ್ನು ನೀಡಿ ಮರೆಸುವರು ದುಃಖವ

ತನ್ಮಯತೆಯಲಿ ಜಾತಿಯ ಗಂಧವ ತಿಳಿಯದವರು

ಶ್ರೀಮಂತಿಕೆಯನು ಮೆರೆಯುವರು ತಮ್ಮ ಬಾಲಲೀಲೆಯಲಿ


ಮೇಲು ಕೀಳೆನ್ನದೆ ಕಲಿಯುವರು ಶಾಲೆಯನ್ನು

ಭಾವಿ ಪ್ರಜೆಗಳೇ ಆಗಿರುವರು ಎಳವೆಯಲ್ಲಿಯೇ

ಎಲ್ಲಾ ಗುಣಗಳ ಕಣಿಯೇ ಆಗಿ ಹೊರ‌ಹೊಮ್ಮುವರು

ಶಿಕ್ಷಕರ ಮಾತುಗಳೇ ಅವರಿಗೆ ಸ್ಪೂರ್ತಿಯ ಸೆಲೆಯಾಗಿದೆ


ಆಟವನ್ನು ಆಡುತ ಪಾಠವನು ಕಲಿಯುವರು

ಸರ್ವಾಂಗೀಣ ಅಭಿವೃದ್ಧಿಯ ಪಡೆಯುತ ನಲಿವರು

ಶಿಸ್ತು, ಸಂಯಮದಿಂದ *ಸಾಫಲ್ಯತೆ* ಪಡೆದು ಸಮಾಜದ

ಉತ್ತಮ ಪ್ರಜೆಯಾಗಿ ನಾಡ-ಗುಡಿಯನು ಕಾಯುವರು


ಸಮಗ್ರ ಇತಿಹಾಸವನು ಓದಿ ಜೀವದಿ ಏಳಿಗೆಯನು ಪಡೆಯುವರು

ಬಾಲ್ಯದಲ್ಲಿಯೇ ಕೆಲ ಬಾಲಕರು ವೀರತನವನು ತೋರುವರು

ಸಮಾಜದ ಒಳಿತನು ಬಯಸುತ ಅಪ್ರತಿಮ ಜಾಣತನ ತೋರುವರು

ಮಾನವೀಯ ಮೌಲ್ಯದಗಣಿಯಾದ ಮಗುವಿನ ನಗುವೇ ಎನಗೆ ಸರ್ವಸ್ವ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

ಯರಗೋಳ ತಾ||ಜಿ|| ಯಾದಗಿರಿ

ದಿನಾಂಕ ೧೪-೧೧-೨೦೧೯



🙏 *೧೬೮ ನೇ ಕವಿಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೩.೦೯.೨೦೨೦* 


🌸 *ವಾರ-ಬುಧುವಾರ* 


🌷 *ವಿಷಯ-ಸಾಫಲ್ಯ* 


🌻 *ನಿರ್ವಹಣೆ-ಶ್ರೀ ಕಾರ್ತಿಕ್ ಆಚಾರ* 


೧.ಕವಿತೆ ೧೬ ರಿಂದ ೨೦ ಸಾಲಿರಲಿ


೨.ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


೩.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


೪. ರಾಜಕೀಯ ಮತ್ತು ಸಮಾಜವಿರೋಧಿ, ಕವಿತೆಗಳು ಹಾಕಬೇಡಿ


೫. ನಿಮ್ಮ ಹೆಸರಿನೊಂದಿಗೆ (ಶ್ರೀ, ಕು, ಶ್ರೀಮತಿ ) ಸೂಕ್ತವಾದದನ್ನು ಸೇರಿಸಿ 


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*





No comments:

Post a Comment

Videos