Monday, September 14, 2020

ಸ್ವರಚಿತ ಕವನ ೧೪/೦೯/೨೦೨೦

 ಕವನದ ಶೀರ್ಷಿಕೆ

*"ಮೋಸ"*


ಇಂದು ಮನುಜ ಎಲ್ಲಿ ನೋಡಿದರೂ

ಮೋಸದ ಜಾಲಕ್ಕೆ ಬಲಿಯಾಗುವನು

ಮಗು ಚಿಕ್ಕಂದಿನಲ್ಲಿ ಹಾಲು ಕುಡಿಯುವ

ತಾಯಿ ಹಾಲಿನಲ್ಲಿ ಮಾತ್ರ ನೈಜತೆಯಿದೆ


ಕಿರಾಣಿ ದಿನಸಿ ಅಂಗಡಿಯಿಂದ 

ಅವನು ಬಳಸುವ ಎಲ್ಲಾ ವಸ್ತುಗಳು

ತಿನ್ನುವ ಕುಡಿಯುವ ಎಲ್ಲದರಲ್ಲೂ

ಮೋಸದ ಬಲೆ ಬೀಸಿದೆ ತನ್ನ ಬಾಹು


ಅಷ್ಟೇ ಏಕೆ ಮನುಜ ಮನುಜರ

ನಡುವೆ ಮಾತಿನ ಮೋಡಿಯ 

ಬಲೆಯ ಬೀಸಿ ಕೇಳುವರ ಬ್ಯಾಂಕ್

ಮಾಹಿತಿಯಿಂದ ಹಣ ಗಳಿಸುವರ


ಮನುಜನ ದುಡ್ಡು ಒಡವೆ ಲಾಟರಿಯ

ಆಮಿಷ ಒಡ್ಡುವ ಮೂಲಕ ಅತೀ

ಆಸೆಗೆ ಸಿಲುಕಿ ಕಾಣದ ಬಯಕೆಗೆ

ಬಲಿಯಾಗುವರು ಮೋಸದ ಜಾಲಕ್ಕೆ ಸಿಲುಕಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*



*✍️ಬರಹಗಾರರ ಬಳಗ ರಾಜ್ಯ ಘಟಕ* 

       *(ಹೂವಿನಹಡಗಲಿ)*

*---------------------------------*

   🌹 *೧೫೯ನೇ ಗೋಷ್ಠಿ*🌹

             🌼🌼🌼

   *ವಾರ-ಸೋಮವಾರ*

            🌸🌸🌸

*ದಿನಾಂಕ-೧೪.೦೯.೨೦೨೦*

             🌺🌺🌺

       *ವಿಷಯ - ಮೋಸ* 

             🌷🌷🌷

 *ನಿರ್ವಹಣೆ - ಶ್ರೀಮತಿ ಸಂಧ್ಯಾ ರಾವ್* 

              🌻🌻🌻

 

         *ಬಳಗದ ನಿಯಮಗಳು*

೧)೧೫ರಿಂದ ೨೦ಸಾಲುಗಳಿರಲಿ

೨)ಸಮಯ ಮುಂಜಾನೆ ಎಂಟರಿಂದ     

      ಆರರ ವರೆಗೆ.

೩)ನಿಮ್ಮ ಕವನಗಳನ್ನು ವಾಟ್ಸಪ್

    ಬರಹದಲ್ಲಿಯೇ ಹಾಕಬೇಕು.

೪)ಕವನದ ಕೊನೆಯಲ್ಲಿ ತಮ್ಮ

    ಹೆಸರನ್ನು ನಮೋದಿಸಿ.

೫)ಗೋಷ್ಠಿಯ ಮಧ್ಯೆ ಬೇರೆ ಕವನ

     ವಿಷಯ ಹಾಕಬಾರದು.

೬)ರಾಜಕೀಯ ಮತ್ತು ವ್ಯಕ್ತಿಗತ ಮತ್ತು

   ಸಾಮಾಜಿಕವಾಗಿ ತೊಂದರೆ ಆಗುವ

    ಕವಿತೆಗಳು ಬೇಡಾ.

೭)ಯಾವುದೇ ಕಾರಣಕ್ಕೂ ಬೇರೆ

   ಭಾಷೆಯಲ್ಲಿ ಕಾಮೆಂಟ್ಸ್ ಮಾಡಬೇಡಿ.

    ಮಾಡಿದರೆ, ಮತ್ತು ಇಲ್ಲಿಯ

    ನಿಯಮಗಳನ್ನು ಮುರಿದರೆ.

    ಬಳಗದಿಂದ ತೆಗೆಯಲಾಗುವುದು.


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*


No comments:

Post a Comment

Videos