Saturday, September 5, 2020

ಸ್ವರಚಿತ ಕವನ ೦೨/೦೧/೨೦೧೪

 ಕವನದ ಶೀರ್ಷಿಕೆ :

"ನನ್ನ ಮನ"


ಮಿಡಿಯುತ್ತಿದೆ ನನ್ನ ಮನ

ಹೊಸ ಆಶೆಯ ಕಟ್ಟಿ ಅದು

ನನಸಾಗಲೆಂದು ಬಯಸುತ್ತ


ಹಂಬಲಿಸುತ್ತಿದೆ ನನ್ನ ಮನ

ಮಕ್ಕಳ ಮಧುರ ಭಾವನೆ

ಅರಿಯಲು ಬಯಸುತ್ತ


ಕಾಯುತ್ತಿದೆ ನನ್ನ ಮನ

ಮಕ್ಕಳ ಸಾಧನೆಯ ಸವಿ

ಜೇನು ಹೀರಲು ಬಯಸುತ್ತ


ಕಾತರಿಸುತ್ತಿದೆ ನನ್ನ ಮನ

ಗುರಿ ಮುಟ್ಟುವ ಮಕ್ಕಳಿಗೆ ಅಳಿಲು ಸೇವೆ ಸಲ್ಲಿಸಿ

ಪಾವನರಾಗಲು ಬಯಸುತ್ತ


ಚೇತರಿಸಿಕೊಳ್ಳುತ್ತಿದೆ ನನ್ನ ಮನ

ಮಕ್ಕಳನ್ನು ಸಜ್ಜುಗೊಳಿಸಿ

ಪರೀಕ್ಷೆಯಲ್ಲಿನ ಫಲ ಬಯಸುತ್ತ


ಆಕಾಶದೆತ್ತರಕ್ಕೆರಲು ಬಯಸಿತು ನನ್ನ ಮನ

ಮಕ್ಕಳೊಂದಿಗೆ ಸ್ವಚ್ಛಂದವಾಗಿ ಆಡಲು

ಅದು ಸಾಧನೆಯ ಮೇರೆಯಂಚನು ಮೀರ ಬಯಸುತ್ತ


ರಚನೆ :

ಯಗುಮಾಶ

*ಶರಣಬಸಪ್ಪ ಎಂ ಗುಳೇದ*

*ಯರಗೋಳ ತಾ||ಜಿ|| ಯಾದಗಿರಿ*



No comments:

Post a Comment

Videos