ಕವನದ ಶೀರ್ಷಿಕೆ :
"ಶಿಕ್ಷಕ"
ಗುರಿಯಮುಟ್ಟಲು ಸದಾ ನೆರವು
ನೀಡುವ ಕಾಯಕವ ನಿತ್ಯ ಮಾಡುವ
ಸಲಹೆ ಸೂಚನೆ ನೀಡುತ ವಿದ್ಯಾರ್ಥಿಗಳ
ಏಳಿಗೆಗೆ ಹಂಬಲಿಸುವ ಹೃದಯ ಶಿಕ್ಷಕ
ಜೀವನದುದ್ದಕ್ಕೂ ಮಾರ್ಗದರ್ಶನ
ಮಾಡುತ ಖುಷಿಯ ಹಂಚುತ
ಸದ್ಗುಣ,ಸದ್ವಿನಯವ ಕಲಿಸುವರು
ಮಾನವೀಯ ಮೌಲ್ಯವ ಬೆಳೆಸುವರು
ಹತ್ತು ಹಲವು ಕಡೆ ಜ್ಞಾನ ಪಡೆದು
ವಿದ್ಯದ ಗಣಿಯಾಗಿಸುವರು ಮಕ್ಕಳ
ಭುವಿಯಿಂದ ಗಗನದೆಡೆಗೆ ನಡೆವ
ಹಲವು ವಿಚಾರಗಳ ಕಲಿಸುವರು
ತಾಯಿತಂದೆಯರ ಪ್ರೀತಿಯನು ನೀಡುತ
ಮಗುವಿಗೆ ಗೆಳೆಯನಾಗಿ ಬಂಧುವಾಗಿ
ಮಕ್ಕಳ ಮೆಚ್ಚಿನ ನಾಯಕನಾಗಿ
ಶಿಕ್ಷಕರು ಸದಾ ಸ್ವಾಭಿಮಾನ ಬೆಳಸುವರು
ರಚನೆ
ಯಗುಮಾಶ
ಶರಣಬಸಪ್ಪ ಎಂ ಗುಳೇದ
🌸 *೧೫೦ ನೇ ಗೋಷ್ಠಿ*
🌹ಬರಹಗಾರರ ಬಳಗ ರಾಜ್ಯ ಘಟಕ
ಹೂವಿನಹಡಗಲಿ
🌺ವಾರ-ಶನಿವಾರ
🌼ದಿನಾಂಕ-೦೫.೦೯.೨೦೨೦
🌻ವಿಷಯ-ಶಿಕ್ಷಕ ದಿನಾಚರಣೆಯ
ಅಂಗವಾಗಿ
ಗುರುವಂದನೆ
ಪ್ರಕಾರ-ಚುಟುಕು
🌸 *ನಿರ್ವಹಣೆ-ಶ್ರೀಮತಿ ಜ್ಯೋತಿ ಎನ್*
೧.ಚುಟುಕು ನಾಲ್ಕು ಸಾಲು
೨.ಗುರುಗಳಿಗೆ ವಂದಿಸುವ ಕುರಿತು
ನಾಲ್ಕು ಅಥವಾ ಐದು ಚುಟುಕು
ಬರೆಯಬೇಕು
೩.ಸಮಯ ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ
*ಮಧುನಾಯ್ಕ.ಲಂಬಾಣಿ*
*ಬ.ಬ.ರಾ.ಘ.ಹೂ.ಹಡಗಲಿ*
No comments:
Post a Comment