Tuesday, September 1, 2020

ಸ್ವರಚಿತ ಕವನ ೦೧/೦೯/೨೦೨೦

 ಕವನದ ಶೀರ್ಷಿಕೆ

"ಶ್ರೀ ರಾಮನ ಸ್ವಾಗತ"


ಶ್ರೀರಾಮನ ಸ್ವಾಗತಕೆ ಪಳ ಪಳ ಹೊಳೆಯುವ

ಮುತ್ತು ರತ್ನಗಳ ತೋರಣ ಸಾಲು ಸಾಲಾಗಿ

ಕಟ್ಟಿ ಬಿಂದಿಗೆ ಬಿಂದಿಗೆ ನೀರನು ತುಂಬಿಟ್ಟು

ಆತುರ ಆತುರವಾಗಿ ಓಡಾಡುವ ಜನಗಳು


ದಶರಥನು ದೊಡ್ಡ ದೊಡ್ಡ ಕುಂಭಗಳಲಿ

ತುಪ್ಪವನು ಲೆಕ್ಕ ಲೆಕ್ಕವಿಲ್ಲದಷ್ಟು ತುಂಬಿದ

ಸಾವಿರ ಸಾವಿರ ಸಾಧು ಸಂತರು ಕೂಡಿದರು

ಮನೆ ಮನೆಗಳಲ್ಲೂ ಗಮಿಗಮಿಸುವ ತಿನಿಸು


ಅಯೋಧ್ಯೆ ಮದುವೆಯ ಮದುವಣಗಿತ್ತಿಯ

ಹಾಗೆ ತರತರಹದ ವಾದ್ಯ ಓಲಗಗಳು ಬಾರಿಸುತ

ಢಂ ಢಂ ಢಂ ಢಂ ಎಂದು ಬಿಡದೆ ಬಾರಿಸುತಲೂ

ಹೆಂಗೆಳೆಯರು ನಾಟ್ಯ ನಾಟ್ಯ ವಿನೋದಗಳಲಿ


ವಿಪ್ರರಿಗೆ ಲಕ್ಷ ಲಕ್ಷ ಗೋವುಗಳನ್ನು ದಾನ ಮಾಡುತ

ನಿಂತರು ನಾಡು ನಾಡಿನಿಂದ ಸಾಮಂತರು

ಸಾಮ್ರಾಟರು  ದೇವ ದೇವತೆಗಳ ರೂಪಿನಂತೆ

ತಳತಳ ಹೊಳಯುವ ಶ್ರೀ ರಾಮನ ಸ್ವಾಗತಿಸಿದರು


ರಚನೆ

ಯಗುಮಾಶ

*ಶರಣಬಸಪ್ಪ ಎಂ ಗುಳೇದ*


🌹 *೧೪೬ನೇ ಗೋಷ್ಠಿ*


🌺 *ಬರಹಗಾರರ ಬಳಗ ರಾಜ್ಯ* *ಘಟಕ  ಹೂವಿನಹಡಗಲಿ*


🌸 *ವಾರ- ಮಂಗಳವಾರ*


🌷 *ದಿನಾಂಕ-೦೧.೦೯.೨೦೨೦*


🌻 *ವಿಷಯ-ತಮಗಿಷ್ಟವಾದ ವಿಷಯ*


☘️ *ಪ್ರಕಾರ-ಛೇಕಾನುಪ್ರಾಸ*


💐 *ನಿರ್ವಹಣೆ-ಶ್ರೀ ಕುಸುಮಾಕರ ಅಂಬೆಕಲ್ಲು* 


೧.ಛೇಕಾನುಪ್ರಾಸ ಎಂದರೆ

ಪದ್ಯದ ಪ್ರತೀ ಸಾಲಿನಲ್ಲಿ ವ್ಯಂಜನಾಕ್ಷರಗಳ ಜೋಡಿ ಪದಗಳು ಬರಬೇಕು

೨ *.ಮಾಡಿ ಮಾಡಿ* ಕೆಟ್ಟರು

   *ನೀಡಿ ನೀಡಿ* ಕೆಟ್ಟರು

   *ಕುಂತು ಕುಂತು* ಸಾಕಾಯ್ತು

   *ನಿಂತು ನಿಂತು* ಸಾಕಾಯ್ತು

೩.ಸಾಲಿನಲ್ಲಿ ಎಲ್ಲಿಯಾದರೂ ಬರಬಹುದು

೪.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ

೫.ನಾಲ್ಕು ಸಾಲಿನ ನಾಲ್ಕು ಅಥವಾ ಐದು ಪದ್ಯ ಬರೆಯಿರಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*




No comments:

Post a Comment

Videos