Saturday, September 12, 2020

ಸ್ವರಚಿತ ಕವನ ೧೨/೦೯/೨೦೨೦

 ಕವನದ ಶೀರ್ಷಿಕೆ

"ಕೈಯಲ್ಲಿ ಹಣವಿದ್ದರೆ"


ಮನುಷ್ಯ ಎಷ್ಟೇ ದಷ್ಟಪುಷ್ಟವಾಗರಲಿ

ಮನೆತನ ದೊಡ್ಡದಿರಲಿ ಸಣ್ಣದಿರಲಿ

ತನುಮನ ಶುದ್ಧ ಇರಲಿ ಇಲ್ಲದಿರಲಿ

ತನ್ನಲ್ಲಿ ಗಾಂಧಿ ನೋಟು ಜೊತೆಗಿರಲಿ


ಚಿಕ್ಕವರಾಗಿರಲಿ ದೊಡ್ಡವರಾಗಲಿ

ತಕ್ಕಮಟ್ಟಿಗೆ ಓದಿರಲಿ ಓದಿರದಿರಲಿ

ಅಕ್ಕ,ತಂಗಿ,ಅಣ್ಣ,ತಮ್ಮ ಇರಲಿ ಇಲ್ಲದಿರಲಿ

ಅಕ್ಕರೆಯ ಪ್ರೀತಿ ಸಿಗಲು ಹಣ ಜೋಬಲ್ಲಿರಲಿ


ನಿನಗೆ ಬಂಧುಗಳು ಇರಲಿ ಇಲ್ಲದಿರಲಿ

ನೀನು ಸುಂದರವಾಗಿ ಇರು ಇಲ್ಲದಿದ್ದರೂ

ನೀನು ಸಹಾಯ ಮಾಡು ಮಾಡದಿರು

ನಿನ್ನಲ್ಲಿ ಹಣವೊಂದಿದ್ದರೆ ಎಲ್ಲರು ನಿನ್ನವರು


ಕೈಯಲ್ಲಿ ಹಣವಿದ್ದರೆ ಎಲ್ಲವೂ ಸಾಧ್ಯ ಎಂಬ

ಮಾಯಾ ‌ಬಜಾರು ನಂಬಿ ಅಹಂಕಾರ ತೊರದೆ

ಕಾಯಕ ನಿರತರಾದ ಯಾರೇ ಇರಲಿ ಗೌರವಿಸು

ದಯೆ ಕರುಣದಿ ನಡೆ ಇದೆ ಜನ್ಮಕಡೆ ಎಂಬುದ ತಿಳಿ


ರಚನೆ

ಯಗುಮಾಶ

*ಶ್ರೀ ಶರಣಬಸ್ಸಪ್ಪ ಎಂ ಗುಳೇದ*


🌸 *೧೫೭ನೇ ಗೋಷ್ಠಿ*


🌻 *ಬರಹಗಾರರ ಬಳಗ ರಾಜ್ಯ* *ಘಟಕ* 

          *ಹೂವಿನಹಡಗಲಿ*


🌼 *ವಾರ-ಶನಿವಾರ*


🌸 *ದಿನಾಂಕ-೧೨.೦೯.೨೦೨೦*


🌹 *ವಿಷಯ-ಝಣಝಣಕಾಂಚಣ* *(ಯಾವುದಾದರೊಂದು*     *ಪ್ರಕಾರದಲ್ಲಿ ಬರೆಯಿರಿ)* 


🍀 *ನಿರ್ವಹಣೆ-ಶ್ರೀ ಮಾಲತೇಶ ಚಳಗೇರಿ* 


೧.ಕವಿತೆಯು ೧೬ ರಿಂದ ೨೦ ಸಾಲಿರಲಿ

೨.ಸಮಯ ಮುಂಜಾನೆ ೮ ಸಂಜೆ ೬ ರವರೆಗೆ

೩.ರಾಜಕೀಯ ಸಮಾಜವಿರೋಧಿ ಕವಿತೆಗಳು ಬೇಡ

೪.ಗೋಷ್ಠಿಯ ಮಧ್ಯೆ ಬೇರೆ ವಿಷಯ ಹಾಕಬೇಡಿ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*




No comments:

Post a Comment

Videos