Monday, September 28, 2020

ಸ್ವರಚಿತ ಕವನ ೨೨/೦೯/೨೦೨೦

 ಕವನದ ಶೀರ್ಷಿಕೆ

*"ಶುಭ-ಅಶುಭ"*


ನಮ್ಮ ಜನ ಬೆಕ್ಕನ್ನು ಅಶುಭ ಎನ್ನುವರು

ತಮ್ಮ ಮನೆಯಲ್ಲಿ ಬೆಕ್ಕನ್ನೇ ಸಾಕುವರು

ಇಮ್ಮನಗಳು ನಮ್ಮಲ್ಲಿವೆ ಯಾವುದು ಶುಭ

ನೆಮ್ಮದಿ ಶಾಂತಿ ಇರದೆ ಇದ್ರೇ ಅದೇ ಅಶುಭ


ಮನುಜರು ಮುಂಗುಸಿಯ ಮುಖ ಶುಭವೆಂದು

ದಿನ ನಿತ್ಯ ಮುಂಗುಸಿಯ ಮುಂದೆ ಕೂರಲಾದೀತೆ

ಮನೆ ಮುಂದೆ ಕಾಗೆಯು ಕರೆದರೆ ನೆಂಟರಾಗಮ

ತನ್ನ ತಲೆಯು ಕಾಗೆ ಬಡಿದರೆ ಅಶುಭ ಎನ್ನುವರು


ಹಗಲು ರಾತ್ರಿ ಎನ್ನದೆ ಬಾನು ನೇಸರರು

ಜಗವ ಬೆಳಗದೆ ಶುಭ-ಅಭದ ನೆವ ಹೇಳಿ

ತಗಾದೆ ತೆಗೆದರೆ ಕಾಯುವವರಾರು ಯೋಚಿಸಿ

ಖಗ ಪಕ್ಷಿ ಪ್ರಾಣಿಗಳು ಕೇಳುವವೆ ಶಕುನವನ್ನು


ಮೂಢ ನಂಬಿಕೆಯ ಬಿಟ್ಟು ನೈಜತೆಯನು ಅರಿ

ಮಡಿ ಮೈಲಿಗೆ ಎನ್ನದೆ ಮನವ ಶುದ್ಧಿಯ ಮಾಡಿ

ನಡೆ ದಿಟ್ಟ ನಿರ್ಧಾರದಿ ಪಡೆ ಯಶಸ್ಸು ಆಗ ಎಲ್ಲರೂ

ನೋಡುವರು ನಿನ್ನೆಡೆಗೆ ಶುಭ-ಅಶುಭವ ಲೆಕ್ಕಿಸದೇ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*



🙏 *೧೬೭ ನೇ ಗೋಷ್ಠಿ* 


✍️ *ಬರಹಗಾರರ ಬಳಗ ರಾಜ್ಯ* *ಘಟಕ* 

        *ಹೂವಿನಹಡಗಲಿ* 


🌹 *ದಿನಾಂಕ-೨೨.೦೯.೨೦೨೦* 


🌸 *ವಾರ-ಮಂಗಳವಾರ* 


🌷 *ವಿಷಯ-ಶುಭ-ಅಶುಭ* 


🌻 *ನಿರ್ವಹಣೆ-ಕು.ರೇಣುಕಾ.ಎಮ್* 

೧.ಕವಿತೆ ೧೬ ರಿಂದ ೨೦ ಸಾಲಿರಲಿ


೨.ಗೋಷ್ಟಿಯ ಮಧ್ಯೆ ಬೇರೆ ಏನನ್ನೂ ಹಾಕಬೇಡಿ


೩.ಸಮಯಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


೪.ರಾಜಕೀಯ,ಸಮಾಜವಿರೋಧಿ ಕವಿತೆಗಳು ಬೇಡ


 *ಬನ್ನಿ* 

 *ಬರೆಯೋಣ* 

 *ಬರೆಸೋಣ* 

 *ಕಲಿಯೋಣ* 

 *ಕಲಿಸೋಣ* 


🙏 *ಮಧುನಾಯ್ಕ.ಲಂಬಾಣಿ* 

     *ಬ.ಬ.ರಾ.ಘ.ಹೂ.ಹಡಗಲಿ*





No comments:

Post a Comment

Videos