Wednesday, September 2, 2020

ಸ್ವರಚಿತ ಕವನ ೦೨/೦೯/೨೦೨೦

 ಕವನದ ಶೀರ್ಷಿಕೆ :

"ಹೆಣ್ಣು ಜಗದ ಕಣ್ಣು"

(ಹಯ ಪ್ರಾಸ)


ಚಿನ್ನ ಹೆಣ್ಣು ಜಗದ ಕಣ್ಣು ಮರೆಯದಿರು

ಕನ್ನಡಿಯ ಪ್ರತಿಬಿಂಬ ಅವಳು

ಸನ್ನಡತೆಯನು ಬೋಧಿ‌ಸುವವಳು

ಚನ್ನುಡಿಯನು ಮಕ್ಕಳಿಗೆ ಕಲಿಸುವವಳು


ತನ್ನನು ನಂಬಿದವರ ಕಾಪಾಡುವವಳು

ಬೆನ್ನಿಗೆ ಬಿದ್ದ ಅಣ್ಣತಮ್ಮಂದಿರನು 

ತನ್ನ ಕುಟುಂಬದವರನು ಆರೈಸುವಳು

ಅನ್ನವನಿಕ್ಕಿ ಮಕ್ಕಳ ಪೊರೆವವಳು


ಅಕ್ಕ ತಮ್ಮ ತಂಗಿಯರನ್ನು ಪ್ರೀತಿಯಿಂದ

ಪಕ್ಕದ ಮನೆಯವರೊಂದಿಗೆ ಅನುನಯದಿ

ಚಿಕ್ಕವಳಾದರೂ ಅತ್ತೆ ಮಾವರ ಸೇವೆ ಮಾಡುತ

ತಕ್ಕದನು ಗಂಡನಿಗೆ ಸಲಹೆ ನೀಡುವಳು


ಗೆದ್ದು ಬರುವಂತೆ ಮಕ್ಕಳಿಗೆ ಕಲಿಸುವಳು

ಸದ್ದು ಗದ್ದಲವ ಮಾಡಿದವರಿಗೆ ಗುರುವಾಗಿ

ತಿದ್ದಿ ಸರಿದಾರಿಗೆ ತರುವವಳು ತನ್ನ ಹಿಂದೆ

ಬಿದ್ದವರಿಗೆ ಬುದ್ಧಿ ಕಲಿಸಿದೆ ಬಿಡುವವಳಲ್ಲ


ರಚನೆ

ಯಗುಮಾಶ

*ಶರಣಬಸಪ್ಪ ಎಂ ಗುಳೇದ*



*೧೪೭ನೇ ಗೋಷ್ಠಿ*

            🌷🌷

 *ಬರಹಗಾರರ ಬಳಗ ರಾಜ್ಯ ಘಟಕ* 

        *ಹೂವಿನಹಡಗಲಿ* 

             🌹🌹

       *ವಾರ-ಬುಧವಾರ* 

              🌸🌸

   *ದಿನಾಂಕ-೦೨.೦೯.೨೦೨೦* 

              ☘️☘️

 *ವಿಷಯ-ತಮಗೆ ಇಷ್ಟವಾದ್ದು* 

              🌻🌻

     *ಪ್ರಕಾರ-ಹಯಪ್ರಾಸ* 

              🌼🌼

 *ನಿರ್ವಹಣೆ-ಶ್ರೀ ಎ ಎಸ್ ಕೆ ಸ್ವಾಮಿ* 

              🌿🌿

 *ಹಯ ಪ್ರಾಸ ಎಂದರೆ* 

ಪ್ರಾಸಾಕ್ಷರವು ಸಜಾತಿಯ ದ್ವಿತ್ವದಿಂದ ಅಂದರೆ ಸಜಾತಿ ಪದದ ಒತ್ತಕ್ಷರದಿಂದ ಕೂಡಿದ್ದರೆ ಅದನ್ನು ಹಯಪ್ರಾಸ ಎನ್ನು ತ್ತೇವೆ

ಉದಾ...

*ನಾನೊಂಟಿ ಅಷ್ಟೇ....*

ಇದ್ದ ಮನವೇ ನೀನಿಗ ಕೇಳು 

ಕದ್ದು ಹೋಗುತ್ತಿರುವೆ ಎಲ್ಲಿಗೆ 

ಸುದ್ದಿಯಾಗುವ ಮನಸೆಕೆ ನಿನಗೆ.....

ಎದ್ದು ಬಾರಲೇ ಬೇಗ ರಮಣಿಸು

ಸದ್ದೆ ಮಾಡದ ಹಾಗೆ ಆವರಿಸು.....


ಸನ್ನೆಯಲ್ಲಿಯೇ ಕರೆಯುತಿಹನು

ನನ್ನಿನಿಯನು ಕಣ್ಣಂಚಲೇ....

ಮೊನ್ನೆಯಿಂದಲೇ ತಾ ಸೆಳೆಯುತಿಹನು...

ನನ್ನ ಬಳಿ ಬಂದು ಸ್ಪರ್ಶಿಸು ಎಂದು

ಖನ್ನ ಹೊಡೆದ ಹೃದಯವಿಂದು ಹಾರುತಿದೆ...


ಸಣ್ಣ ತಪ್ಪಿಗಾಗಿ ಈ ಮುನಿಸೆಕೆ ಒಲವೇ

ಹೆಣ್ಣೇ ನೀನನ್ನ ನಾಡಿ ಮಿಡಿತದ ಗೆಲುವೇ

ಕಣ್ಣಂಚಲಿ ಕಂಬನಿ ಬಾರದ ನೋವೇ.....

ಹೆಣ್ಣು ಈ ಸಮಾಜಕೆ ನೀನೆಂದು ಹೊನ್ನು

ಮಣ್ಣು ಸೇರುವ ಹೊತ್ತಲ್ಲಿ ಮನ್ನಿಸು ನನ್ನನು...


ಗುಡ್ಡದ ಮ್ಯಾಲ ಕೂತು ನೋಡುವೆ ನಿನ್ನ

ಅಡ್ಡ ಹಾಕಲೆಂದ್ದಿದೆ ನಿನ್ನನ್ನು ನನ್ನೀ ಮನ

ಕಡ್ಡಿಕೊರೆದರು ಈ ಹೃದಯವು ಮೌನ

ಸೆಡ್ಡು ಹೊಡೆದು ಹೋದರೆ ನಡುಹಾದಿಗೆ ಬಿಳುವೆ

ಅಡ್ಡಿ ಇಲ್ಲ ಗೆಳತಿ ನೀನು ಹೊದರೆ ನಾನೊಂಟ್ಟಿ ಅಷ್ಟೇ.


            *ಎ.ಎಸ್.ಕೆ.ಸ್ವಾಮಿ...*


ನಾಲ್ಕು ಸಾಲಿನ ನಾಲ್ಕು ಪದ್ಯ ಬರೆಯಬೇಕು

ಮುಂಜಾನೆ ಎಂಟರಿಂದ ಸಂಜೆ ಆರರವರೆಗೆ


 *ಮಧುನಾಯ್ಕ.ಲಂಬಾಣಿ* 

 *ಬ.ಬ.ರಾ.ಘ.ಹೂ.ಹಡಗಲಿ*





No comments:

Post a Comment

Videos